ಬೆಳಗಾವಿ: ‘ಮಾರಕ ಕೊರೊನಾದಿಂದ ಉದ್ಯೋಗಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಎರಡು ತಿಂಗಳಿಂದ ಅನೇಕ ಕೆಲಸಗಳು ನಿಂತು ಹೋಗಿವೆ. ಇದರಿಂದ ಸಾವಿರಾರು ಕುಟುಂಬಗಳು ತೊಂದರೆಗೆ ಒಳಗಾಗಿವೆ. ಹಾಗೆಂದು ಧೃತಿಗೆಡದೆ ಪರಿಸ್ಥಿತಿಯನ್ನು ಎದುರಿಸಬೇಕು’ ಎಂದು ಕನ್ನಡಪರ ಹೋರಾಟಗಾರ ಸಿದ್ದನಗೌಡ ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ಕೈಗೊಂಡಿರುವ ‘ಹಸಿದವರತ್ತ ನಮ್ಮ ಚಿತ್ತ’ ಅಭಿಯಾನದಲ್ಲಿ ಇಲ್ಲಿನ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ನಗರದ 50 ಟೈಲರ್ಗಳ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ಗಳನ್ನು ವಿತರಿಸಿ ಅವರು ಮಾತನಾಡಿದರು.
‘ಒಬ್ಬರಿಗೊಬ್ಬರು ನೆರವಾಗುವುದು ಈ ಸಂದರ್ಭದ ಅನಿವಾರ್ಯವಾಗಿದೆ’ ಎಂದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ಮಾರಕ ಕೊರೊನಾಕ್ಕೆ ಹೆದರಿ ಜನರು ಹೊರಗೆ ಬರಲು ಹೆದರಿದ ಸಂದರ್ಧದಲ್ಲೂ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ತಂಡದವರು ಬಡವರಿಗೆ ದಿನಸಿ ಕಿಟ್ ವಿತರಿಸಿ ನೆರವಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದರು.
ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿದರು. ಕನ್ನಡ ಪರ ಹೋರಾಟಗಾರರಾದ ರಮೇಶ ಸೊಂಟಕ್ಕಿ, ಮೈನೋದ್ದೀನ್ ಮಕಾನದಾರ, ಶಂಕರ ಬಾಗೇವಾಡಿ, ಬಾಬು ಸಂಗೋಡಿ, ಶಿವಪ್ಪ ಶಮರಂತ, ಸುವರ್ಣಾ ಪಾಟೀಲ, ವಿನಯ ಪಾಟೀಲ, ಸುಮನ್, ಕಾಂಚನಾ ಕೋಪರ್ಡೆ, ಪ್ರೀತಿ ಕಿಟ್ಗಳನ್ನು ವಿತರಿಸಿದರು.