<p><strong>ಬೆಳಗಾವಿ</strong>: ಅಕ್ಷಯ ತೃತೀಯ ಅಂಗವಾಗಿ ನಗರ ಮತ್ತು ತಾಲ್ಲೂಕು ಕೇಂದ್ರ ಮೊದಲಾದ ಸ್ಥಳಗಳಲ್ಲಿ ಚಿನ್ನ, ಬೆಳ್ಳಿ, ವಜ್ರಾಭರಣಗಳು ಮತ್ತು ವಾಹನಗಳ ಖರೀದಿ ಭರಾಟೆ ಮಂಗಳವಾರ ಜೋರಾಗಿತ್ತು.</p>.<p>‘ಈ ಶುಭ ದಿನದಂದು ಬಂಗಾರ ಖರೀದಿಸಿದರೆ ವರ್ಷವಿಡೀ ಒಳಿತಾಗುತ್ತದೆ; ಸಂಪತ್ತು ಅಕ್ಷಯವಾಗುತ್ತದೆ’ ಎಂಬ ನಂಬಿಕೆ ಜನರಲ್ಲಿ ಇರುವುದರಿಂದಾಗಿ ಚಿನ್ನಾಭರಣಗಳಿಗೆ ಬಹಳ ಬೇಡಿಕೆ ಕಂಡುಬಂತು ಎಂದು ಚಿನ್ನಾಭರಣ ಅಂಗಡಿಗಳವರು ತಿಳಿಸಿದರು. ಚಿನ್ನಾಭರಣ ಮಳಿಗೆಗಳು ಬೆಳಿಗ್ಗೆಯಿಂದ ರಾತ್ರಿವರೆಗೂ ಗ್ರಾಹಕರಿಂದ ತುಂಬಿದ್ದವು.</p>.<p>ಕೋವಿಡ್–19 ಸಂಕ್ರಾಮಿಕ ಕಾರಣದಿಂದ ಕಳೆದೆರಡು ವರ್ಷ ‘ಅಕ್ಷಯ ತೃತೀಯ’ ಸಂದರ್ಭದಲ್ಲಿ ಗ್ರಾಹಕರಿಂದ ಹೆಚ್ಚಿನ ಚಿನ್ನಾಭರಣ ಖರೀದಿ ನಡೆದಿರಲಿಲ್ಲ. ಈ ಬಾರಿ ಕೋವಿಡ್ ಕಾರ್ಮೋಡ ಸರಿದಿದ್ದರಿಂದ ಹಾಗೂ ಮದುವೆಯ ಸೀಜನ್ ಕೂಡ ಆಗಿರುವುದರಿಂದ ಹೆಚ್ಚಿನ ಬೇಡಿಕೆ ಕಂಡುಬಂತು ಎಂದು ವರ್ತಕರು ವಿಶ್ಲೇಷಿಸಿದರು.</p>.<p>‘ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಒಂದು ವಾರದಿಂದಲೂ ಉತ್ತಮ ವಹಿವಾಟು ನಡೆದಿದೆ. ಮಂಗಳವಾರ ನಮ್ಮ ನಿರೀಕ್ಷೆಗೂ ಮೀರಿ ಗ್ರಾಹಕರು ಬಂದರು. ನಮ್ಮ ಅಂಗಡಿಯಲ್ಲಿ ಗ್ರಾಹಕರು ಅಕ್ಷರಶಃ ಮುಗಿಬಿದ್ದರು. ನಗರದಾದ್ಯಂತ ₹ 100 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿರುವ ಅಂದಾಜಿದೆ’ ಎಂದು ಖಡೇಬಜಾರ್ನ ಪೋತದಾರ್ ಬ್ರದರ್ಸ್ ಜ್ಯುವೆಲ್ಲರ್ಸ್ನ ಪಾಲುದಾರ ಹಾಗೂ ಚಿನ್ನಾಭರಣ ವರ್ತಕ ಅನಿಲ್ ಪೋತದಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>‘ಸೋಮವಾರ 10 ಗ್ರಾಂ. ಚಿನಕ್ಕೆ ₹55ಸಾವಿರ ಇತ್ತು. ಇದು ಮಂಗಳವಾರ ₹ 53ಸಾವಿರ ಇಳಿಕೆಯಾಗಿತ್ತು. ಇದನ್ನು ಬಹಳಷ್ಟು ಗ್ರಾಹಕರು ಸದ್ಬಳಕೆ ಮಾಡಿಕೊಂಡರು’ ಎಂದು ಮಾಹಿತಿ ನೀಡಿದರು.</p>.<p>ನಗರದ ಖಡೇಬಜಾರ್, ಸಮಾದೇವಿ ಗಲ್ಲಿ, ತಿಲಕವಾಡಿ, ಶಹಾಪುರ ಪ್ರದೇಶದಲ್ಲಿ ಅತಿಹೆಚ್ಚಿನ ಚಿನ್ನಾಭರಣ ಅಂಗಡಿಗಳಿವೆ. ಇದಲ್ಲದೆ, ತನಿಷ್ಕ್, ಮಲಬಾರ್, ಜೋಯಾಲುಕ್ಕಾಸ್, ಪಿ.ಎನ್. ಗಾಡ್ಗೀಳ್, ಕಲ್ಯಾಣ್ ಮೊದಲಾದ ದೊಡ್ಡ ಮಳಿಗೆಗಳಲ್ಲೂ ಗ್ರಾಹಕರು ತುಂಬಿದ್ದರು. ಅಂಗಡಿಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ವಹಿವಾಟು ನಡೆಯಿತು. ಈ ಮುಂಚೆಯೇ ವಿನ್ಯಾಸ ಅಂತಿಮಗೊಳಿಸಿ, ಮುಂಗಡ ಹಣ ನೀಡಿ ಹೋಗಿದ್ದ ಅನೇಕರು ಸಂಪೂರ್ಣ ಹಣ ಪಾವತಿಸಿ ಆಭರಣಗಳನ್ನು ಖರೀದಿಸಿದರು. ಕೆಲವರು, ಸಿದ್ಧ ಆಭರಣಗಳನ್ನು ಸ್ಥಳದಲ್ಲೇ ಖರೀದಿಸಿದರು ಎಂದು ವರ್ತಕರು ತಿಳಿಸಿದರು.</p>.<p>ನಗರವೊಂದರಲ್ಲೇ 250ಕ್ಕೂ ಹೆಚ್ಚು ಚಿನ್ನಾಭರಣ ಅಂಗಡಿಗಳಿವೆ. ಇಲ್ಲಿಗೆ ಜಿಲ್ಲೆಯವರ ಜೊತೆ ಸಮೀಪದಲ್ಲಿರುವ ಮಹಾರಾಷ್ಟ್ರದಿಂದಲೂ ಗ್ರಾಹಕರು ಬಂದಿದ್ದರು.</p>.<p>‘ಎಲ್ಲ ರೀತಿಯ ಆಭರಣಗಳಿಗೂ ಬೇಡಿಕೆ ಇತ್ತು. ಚಿನ್ನ ಖರೀದಿಸಲು ಸಾಧ್ಯವಾಗದವರು ಬೆಳ್ಳಿ ಆಭರಣಗಳನ್ನು ತೆಗೆದುಕೊಂಡರು. ಚಿನ್ನದುಂಗುರ, ನೆಕ್ಲೇಸ್, ಸರಗಳು, ಮೂಗುತಿ, ಓಲೆ, ಬಳೆ ಮೊದಲಾದವುಗಳಿಗೆ ಬೇಡಿಕೆ ಕಂಡುಬಂತು’ ಎಂದು ವರ್ತಕರೊಬ್ಬರು ಪ್ರತಿಕ್ರಿಯಿಸಿದರು.</p>.<p>ಹೊಸ ದ್ವಿಚಕ್ರವಾಹನ, ಕಾರ್ ಮೊದಲಾದ ವಾಹನಗಳ ಖರೀದಿಯೂ ದೊಡ್ಡ ಪ್ರಮಾಣದಲ್ಲಿತ್ತು. ದೇವಾಲಯಗಳಲ್ಲಿ ಹೊಸ ವಾಹನಗಳಿಗೆ ಪೂಜೆ ಸಲ್ಲಿಸುತ್ತಿದ್ದುದು ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಅಕ್ಷಯ ತೃತೀಯ ಅಂಗವಾಗಿ ನಗರ ಮತ್ತು ತಾಲ್ಲೂಕು ಕೇಂದ್ರ ಮೊದಲಾದ ಸ್ಥಳಗಳಲ್ಲಿ ಚಿನ್ನ, ಬೆಳ್ಳಿ, ವಜ್ರಾಭರಣಗಳು ಮತ್ತು ವಾಹನಗಳ ಖರೀದಿ ಭರಾಟೆ ಮಂಗಳವಾರ ಜೋರಾಗಿತ್ತು.</p>.<p>‘ಈ ಶುಭ ದಿನದಂದು ಬಂಗಾರ ಖರೀದಿಸಿದರೆ ವರ್ಷವಿಡೀ ಒಳಿತಾಗುತ್ತದೆ; ಸಂಪತ್ತು ಅಕ್ಷಯವಾಗುತ್ತದೆ’ ಎಂಬ ನಂಬಿಕೆ ಜನರಲ್ಲಿ ಇರುವುದರಿಂದಾಗಿ ಚಿನ್ನಾಭರಣಗಳಿಗೆ ಬಹಳ ಬೇಡಿಕೆ ಕಂಡುಬಂತು ಎಂದು ಚಿನ್ನಾಭರಣ ಅಂಗಡಿಗಳವರು ತಿಳಿಸಿದರು. ಚಿನ್ನಾಭರಣ ಮಳಿಗೆಗಳು ಬೆಳಿಗ್ಗೆಯಿಂದ ರಾತ್ರಿವರೆಗೂ ಗ್ರಾಹಕರಿಂದ ತುಂಬಿದ್ದವು.</p>.<p>ಕೋವಿಡ್–19 ಸಂಕ್ರಾಮಿಕ ಕಾರಣದಿಂದ ಕಳೆದೆರಡು ವರ್ಷ ‘ಅಕ್ಷಯ ತೃತೀಯ’ ಸಂದರ್ಭದಲ್ಲಿ ಗ್ರಾಹಕರಿಂದ ಹೆಚ್ಚಿನ ಚಿನ್ನಾಭರಣ ಖರೀದಿ ನಡೆದಿರಲಿಲ್ಲ. ಈ ಬಾರಿ ಕೋವಿಡ್ ಕಾರ್ಮೋಡ ಸರಿದಿದ್ದರಿಂದ ಹಾಗೂ ಮದುವೆಯ ಸೀಜನ್ ಕೂಡ ಆಗಿರುವುದರಿಂದ ಹೆಚ್ಚಿನ ಬೇಡಿಕೆ ಕಂಡುಬಂತು ಎಂದು ವರ್ತಕರು ವಿಶ್ಲೇಷಿಸಿದರು.</p>.<p>‘ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಒಂದು ವಾರದಿಂದಲೂ ಉತ್ತಮ ವಹಿವಾಟು ನಡೆದಿದೆ. ಮಂಗಳವಾರ ನಮ್ಮ ನಿರೀಕ್ಷೆಗೂ ಮೀರಿ ಗ್ರಾಹಕರು ಬಂದರು. ನಮ್ಮ ಅಂಗಡಿಯಲ್ಲಿ ಗ್ರಾಹಕರು ಅಕ್ಷರಶಃ ಮುಗಿಬಿದ್ದರು. ನಗರದಾದ್ಯಂತ ₹ 100 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿರುವ ಅಂದಾಜಿದೆ’ ಎಂದು ಖಡೇಬಜಾರ್ನ ಪೋತದಾರ್ ಬ್ರದರ್ಸ್ ಜ್ಯುವೆಲ್ಲರ್ಸ್ನ ಪಾಲುದಾರ ಹಾಗೂ ಚಿನ್ನಾಭರಣ ವರ್ತಕ ಅನಿಲ್ ಪೋತದಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>‘ಸೋಮವಾರ 10 ಗ್ರಾಂ. ಚಿನಕ್ಕೆ ₹55ಸಾವಿರ ಇತ್ತು. ಇದು ಮಂಗಳವಾರ ₹ 53ಸಾವಿರ ಇಳಿಕೆಯಾಗಿತ್ತು. ಇದನ್ನು ಬಹಳಷ್ಟು ಗ್ರಾಹಕರು ಸದ್ಬಳಕೆ ಮಾಡಿಕೊಂಡರು’ ಎಂದು ಮಾಹಿತಿ ನೀಡಿದರು.</p>.<p>ನಗರದ ಖಡೇಬಜಾರ್, ಸಮಾದೇವಿ ಗಲ್ಲಿ, ತಿಲಕವಾಡಿ, ಶಹಾಪುರ ಪ್ರದೇಶದಲ್ಲಿ ಅತಿಹೆಚ್ಚಿನ ಚಿನ್ನಾಭರಣ ಅಂಗಡಿಗಳಿವೆ. ಇದಲ್ಲದೆ, ತನಿಷ್ಕ್, ಮಲಬಾರ್, ಜೋಯಾಲುಕ್ಕಾಸ್, ಪಿ.ಎನ್. ಗಾಡ್ಗೀಳ್, ಕಲ್ಯಾಣ್ ಮೊದಲಾದ ದೊಡ್ಡ ಮಳಿಗೆಗಳಲ್ಲೂ ಗ್ರಾಹಕರು ತುಂಬಿದ್ದರು. ಅಂಗಡಿಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ವಹಿವಾಟು ನಡೆಯಿತು. ಈ ಮುಂಚೆಯೇ ವಿನ್ಯಾಸ ಅಂತಿಮಗೊಳಿಸಿ, ಮುಂಗಡ ಹಣ ನೀಡಿ ಹೋಗಿದ್ದ ಅನೇಕರು ಸಂಪೂರ್ಣ ಹಣ ಪಾವತಿಸಿ ಆಭರಣಗಳನ್ನು ಖರೀದಿಸಿದರು. ಕೆಲವರು, ಸಿದ್ಧ ಆಭರಣಗಳನ್ನು ಸ್ಥಳದಲ್ಲೇ ಖರೀದಿಸಿದರು ಎಂದು ವರ್ತಕರು ತಿಳಿಸಿದರು.</p>.<p>ನಗರವೊಂದರಲ್ಲೇ 250ಕ್ಕೂ ಹೆಚ್ಚು ಚಿನ್ನಾಭರಣ ಅಂಗಡಿಗಳಿವೆ. ಇಲ್ಲಿಗೆ ಜಿಲ್ಲೆಯವರ ಜೊತೆ ಸಮೀಪದಲ್ಲಿರುವ ಮಹಾರಾಷ್ಟ್ರದಿಂದಲೂ ಗ್ರಾಹಕರು ಬಂದಿದ್ದರು.</p>.<p>‘ಎಲ್ಲ ರೀತಿಯ ಆಭರಣಗಳಿಗೂ ಬೇಡಿಕೆ ಇತ್ತು. ಚಿನ್ನ ಖರೀದಿಸಲು ಸಾಧ್ಯವಾಗದವರು ಬೆಳ್ಳಿ ಆಭರಣಗಳನ್ನು ತೆಗೆದುಕೊಂಡರು. ಚಿನ್ನದುಂಗುರ, ನೆಕ್ಲೇಸ್, ಸರಗಳು, ಮೂಗುತಿ, ಓಲೆ, ಬಳೆ ಮೊದಲಾದವುಗಳಿಗೆ ಬೇಡಿಕೆ ಕಂಡುಬಂತು’ ಎಂದು ವರ್ತಕರೊಬ್ಬರು ಪ್ರತಿಕ್ರಿಯಿಸಿದರು.</p>.<p>ಹೊಸ ದ್ವಿಚಕ್ರವಾಹನ, ಕಾರ್ ಮೊದಲಾದ ವಾಹನಗಳ ಖರೀದಿಯೂ ದೊಡ್ಡ ಪ್ರಮಾಣದಲ್ಲಿತ್ತು. ದೇವಾಲಯಗಳಲ್ಲಿ ಹೊಸ ವಾಹನಗಳಿಗೆ ಪೂಜೆ ಸಲ್ಲಿಸುತ್ತಿದ್ದುದು ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>