‘ದೇಶದ ನೈಜ ಇತಿಹಾಸವನ್ನು ಮಕ್ಕಳು ಮತ್ತು ಪಠ್ಯದಿಂದ ದೂರವಿಟ್ಟಿರುವುದು ದುರಂತದ ಸಂಗತಿಯಾಗಿದೆ. ಕಾಶ್ಮೀರದ ಇತಿಹಾಸವು ಪುರಾಣ ಕಾಲದಷ್ಟು ಪುರಾತನವಾದದ್ದು. ಹೀಗಿರುವಾಗ ಕೇವಲ ಅದು ಒಂದು ಭೂಭಾಗವೆಂದು ಭಾವಿಸಿ ತಮ್ಮ ರಾಜಕೀಯಕ್ಕಾಗಿ ಅದನ್ನು ಬಳಸಿಕೊಳ್ಳುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು. ದೇಶದ ಪುರಾಣ, ಯೋಗ, ನಾಟ್ಯ, ವ್ಯಾಕರಣ ಹೀಗೆ ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಗೆ ಕಾಶ್ಮೀರ ದೊಡ್ಡ ಕೊಡುಗೆ ನೀಡಿದೆ’ ಎಂದು ಪ್ರತಿಪಾದಿಸಿದರು.