ಗೋಕಾಕ | ರಸ್ತೆ ಕಾಮಗಾರಿ ಗುಣಮಟ್ಟ ತೆರೆದಿಟ್ಟ ಮಳೆ

ಗೋಕಾಕ: ಭಾನುವಾರ ಬೆಳಗಿನ ಜಾವ ಅರ್ಧ ತಾಸು ಸುರಿದ ಧಾರಾಕಾರ ಮಳೆ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪೆರೆಯುವ ಜೊತೆಗೆ, ಇಲ್ಲಿ ಈಚೆಗಷ್ಟೇ ನಡೆದಿದ್ದ ಬಸ್ ನಿಲ್ದಾಣದ ರಸ್ತೆ ಅಭಿವೃದ್ಧಿಯ ಕಾಮಗಾರಿಯ ಗುಣಮಟ್ಟವನ್ನೂ ತೆರದಿಟ್ಟಿದೆ.
ರಸ್ತೆಗಿಂತಲೂ ಚರಂಡಿಯ ಎತ್ತರ ಹೆಚ್ಚಿಸಿದ್ದರಿಂದ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಯಲ್ಲೇ ಸಂಗ್ರಹಗೊಂಡಿದ್ದು ಕಂಡುಬಂತು. ನಗರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳ ಮೂಲಕ ಸಾಗುವಾಗ ಇದನ್ನು ಗಮನಿಸಬಹುದಾಗಿದೆ.
‘ಕಳಪೆ ಕಾಮಗಾರಿ ನಡೆದಿರುವುದು ನಗರಸಭೆ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ?’ ಎಂದು ನಾಗರಿಕರು ಕೇಳುತ್ತಿದ್ದಾರೆ. ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.