<p><strong>ಚಿಕ್ಕೋಡಿ:</strong> ಎಐ ತಂತ್ರಜ್ಞಾನವನ್ನು ಕಾರ್ಖಾನೆಯ ಹಿತಕ್ಕೆ ಬಳಸಬೇಡಿ. ರೈತರ ಅನುಕೂಲಕ್ಕೆ ಬಳಸಿ, ತಂತ್ರಜ್ಞಾನ ಆಧರಿಸಿ ತೂಕದ ಯಂತ್ರಗಳನ್ನು ಆನಲೈನ್ ಮಾಡಬೇಕು" ಎಂದು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಅಧ್ಯಕ್ಷ , ಮಾಜಿ ಸಂಸದ ರಾಜು ಶೆಟ್ಟಿ ಹೇಳಿದರು.</p>.<p>ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ’ಕರ್ನಾಟಕ ರಾಜ್ಯದಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆಗಾಗಿ ಆಂದೋಲನ ನಡೆಯಲಿದೆ. ಕಾರ್ಖಾನೆಯ ಮಾಲೀಕರು ಲೂಟಿಕೋರರು, ಸರ್ಕಾರ ಲೂಟಿಕೋರರ ಬೆನ್ನಿಗೆ ನಿಂತಿದೆ. ರೈತರ ಬೆನ್ನಿಗೆ ನಿಂತಿಲ್ಲ’ ಎಂದರು.</p>.<p>ಕರ್ನಾಟಕ ರೈತ ಸಂಘದ ಅಧ್ಯಕ್ಷ ಗಣೇಶ ಇಳಿಗಾರ ಮಾತನಾಡಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ರೈತರನ್ನು ವಂಚಿಸಿದ್ದಾರೆ.ಕಬ್ಬು ಬೆಳೆಗಾರರಿಗೆ ಸೂಕ್ತ ದರ ನೀಡುವಂತೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಳಿ ತೆರಳಲಾಗುವುದು" ಎಂದರು.</p>.<p>ಅ.16ರಂದು ಮಹಾರಾಷ್ಟ್ರದ ಜೈಸಿಂಗಪುರದಲ್ಲಿ ನಡೆಯುವ 24ನೇ ಕಬ್ಬು ಸಮ್ಮೇಳನದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ವಾಭಿಮಾನಿ ಶೇತ್ಕರಿ ಸಂಘಟನೆಯಿಂದ ರೈತರಲ್ಲಿ ಮನವಿ ಮಾಡಿಕೊಳ್ಳಲಾಯಿತು.</p>.<p>ಧರಿಖಾನ ಅಜ್ಜನವರ ಸಾನ್ನಿಧ್ಯದಲ್ಲಿ ನಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ನಾಸೋ ಪವಾರ ವಹಿಸಿದ್ದರು. ರಾಜು ಖಿಚಡೆ, ತಾತ್ಯಾಸಾಹೇಬ ಕೇಸ್ರೆ, ಬಂಟಿ ಪಾಟೀಲ, ಶೀತಲ ಸೋಬಾನೆ, ಅಭಿಜಿತ್ ಬಿರನಾಳೆ, ರಮೇಶ ಪಾಟೀಲ, ಅಕ್ಷಯ ಪವಾರ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ:</strong> ಎಐ ತಂತ್ರಜ್ಞಾನವನ್ನು ಕಾರ್ಖಾನೆಯ ಹಿತಕ್ಕೆ ಬಳಸಬೇಡಿ. ರೈತರ ಅನುಕೂಲಕ್ಕೆ ಬಳಸಿ, ತಂತ್ರಜ್ಞಾನ ಆಧರಿಸಿ ತೂಕದ ಯಂತ್ರಗಳನ್ನು ಆನಲೈನ್ ಮಾಡಬೇಕು" ಎಂದು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಅಧ್ಯಕ್ಷ , ಮಾಜಿ ಸಂಸದ ರಾಜು ಶೆಟ್ಟಿ ಹೇಳಿದರು.</p>.<p>ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ’ಕರ್ನಾಟಕ ರಾಜ್ಯದಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆಗಾಗಿ ಆಂದೋಲನ ನಡೆಯಲಿದೆ. ಕಾರ್ಖಾನೆಯ ಮಾಲೀಕರು ಲೂಟಿಕೋರರು, ಸರ್ಕಾರ ಲೂಟಿಕೋರರ ಬೆನ್ನಿಗೆ ನಿಂತಿದೆ. ರೈತರ ಬೆನ್ನಿಗೆ ನಿಂತಿಲ್ಲ’ ಎಂದರು.</p>.<p>ಕರ್ನಾಟಕ ರೈತ ಸಂಘದ ಅಧ್ಯಕ್ಷ ಗಣೇಶ ಇಳಿಗಾರ ಮಾತನಾಡಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ರೈತರನ್ನು ವಂಚಿಸಿದ್ದಾರೆ.ಕಬ್ಬು ಬೆಳೆಗಾರರಿಗೆ ಸೂಕ್ತ ದರ ನೀಡುವಂತೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಳಿ ತೆರಳಲಾಗುವುದು" ಎಂದರು.</p>.<p>ಅ.16ರಂದು ಮಹಾರಾಷ್ಟ್ರದ ಜೈಸಿಂಗಪುರದಲ್ಲಿ ನಡೆಯುವ 24ನೇ ಕಬ್ಬು ಸಮ್ಮೇಳನದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ವಾಭಿಮಾನಿ ಶೇತ್ಕರಿ ಸಂಘಟನೆಯಿಂದ ರೈತರಲ್ಲಿ ಮನವಿ ಮಾಡಿಕೊಳ್ಳಲಾಯಿತು.</p>.<p>ಧರಿಖಾನ ಅಜ್ಜನವರ ಸಾನ್ನಿಧ್ಯದಲ್ಲಿ ನಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ನಾಸೋ ಪವಾರ ವಹಿಸಿದ್ದರು. ರಾಜು ಖಿಚಡೆ, ತಾತ್ಯಾಸಾಹೇಬ ಕೇಸ್ರೆ, ಬಂಟಿ ಪಾಟೀಲ, ಶೀತಲ ಸೋಬಾನೆ, ಅಭಿಜಿತ್ ಬಿರನಾಳೆ, ರಮೇಶ ಪಾಟೀಲ, ಅಕ್ಷಯ ಪವಾರ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>