<p><strong>ಬೆಳಗಾವಿ</strong>: ‘ನಗರದ ವಿವಿಧ ಮಾರ್ಗಗಳ ಅಂದ ಹೆಚ್ಚಲಿ ಮತ್ತು ಹಸಿರುಮಯ ವಾತಾವರಣ ನಿರ್ಮಾಣವಾಗಲಿ’ ಎಂಬ ಆಶಯದಿಂದ ಸ್ಮಾರ್ಟ್ಸಿಟಿ ಯೋಜನೆಯಡಿ ರಸ್ತೆಬದಿ ಇರಿಸಿದ್ದ ಹೂವಿನ ಕುಂಡಗಳಲ್ಲಿನ ಸಸಿಗಳಿಗೆ ಈಗ ನೀರುಣಿಸುವವರು, ಆರೈಕೆ ಮಾಡುವವರೇ ಇಲ್ಲ.</p>.<p>ಸ್ಥಳೀಯರು ಮತ್ತು ವ್ಯಾಪಾರಿಗಳ ಕಾಳಜಿಯಿಂದ ಕೆಲವು ಕುಂಡ ನಿರ್ವಹಣೆಯಾಗುತ್ತಿದ್ದು, ಅಷ್ಟಿಷ್ಟು ಸಸಿ ಬೆಳೆದಿವೆ. ಆದರೆ, ಬಹುತೇಕ ಕುಂಡ ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಕಸ ಮತ್ತು ಮದ್ಯದ ಬಾಟಲಿ ಎಸೆಯಲು, ಜಾಹೀರಾತು ಫಲಕ ಇರಿಸಲು ಬಳಕೆಯಾಗುತ್ತಿವೆ!</p>.<p>ನೆಹರೂ ನಗರ, ಶಿವಬಸವ ನಗರ, ಶ್ರೀನಗರ, ವಂಟಮುರಿ ಕಾಲೊನಿ, ಆಂಜನೇಯ ನಗರದ ಮುಖ್ಯರಸ್ತೆಗಳ ಬದಿ 2021ರಲ್ಲಿ ಸ್ಮಾರ್ಟ್ಸಿಟಿ ಯೋಜನೆಯವರು ಹೂವಿನ ಕುಂಡ ಇರಿಸಿದ್ದರು. ‘₹4,119ಕ್ಕೆ ಖರೀದಿಸಿದ ಪ್ರತಿ ಕುಂಡದಲ್ಲಿ ಮಣ್ಣು ತುಂಬಲು ₹1,550, ಗೊಬ್ಬರಕ್ಕೆ ₹500, ಕಾಂಪೋಸ್ಟ್ಗೆ ₹15, ಪ್ರತಿ ಸಸಿಗೆ ₹275 ಖರ್ಚಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದರು. </p>.<p class="Subhead">ಕೆಲ ದಿನಗಳವರೆಗೆ ಉತ್ತಮವಾಗಿ ನಿರ್ವಹಣೆಯಾದ ಕುಂಡಗಳು, ನಂತರ ನಿರ್ಲಕ್ಷ್ಯಕ್ಕೆ ಒಳಗಾದವು. ಅವುಗಳ ನಿರ್ವಹಣೆಗೆ ತಮ್ಮ ಬಳಿ ಸಂಪನ್ಮೂಲ ಲಭ್ಯವಿಲ್ಲ ಎಂದು ಸ್ಮಾರ್ಟ್ಸಿಟಿ ಯೋಜನೆಯವರು, 2025ರ ಜನವರಿಯಲ್ಲಿ ಪಾಲಿಕೆಗೆ ಹಸ್ತಾಂತರಿಸಿದ್ದಾರೆ. ಆದರೆ, ಈಗಲೂ ಅವು ನಿರ್ವಹಣೆಯಾಗುತ್ತಿಲ್ಲ. ಇದರಿಂದಾಗಿ ಮಹತ್ವದ ಯೋಜನೆಯೊಂದು ಹಳ್ಳ ಹಿಡಿದಿದೆ.</p>.<p>ಕೆಲವು ಕುಂಡಗಳು ಒಡೆದು ವಿನ್ಯಾಸವನ್ನೇ ಕಳೆದುಕೊಂಡಿದ್ದರೆ, ಇನ್ನೂ ಕೆಲವನ್ನು ಬೇಕಾಬಿಟ್ಟಿಯಾಗಿ ಎಸೆಯಲಾಗಿದೆ. ಕಸದಿಂದಲೇ ತುಂಬಿದ ಹಲವು ಕುಂಡಗಳಲ್ಲಿ ಗೇಣುದ್ದ ಸಸಿಗಳೂ ಬೆಳೆದಿಲ್ಲ.</p>.<p>ಪ್ರತಿವರ್ಷ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆದಾಗ ಕುಂಡಗಳಲ್ಲಿ ಸಸಿ ನೆಟ್ಟು ಕೆಲದಿನ ಆರೈಕೆ ಮಾಡಲಾಗುತ್ತದೆ. ಅಧಿವೇಶನ ಮುಗಿದ ನಂತರ, ಮತ್ತೆ ಅದೇ ಪರಿಸ್ಥಿತಿ.</p>.<p>‘ಆರಂಭದಲ್ಲಿ ನಾವು ಸರಿಯಾಗಿಯೇ ಕುಂಡ ನಿರ್ವಹಿಸಿದ್ದೆವು. ಪಾಮ್ ಮತ್ತು ನಾಲ್ಕೈದು ತಳಿಗಳ ಹೂವಿನ ಸಸಿ ನೆಟ್ಟಿದ್ದೆವು. ಆದರೆ, ಅವುಗಳ ಆರೈಕೆಗೆ ನಮ್ಮೊಂದಿಗೆ ಸ್ಥಳೀಯರು ಸಹಕರಿಸಲಿಲ್ಲ. ಕೆಲವರು ಅಲ್ಲಿಯೇ ತ್ಯಾಜ್ಯ ಎಸೆಯಲು ಆರಂಭಿಸಿದರು. ಈ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಾನುವಾರುಗಳು ಸಸಿ ತಿಂದವು. ವಾಯುವಿಹಾರಕ್ಕೆ ಬಂದ ಕೆಲವರೂ ಹೂವಿನ ಸಸಿ ಕಿತ್ತೊಯ್ದರು. ಯೋಜನೆ ಸಫಲವಾಗದಿರಲು ಇದೂ ಕಾರಣ’ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<p>Highlights - ಕುಂಡಗಳಲ್ಲಿ ಮದ್ಯದ ಬಾಟಲಿಗಳ ಎಸೆತ ಹಲವು ಕುಂಡಗಳಲ್ಲಿ ಗೇಣುದ್ದ ಬೆಳೆಯದ ಸಸಿಗಳು ಪ್ರತಿವರ್ಷ ಅಧಿವೇಶನದಲ್ಲಷ್ಟೇ ನಿರ್ವಹಣೆ</p>.<p>Quote - ‘ಸುಂದರ ಮತ್ತು ಸ್ವಚ್ಛ ಬೆಳಗಾವಿ’ ನಿರ್ಮಾಣಕ್ಕಾಗಿ ನಮ್ಮ ಎಸ್ಜಿಬಿಐಟಿಯ ಎನ್ಎಸ್ಎಸ್ ಘಟಕದಿಂದ ರಸ್ತೆ ವಿಭಜಕ ದತ್ತು ಪಡೆದಿದ್ದೇವೆ ಅಲ್ಲಮಪ್ರಭು ಸ್ವಾಮೀಜಿ ನಾಗನೂರು ರುದ್ರಾಕ್ಷಿಮಠ ಬೆಳಗಾವಿ </p>.<p>Quote - ಇತ್ತೀಚೆಗೆ ಎರಡು ಸಲ ಕುಂಡಗಳಲ್ಲಿ ಮಣ್ಣು ಹಾಕಿಸಿ ಸಸಿ ನೆಟ್ಟಿದ್ದೆವು. ಆದರೆ ಸ್ಥಳೀಯರ ಅಸಹಕಾರದಿಂದ ಅವು ನಿರ್ವಹಣೆಯಾಗುತ್ತಿಲ್ಲ. ಮುಂದೆ ಕುಂಡಗಳ ನಿರ್ವಹಣೆಗೆ ಕ್ರಮ ವಹಿಸುತ್ತೇವೆ ಬಿ.ಶುಭ ಆಯುಕ್ತೆ ಮಹಾನಗರ ಪಾಲಿಕೆ</p>.<p>Quote - ಅಶೋಕ ನಗರದಲ್ಲಿ ನಮ್ಮ ಮಳಿಗೆ ಮುಂದಿರುವ ಕುಂಡಗಳನ್ನು ಸ್ಥಳೀಯರೇ ನಿರ್ವಹಿಸುತ್ತಿದ್ದೇವೆ. ಪಾಲಿಕೆಯವರು ಸರಿಯಾಗಿ ನಿರ್ವಹಿಸಿ ರಸ್ತೆಗಳ ಅಂದ ಹೆಚ್ಚಿಸಬೇಕು ದೀಪಕ ಗುಡಗನಟ್ಟಿ ಕನ್ನಡ ಹೋರಾಟಗಾರ</p>.<p>Quote - ಎಸ್ಜಿಬಿಐಟಿ ಮಾದರಿಯಲ್ಲಿ ತಾವೂ ರಸ್ತೆ ವಿಭಜಕಗಳನ್ನು ದತ್ತು ಪಡೆಯುವಂತೆ ಇತರೆ ಸಂಘ–ಸಂಸ್ಥೆಯವರನ್ನು ಸಂಪರ್ಕಿಸಿ ಕೋರುತ್ತೇವೆ ಸಯೀದಾ ಆಫ್ರೀನ್ಭಾನು ಬಳ್ಳಾರಿ ವ್ಯವಸ್ಥಾಪಕ ನಿರ್ದೇಶಕಿ ಸ್ಮಾರ್ಟ್ಸಿಟಿ ಯೋಜನೆ</p>.<p>Cut-off box - ‘ಸಸಿ ನೆಡುತ್ತಿದ್ದಾರೆ’ ಬೆಳಗಾವಿಯ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ(ಎಸ್ಜಿಬಿಐಟಿ) ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್) ಘಟಕದವರು ಇತ್ತೀಚೆಗೆ ಶಿವಬಸವ ನಗರದ ರಸ್ತೆ ವಿಭಜಕಗಳನ್ನು ದತ್ತು ಪಡೆದಿದ್ದಾರೆ. ವಿಭಜಕಗಳ ಜತೆಗೆ ಹೂವಿನ ಕುಂಡಗಳನ್ನು ಶುಚಿಗೊಳಿಸಿ ಅವುಗಳಲ್ಲಿ ಸಸಿ ನೆಡುತ್ತಿದ್ದಾರೆ.</p>.<p>Cut-off box - ಅಂಕಿ–ಸಂಖ್ಯೆ 1283 ಹೂವಿನ ಕುಂಡಗಳು ₹6459 ಪ್ರತಿ ಕುಂಡಕ್ಕೆ ವ್ಯಯಿಸಿದ ಒಟ್ಟು ಮೊತ್ತ ₹82.86 ಲಕ್ಷ ಯೋಜನೆಗೆ ವ್ಯಯಿಸಿದ ವೆಚ್ಚ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ನಗರದ ವಿವಿಧ ಮಾರ್ಗಗಳ ಅಂದ ಹೆಚ್ಚಲಿ ಮತ್ತು ಹಸಿರುಮಯ ವಾತಾವರಣ ನಿರ್ಮಾಣವಾಗಲಿ’ ಎಂಬ ಆಶಯದಿಂದ ಸ್ಮಾರ್ಟ್ಸಿಟಿ ಯೋಜನೆಯಡಿ ರಸ್ತೆಬದಿ ಇರಿಸಿದ್ದ ಹೂವಿನ ಕುಂಡಗಳಲ್ಲಿನ ಸಸಿಗಳಿಗೆ ಈಗ ನೀರುಣಿಸುವವರು, ಆರೈಕೆ ಮಾಡುವವರೇ ಇಲ್ಲ.</p>.<p>ಸ್ಥಳೀಯರು ಮತ್ತು ವ್ಯಾಪಾರಿಗಳ ಕಾಳಜಿಯಿಂದ ಕೆಲವು ಕುಂಡ ನಿರ್ವಹಣೆಯಾಗುತ್ತಿದ್ದು, ಅಷ್ಟಿಷ್ಟು ಸಸಿ ಬೆಳೆದಿವೆ. ಆದರೆ, ಬಹುತೇಕ ಕುಂಡ ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಕಸ ಮತ್ತು ಮದ್ಯದ ಬಾಟಲಿ ಎಸೆಯಲು, ಜಾಹೀರಾತು ಫಲಕ ಇರಿಸಲು ಬಳಕೆಯಾಗುತ್ತಿವೆ!</p>.<p>ನೆಹರೂ ನಗರ, ಶಿವಬಸವ ನಗರ, ಶ್ರೀನಗರ, ವಂಟಮುರಿ ಕಾಲೊನಿ, ಆಂಜನೇಯ ನಗರದ ಮುಖ್ಯರಸ್ತೆಗಳ ಬದಿ 2021ರಲ್ಲಿ ಸ್ಮಾರ್ಟ್ಸಿಟಿ ಯೋಜನೆಯವರು ಹೂವಿನ ಕುಂಡ ಇರಿಸಿದ್ದರು. ‘₹4,119ಕ್ಕೆ ಖರೀದಿಸಿದ ಪ್ರತಿ ಕುಂಡದಲ್ಲಿ ಮಣ್ಣು ತುಂಬಲು ₹1,550, ಗೊಬ್ಬರಕ್ಕೆ ₹500, ಕಾಂಪೋಸ್ಟ್ಗೆ ₹15, ಪ್ರತಿ ಸಸಿಗೆ ₹275 ಖರ್ಚಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದರು. </p>.<p class="Subhead">ಕೆಲ ದಿನಗಳವರೆಗೆ ಉತ್ತಮವಾಗಿ ನಿರ್ವಹಣೆಯಾದ ಕುಂಡಗಳು, ನಂತರ ನಿರ್ಲಕ್ಷ್ಯಕ್ಕೆ ಒಳಗಾದವು. ಅವುಗಳ ನಿರ್ವಹಣೆಗೆ ತಮ್ಮ ಬಳಿ ಸಂಪನ್ಮೂಲ ಲಭ್ಯವಿಲ್ಲ ಎಂದು ಸ್ಮಾರ್ಟ್ಸಿಟಿ ಯೋಜನೆಯವರು, 2025ರ ಜನವರಿಯಲ್ಲಿ ಪಾಲಿಕೆಗೆ ಹಸ್ತಾಂತರಿಸಿದ್ದಾರೆ. ಆದರೆ, ಈಗಲೂ ಅವು ನಿರ್ವಹಣೆಯಾಗುತ್ತಿಲ್ಲ. ಇದರಿಂದಾಗಿ ಮಹತ್ವದ ಯೋಜನೆಯೊಂದು ಹಳ್ಳ ಹಿಡಿದಿದೆ.</p>.<p>ಕೆಲವು ಕುಂಡಗಳು ಒಡೆದು ವಿನ್ಯಾಸವನ್ನೇ ಕಳೆದುಕೊಂಡಿದ್ದರೆ, ಇನ್ನೂ ಕೆಲವನ್ನು ಬೇಕಾಬಿಟ್ಟಿಯಾಗಿ ಎಸೆಯಲಾಗಿದೆ. ಕಸದಿಂದಲೇ ತುಂಬಿದ ಹಲವು ಕುಂಡಗಳಲ್ಲಿ ಗೇಣುದ್ದ ಸಸಿಗಳೂ ಬೆಳೆದಿಲ್ಲ.</p>.<p>ಪ್ರತಿವರ್ಷ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆದಾಗ ಕುಂಡಗಳಲ್ಲಿ ಸಸಿ ನೆಟ್ಟು ಕೆಲದಿನ ಆರೈಕೆ ಮಾಡಲಾಗುತ್ತದೆ. ಅಧಿವೇಶನ ಮುಗಿದ ನಂತರ, ಮತ್ತೆ ಅದೇ ಪರಿಸ್ಥಿತಿ.</p>.<p>‘ಆರಂಭದಲ್ಲಿ ನಾವು ಸರಿಯಾಗಿಯೇ ಕುಂಡ ನಿರ್ವಹಿಸಿದ್ದೆವು. ಪಾಮ್ ಮತ್ತು ನಾಲ್ಕೈದು ತಳಿಗಳ ಹೂವಿನ ಸಸಿ ನೆಟ್ಟಿದ್ದೆವು. ಆದರೆ, ಅವುಗಳ ಆರೈಕೆಗೆ ನಮ್ಮೊಂದಿಗೆ ಸ್ಥಳೀಯರು ಸಹಕರಿಸಲಿಲ್ಲ. ಕೆಲವರು ಅಲ್ಲಿಯೇ ತ್ಯಾಜ್ಯ ಎಸೆಯಲು ಆರಂಭಿಸಿದರು. ಈ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಾನುವಾರುಗಳು ಸಸಿ ತಿಂದವು. ವಾಯುವಿಹಾರಕ್ಕೆ ಬಂದ ಕೆಲವರೂ ಹೂವಿನ ಸಸಿ ಕಿತ್ತೊಯ್ದರು. ಯೋಜನೆ ಸಫಲವಾಗದಿರಲು ಇದೂ ಕಾರಣ’ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<p>Highlights - ಕುಂಡಗಳಲ್ಲಿ ಮದ್ಯದ ಬಾಟಲಿಗಳ ಎಸೆತ ಹಲವು ಕುಂಡಗಳಲ್ಲಿ ಗೇಣುದ್ದ ಬೆಳೆಯದ ಸಸಿಗಳು ಪ್ರತಿವರ್ಷ ಅಧಿವೇಶನದಲ್ಲಷ್ಟೇ ನಿರ್ವಹಣೆ</p>.<p>Quote - ‘ಸುಂದರ ಮತ್ತು ಸ್ವಚ್ಛ ಬೆಳಗಾವಿ’ ನಿರ್ಮಾಣಕ್ಕಾಗಿ ನಮ್ಮ ಎಸ್ಜಿಬಿಐಟಿಯ ಎನ್ಎಸ್ಎಸ್ ಘಟಕದಿಂದ ರಸ್ತೆ ವಿಭಜಕ ದತ್ತು ಪಡೆದಿದ್ದೇವೆ ಅಲ್ಲಮಪ್ರಭು ಸ್ವಾಮೀಜಿ ನಾಗನೂರು ರುದ್ರಾಕ್ಷಿಮಠ ಬೆಳಗಾವಿ </p>.<p>Quote - ಇತ್ತೀಚೆಗೆ ಎರಡು ಸಲ ಕುಂಡಗಳಲ್ಲಿ ಮಣ್ಣು ಹಾಕಿಸಿ ಸಸಿ ನೆಟ್ಟಿದ್ದೆವು. ಆದರೆ ಸ್ಥಳೀಯರ ಅಸಹಕಾರದಿಂದ ಅವು ನಿರ್ವಹಣೆಯಾಗುತ್ತಿಲ್ಲ. ಮುಂದೆ ಕುಂಡಗಳ ನಿರ್ವಹಣೆಗೆ ಕ್ರಮ ವಹಿಸುತ್ತೇವೆ ಬಿ.ಶುಭ ಆಯುಕ್ತೆ ಮಹಾನಗರ ಪಾಲಿಕೆ</p>.<p>Quote - ಅಶೋಕ ನಗರದಲ್ಲಿ ನಮ್ಮ ಮಳಿಗೆ ಮುಂದಿರುವ ಕುಂಡಗಳನ್ನು ಸ್ಥಳೀಯರೇ ನಿರ್ವಹಿಸುತ್ತಿದ್ದೇವೆ. ಪಾಲಿಕೆಯವರು ಸರಿಯಾಗಿ ನಿರ್ವಹಿಸಿ ರಸ್ತೆಗಳ ಅಂದ ಹೆಚ್ಚಿಸಬೇಕು ದೀಪಕ ಗುಡಗನಟ್ಟಿ ಕನ್ನಡ ಹೋರಾಟಗಾರ</p>.<p>Quote - ಎಸ್ಜಿಬಿಐಟಿ ಮಾದರಿಯಲ್ಲಿ ತಾವೂ ರಸ್ತೆ ವಿಭಜಕಗಳನ್ನು ದತ್ತು ಪಡೆಯುವಂತೆ ಇತರೆ ಸಂಘ–ಸಂಸ್ಥೆಯವರನ್ನು ಸಂಪರ್ಕಿಸಿ ಕೋರುತ್ತೇವೆ ಸಯೀದಾ ಆಫ್ರೀನ್ಭಾನು ಬಳ್ಳಾರಿ ವ್ಯವಸ್ಥಾಪಕ ನಿರ್ದೇಶಕಿ ಸ್ಮಾರ್ಟ್ಸಿಟಿ ಯೋಜನೆ</p>.<p>Cut-off box - ‘ಸಸಿ ನೆಡುತ್ತಿದ್ದಾರೆ’ ಬೆಳಗಾವಿಯ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ(ಎಸ್ಜಿಬಿಐಟಿ) ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್) ಘಟಕದವರು ಇತ್ತೀಚೆಗೆ ಶಿವಬಸವ ನಗರದ ರಸ್ತೆ ವಿಭಜಕಗಳನ್ನು ದತ್ತು ಪಡೆದಿದ್ದಾರೆ. ವಿಭಜಕಗಳ ಜತೆಗೆ ಹೂವಿನ ಕುಂಡಗಳನ್ನು ಶುಚಿಗೊಳಿಸಿ ಅವುಗಳಲ್ಲಿ ಸಸಿ ನೆಡುತ್ತಿದ್ದಾರೆ.</p>.<p>Cut-off box - ಅಂಕಿ–ಸಂಖ್ಯೆ 1283 ಹೂವಿನ ಕುಂಡಗಳು ₹6459 ಪ್ರತಿ ಕುಂಡಕ್ಕೆ ವ್ಯಯಿಸಿದ ಒಟ್ಟು ಮೊತ್ತ ₹82.86 ಲಕ್ಷ ಯೋಜನೆಗೆ ವ್ಯಯಿಸಿದ ವೆಚ್ಚ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>