ಜಿಲ್ಲೆಯಲ್ಲಿಯೇ ಒಂದು ಕಡೆ ನೆರೆ ಹಾವಳಿ ಎದುರಾದರೆ, ಇನ್ನೊಂದು ಕಡೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ತಲೆ ದೋರಿದೆ. ಬಿತ್ತಿದ ಬೀಜಗಳು ಮಳೆಯಿಲ್ಲದೇ ಕಮರಿ ಹೋಗುವ ಭೀತಿಯಲ್ಲಿ ರೈತರಿದ್ದಾರೆ. ಮಳೆ ಬರುತ್ತದೆ ಎಂದು ರೈತರು ಆಗಸದ ಕಡೆಗೆ ಮುಖ ಮಾಡಿ ಹಾರಿ ಹೋಗುವ ಮೋಡಗಳನ್ನು ನೋಡುತ್ತಾ ಮರಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಆಗಾಗ ತುಂತುರು ಮಳೆ ಬಿಟ್ಟರೆ, ವಾಡಿಕೆಯಂತೆ ಮಳೆಯಾಗಿಲ್ಲ.