<p><strong>ಬೆಳಗಾವಿ:</strong> ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ) ಬೆಳಗಾವಿ ಆಯುಕ್ತಾಲಯದಿಂದ ಪ್ರಸಕ್ತ ವರ್ಷ ₹ 10,172 ಕೋಟಿ ಆದಾಯ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 43ರಷ್ಟು ಹೆಚ್ಚು ಸಂಗ್ರಹವಾಗಿದೆ.</p>.<p>ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡ ಈ ವಲಯದಲ್ಲಿ ಕಳೆದ ವರ್ಷ (2021–22) ₹ 7,124 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ಬಾರಿ ಜಿಂದಾಲ್ ಸ್ಟೀಲ್ನಿಂದ ₹ 3,974 ಕೋಟಿ ಜಿಎಸ್ಟಿ ಪಾವತಿಯಾಗಿದ್ದು, ಇಡೀ ರಾಜ್ಯದಲ್ಲಿ ಇದು ಅತಿ ದೊಡ್ಡ ಮೊತ್ತದ ಪಾವತಿಯಾಗಿದೆ.</p>.<p>‘ಉತ್ತರ ಕರ್ನಾಟಕದ ತೆರಿಗೆದಾರರು ನೀಡಿದ ಸಹಕಾರ ಹಾಗೂ ಆಯುಕ್ತಾಲಯದ ಸಿಬ್ಬಂದಿ ಕಾರ್ಯಕ್ಷಮತೆಯಿಂದ ಇಷ್ಟು ದೊಡ್ಡ ಮೊತ್ತದ ಆದಾಯ ಸಂಗ್ರಹವಾಗಿದೆ. ಜೂನ್ 1ರಂದು ಇದರ ಸಂಭ್ರಮಾಚರಣೆ ಕೂಡ ಆಯೋಜಿಸಲಾಗಿದೆ’ ಎಂದು ಸಹಾಯಕ ಆಯುಕ್ತ ಸುಂದರ್ರಾಜು ಸಾಗಿ ತಿಳಿಸಿದ್ದಾರೆ.</p>.<p>ಕಳೆದ ವರ್ಷ ರಾಜ್ಯ ವಲಯದಿಂದ ₹ 48,440 ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು. ಮುಂಬೈ ವಲಯ ಹೊರತುಪಡಿಸಿದರೆ ರಾಜ್ಯವು ಎರಡನೇ ಸ್ಥಾನದಲ್ಲಿದೆ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ) ಬೆಳಗಾವಿ ಆಯುಕ್ತಾಲಯದಿಂದ ಪ್ರಸಕ್ತ ವರ್ಷ ₹ 10,172 ಕೋಟಿ ಆದಾಯ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 43ರಷ್ಟು ಹೆಚ್ಚು ಸಂಗ್ರಹವಾಗಿದೆ.</p>.<p>ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡ ಈ ವಲಯದಲ್ಲಿ ಕಳೆದ ವರ್ಷ (2021–22) ₹ 7,124 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ಬಾರಿ ಜಿಂದಾಲ್ ಸ್ಟೀಲ್ನಿಂದ ₹ 3,974 ಕೋಟಿ ಜಿಎಸ್ಟಿ ಪಾವತಿಯಾಗಿದ್ದು, ಇಡೀ ರಾಜ್ಯದಲ್ಲಿ ಇದು ಅತಿ ದೊಡ್ಡ ಮೊತ್ತದ ಪಾವತಿಯಾಗಿದೆ.</p>.<p>‘ಉತ್ತರ ಕರ್ನಾಟಕದ ತೆರಿಗೆದಾರರು ನೀಡಿದ ಸಹಕಾರ ಹಾಗೂ ಆಯುಕ್ತಾಲಯದ ಸಿಬ್ಬಂದಿ ಕಾರ್ಯಕ್ಷಮತೆಯಿಂದ ಇಷ್ಟು ದೊಡ್ಡ ಮೊತ್ತದ ಆದಾಯ ಸಂಗ್ರಹವಾಗಿದೆ. ಜೂನ್ 1ರಂದು ಇದರ ಸಂಭ್ರಮಾಚರಣೆ ಕೂಡ ಆಯೋಜಿಸಲಾಗಿದೆ’ ಎಂದು ಸಹಾಯಕ ಆಯುಕ್ತ ಸುಂದರ್ರಾಜು ಸಾಗಿ ತಿಳಿಸಿದ್ದಾರೆ.</p>.<p>ಕಳೆದ ವರ್ಷ ರಾಜ್ಯ ವಲಯದಿಂದ ₹ 48,440 ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು. ಮುಂಬೈ ವಲಯ ಹೊರತುಪಡಿಸಿದರೆ ರಾಜ್ಯವು ಎರಡನೇ ಸ್ಥಾನದಲ್ಲಿದೆ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>