<p><strong>ನಂದಗಡ (ಖಾನಾಪುರ ತಾಲ್ಲೂಕು)</strong>: ಕ್ರಾಂತಿಯ ನೆಲ, ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತ ತಾಲ್ಲೂಕಿನ ನಂದಗಡದಲ್ಲಿ ಈಗ ಸುಧಾರಣಾ ಪರ್ವ ಆರಂಭವಾಗಿದೆ. ಈ ಸ್ಥಳಕ್ಕೆ ಜಾಗತಿಕ ಗುರುತು ತಂದುಕೊಟ್ಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಈಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.</p>.<p>ಹಲವು ವರ್ಷಗಳಿಂದ ನಂದಗಡ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಚನ್ನಮ್ಮನ ಕಿತ್ತೂರು, ಬೈಲಹೊಂಗಲದಲ್ಲಿ ಆದಂಥ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿಯೂ ಮಾಡಬೇಕು ಎಂದು ಜನ ದಶಕದಿಂದ ಹೋರಾಟ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಶುಕ್ರದೆಸೆ ಆರಂಭವಾಗಿದೆ.</p>.<p>ಗ್ರಾಮದಲ್ಲಿರುವ ರಾಯಣ್ಣನ ಸಮಾಧಿ ಸ್ಥಳ ಮತ್ತು ಗಲ್ಲಿಗೇರಿಸಿದ ಸ್ಥಳಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ‘ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪಿಸಿದೆ. ಈ ಪ್ರಾಧಿಕಾರದ ವತಿಯಿಂದ ಬ್ರಿಟಿಷರು ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ವೀರಭೂಮಿ ನಿರ್ಮಾಣ, ರಾಯಣ್ಣನ ಸಮಾಧಿ ಸ್ಥಳದ ಬಳಿ ಯಾತ್ರಿ ನಿವಾಸ ನಿರ್ಮಾಣ, ಐತಿಹಾಸಿಕ ಕೆರೆ ಜೀರ್ಣೋದ್ಧಾರ ಮಾಡಲಾಗಿದೆ.</p>.<p>ವಿಶೇಷ ಆಕರ್ಷಣೆ ಮಾಡುವ ರಾಕ್ ಗಾರ್ಡನ್, ಗರಡಿ ಮನೆ, ಸೈನಿಕ ಶಾಲೆ ಮತ್ತಿತರ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ದೊರೆತಿದೆ. ಪ್ರಾಧಿಕಾರದ ವತಿಯಿಂದ ರಾಯಣ್ಣನ ಜನ್ಮಭೂಮಿ ಸಂಗೊಳ್ಳಿಯಲ್ಲೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.</p>.<p>ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿವೀರ ರಾಯಣ್ಣನ ತ್ಯಾಗ– ಬಲಿದಾನಗಳು ಮುಂದಿನ ಪೀಳಿಗೆಗೆ ಸಚಿತ್ರವಾಗಿ ತಿಳಿಯಬೇಕು ಎಂಬ ಉದ್ದೇಶದಿಂದ ವೈವಿಧ್ಯಮಯ ಹಾಗೂ ದೂರದೃಷ್ಟಿಯ ಕೆಲಗಳನ್ನು ಮಾಡಲಾಗುತ್ತಿದೆ.</p>.<p>ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ ಒಂದು ಶತಮಾನ ಮುಂಚೆ ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮ ಕಿತ್ತೂರು ಸಂಸ್ಥಾನದ ಉಳಿವಿಗಾಗಿ ಬ್ರಿಟಿಷರೊಂದಿಗೆ ಕೆಚ್ಚೆದೆಯಿಂದ ಹೋರಾಟ ನಡೆಸಿದಳು. ಆ ಮೂಲಕ ದೇಶದ ಮೊದಲ ಸ್ವಾತಂತ್ರ್ಯದ ಕಿಡಿ ಎಂದೇ ಖ್ಯಾತಳಾದಳು. ಚನ್ನಮ್ಮನ ಬಲಗೈಬಂಟ ಎಂದೇ ಇತಿಹಾಸದಲ್ಲಿ ದಾಖಲಾದ ಸಂಗೊಳ್ಳಿ ರಾಯಣ್ಣ ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ನಂದಗಡಕ್ಕೆ ಬರುವ ಎಲ್ಲರಿಗೂ ಈ ಇತಿಹಾಸ ತಿಳಿಯುವಂತೆ ಮಾಡಲಾಗುತ್ತಿದೆ.</p>.<p>ಇತಿಹಾಸಕಾರರು ಉಲ್ಲೇಖಿಸಿದಂತೆ, ರಾಯಣ್ಣನನ್ನು ನಂದಗಡ ಗ್ರಾಮದ ಹೊರವಲಯದ ಆಲದ ಮರಕ್ಕೆ ನೇಣು ಹಾಕಲಾಯಿತು. ನಂತರ ಆತನ ಇಚ್ಛೆಯಂತೆ ಈಗಿರುವ ಸಮಾಧಿ ಸ್ಥಳದಲ್ಲಿ ಮಣ್ಣು ಮಾಡಲಾಯಿತು. ರಾಯಣ್ಣನ ಸಹಚರ ಬಿಚ್ಚುಗತ್ತಿ ಚನ್ನಬಸಪ್ಪ ರಾಯಣ್ಣನ ನೆನಪಿಗಾಗಿ<br />ಆತನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ಮತ್ತು ಮಣ್ಣು ಮಾಡಿದ ಸ್ಥಳದಲ್ಲಿ ಆಲದ ಸಸಿಗಳನ್ನು ನೆಟ್ಟ. ಈ ಎರಡೂ ಸ್ಥಳದಳಲ್ಲಿ ಶತಮಾನದಿಂದ ಆಲದ ಮರಗಳ ಗಟ್ಟಿಯಾಗಿ ನಿಂತಿವೆ.</p>.<p><u><strong>ಅವಿನಾಭಾವ ನಂಟು</strong></u></p>.<p>ನಂದಗಡ ಗ್ರಾಮಕ್ಕೂ ಸಂಗೊಳ್ಳಿ ರಾಯಣ್ಣನಿಗೂ ಅವಿನಾಭಾವ ನಂಟಿದೆ. ಗ್ರಾಮದ ರಾಯಾಪುರ ಬೀದಿಯಲ್ಲಿ ರಾಯಣ್ಣನ ಸಮಾಧಿಯಿದೆ. ಊರಿನ ಹೊರಭಾಗದಲ್ಲಿರುವ ಆಲದಮರ ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ ಸ್ಥಳವಿದೆ. ಈ ಎರಡೂ ತಾಣಗಳಿಂದಾಗಿ ನಂದಗಡ ಗ್ರಾಮ ಐತಿಹಾಸಿಕ ಮಹತ್ವ ಪಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂದಗಡ (ಖಾನಾಪುರ ತಾಲ್ಲೂಕು)</strong>: ಕ್ರಾಂತಿಯ ನೆಲ, ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತ ತಾಲ್ಲೂಕಿನ ನಂದಗಡದಲ್ಲಿ ಈಗ ಸುಧಾರಣಾ ಪರ್ವ ಆರಂಭವಾಗಿದೆ. ಈ ಸ್ಥಳಕ್ಕೆ ಜಾಗತಿಕ ಗುರುತು ತಂದುಕೊಟ್ಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಈಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.</p>.<p>ಹಲವು ವರ್ಷಗಳಿಂದ ನಂದಗಡ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಚನ್ನಮ್ಮನ ಕಿತ್ತೂರು, ಬೈಲಹೊಂಗಲದಲ್ಲಿ ಆದಂಥ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿಯೂ ಮಾಡಬೇಕು ಎಂದು ಜನ ದಶಕದಿಂದ ಹೋರಾಟ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಶುಕ್ರದೆಸೆ ಆರಂಭವಾಗಿದೆ.</p>.<p>ಗ್ರಾಮದಲ್ಲಿರುವ ರಾಯಣ್ಣನ ಸಮಾಧಿ ಸ್ಥಳ ಮತ್ತು ಗಲ್ಲಿಗೇರಿಸಿದ ಸ್ಥಳಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ‘ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪಿಸಿದೆ. ಈ ಪ್ರಾಧಿಕಾರದ ವತಿಯಿಂದ ಬ್ರಿಟಿಷರು ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ವೀರಭೂಮಿ ನಿರ್ಮಾಣ, ರಾಯಣ್ಣನ ಸಮಾಧಿ ಸ್ಥಳದ ಬಳಿ ಯಾತ್ರಿ ನಿವಾಸ ನಿರ್ಮಾಣ, ಐತಿಹಾಸಿಕ ಕೆರೆ ಜೀರ್ಣೋದ್ಧಾರ ಮಾಡಲಾಗಿದೆ.</p>.<p>ವಿಶೇಷ ಆಕರ್ಷಣೆ ಮಾಡುವ ರಾಕ್ ಗಾರ್ಡನ್, ಗರಡಿ ಮನೆ, ಸೈನಿಕ ಶಾಲೆ ಮತ್ತಿತರ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ದೊರೆತಿದೆ. ಪ್ರಾಧಿಕಾರದ ವತಿಯಿಂದ ರಾಯಣ್ಣನ ಜನ್ಮಭೂಮಿ ಸಂಗೊಳ್ಳಿಯಲ್ಲೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.</p>.<p>ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿವೀರ ರಾಯಣ್ಣನ ತ್ಯಾಗ– ಬಲಿದಾನಗಳು ಮುಂದಿನ ಪೀಳಿಗೆಗೆ ಸಚಿತ್ರವಾಗಿ ತಿಳಿಯಬೇಕು ಎಂಬ ಉದ್ದೇಶದಿಂದ ವೈವಿಧ್ಯಮಯ ಹಾಗೂ ದೂರದೃಷ್ಟಿಯ ಕೆಲಗಳನ್ನು ಮಾಡಲಾಗುತ್ತಿದೆ.</p>.<p>ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ ಒಂದು ಶತಮಾನ ಮುಂಚೆ ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮ ಕಿತ್ತೂರು ಸಂಸ್ಥಾನದ ಉಳಿವಿಗಾಗಿ ಬ್ರಿಟಿಷರೊಂದಿಗೆ ಕೆಚ್ಚೆದೆಯಿಂದ ಹೋರಾಟ ನಡೆಸಿದಳು. ಆ ಮೂಲಕ ದೇಶದ ಮೊದಲ ಸ್ವಾತಂತ್ರ್ಯದ ಕಿಡಿ ಎಂದೇ ಖ್ಯಾತಳಾದಳು. ಚನ್ನಮ್ಮನ ಬಲಗೈಬಂಟ ಎಂದೇ ಇತಿಹಾಸದಲ್ಲಿ ದಾಖಲಾದ ಸಂಗೊಳ್ಳಿ ರಾಯಣ್ಣ ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ನಂದಗಡಕ್ಕೆ ಬರುವ ಎಲ್ಲರಿಗೂ ಈ ಇತಿಹಾಸ ತಿಳಿಯುವಂತೆ ಮಾಡಲಾಗುತ್ತಿದೆ.</p>.<p>ಇತಿಹಾಸಕಾರರು ಉಲ್ಲೇಖಿಸಿದಂತೆ, ರಾಯಣ್ಣನನ್ನು ನಂದಗಡ ಗ್ರಾಮದ ಹೊರವಲಯದ ಆಲದ ಮರಕ್ಕೆ ನೇಣು ಹಾಕಲಾಯಿತು. ನಂತರ ಆತನ ಇಚ್ಛೆಯಂತೆ ಈಗಿರುವ ಸಮಾಧಿ ಸ್ಥಳದಲ್ಲಿ ಮಣ್ಣು ಮಾಡಲಾಯಿತು. ರಾಯಣ್ಣನ ಸಹಚರ ಬಿಚ್ಚುಗತ್ತಿ ಚನ್ನಬಸಪ್ಪ ರಾಯಣ್ಣನ ನೆನಪಿಗಾಗಿ<br />ಆತನನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ಮತ್ತು ಮಣ್ಣು ಮಾಡಿದ ಸ್ಥಳದಲ್ಲಿ ಆಲದ ಸಸಿಗಳನ್ನು ನೆಟ್ಟ. ಈ ಎರಡೂ ಸ್ಥಳದಳಲ್ಲಿ ಶತಮಾನದಿಂದ ಆಲದ ಮರಗಳ ಗಟ್ಟಿಯಾಗಿ ನಿಂತಿವೆ.</p>.<p><u><strong>ಅವಿನಾಭಾವ ನಂಟು</strong></u></p>.<p>ನಂದಗಡ ಗ್ರಾಮಕ್ಕೂ ಸಂಗೊಳ್ಳಿ ರಾಯಣ್ಣನಿಗೂ ಅವಿನಾಭಾವ ನಂಟಿದೆ. ಗ್ರಾಮದ ರಾಯಾಪುರ ಬೀದಿಯಲ್ಲಿ ರಾಯಣ್ಣನ ಸಮಾಧಿಯಿದೆ. ಊರಿನ ಹೊರಭಾಗದಲ್ಲಿರುವ ಆಲದಮರ ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ ಸ್ಥಳವಿದೆ. ಈ ಎರಡೂ ತಾಣಗಳಿಂದಾಗಿ ನಂದಗಡ ಗ್ರಾಮ ಐತಿಹಾಸಿಕ ಮಹತ್ವ ಪಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>