ಬೆಳಗಾವಿ: ತಮಗೆ ಕಚ್ಚಿದ ಹಾವಿನೊಂದಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಇಲ್ಲಿನ ಜಿಲ್ಲಾಸ್ಪತ್ರೆಗೆ ಸೋಮವಾರ ಆಗಮಿಸಿದ ಯುವಕನನ್ನು ಕಂಡು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹೌಹಾರಿದರು.
ತಾಲ್ಲೂಕಿನ ಹುಂಚಾನಟ್ಟಿಯಲ್ಲಿ ತಮ್ಮ ಮನೆ ಬಳಿ ಬಂದಿದ್ದ ಹಾವು ಹಿಡಿದ ಶಾಹೀದ್, ಅದನ್ನು ಬೆಟ್ಟಕ್ಕೆ ಬಿಡಲು ಹೋಗಿದ್ದರು. ಆಗ ಅವರಿಗೆ ಕಚ್ಚಿತ್ತು.