<p><strong>ಬೆಳಗಾವಿ</strong>: 'ತೌಕ್ತೆ' ಚಂಡಮಾರುತದ ಪರಿಣಾಮ ನಗರದಲ್ಲಿ ಭಾನುವಾರ ನಸುಕಿನಿಂದಲೂ ಜೋರು ಗಾಳಿಯೊಂದಿಗೆ ಮಳೆಯಾಗುತ್ತಿದೆ.</p>.<p>ಶನಿವಾರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಆಗಾಗ ಮಳೆಯಾಗಿತ್ತು. ಗಾಳಿಯ ಅಬ್ಬರವೂ ಜೋರಾಗಿತ್ತು. ಈ ವಾತಾವರಣ ನಗರದಲ್ಲಿ ಭಾನುವಾರವೂ ಮುಂದುವರಿದಿದೆ.</p>.<p>ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಈ ಸಮಯದಲ್ಲಿ ರಸ್ತೆಬದಿ ವ್ಯಾಪಾರಿಗಳು ಒಂದಷ್ಟು ವ್ಯಾಪಾರ ಮಾಡಿಕೊಳ್ಳುತ್ತಿದ್ದರು ಮತ್ತು ಗ್ರಾಹಕರು ತರಕಾರಿ, ಹಾಲು, ಹಣ್ಣು, ಮಾಂಸ ಮೊದಲಾದವುಗಳನ್ನು ತಂದುಕೊಳ್ಳುತ್ತಿದ್ದರು. ಮಳೆಯಿಂದಾಗಿ ಅವರು ತೊಂದರೆ ಅನುಭವಿಸಿದರು. ವಾಯುವಿಹಾರಕ್ಕೆ ಹೋಗುವವರಲ್ಲಿ ಬಹುತೇಕರು ಮನೆಯಲ್ಲೇ ಉಳಿದರು.</p>.<p><a href="https://www.prajavani.net/karnataka-news/tauktae-cyclone-effect-relocation-of-more-than-80-families-karnatakas-coastal-districts-830860.html" itemprop="url">‘ತೌಕ್ತೆ’ ಚಂಡಮಾರುತ ಅಬ್ಬರಕ್ಕೆ ಕಡಲ್ಕೊರೆತ: 80ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ </a></p>.<p>ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ದಿನದ ಬಹುತೇಕ ಸಮಯ ಜೋರು ಗಾಳಿ ಮುಂದುವರಿಯಲಿದೆ ಹಾಗೂ ಆಗಾಗ ಮಳೆಯಾಗುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: 'ತೌಕ್ತೆ' ಚಂಡಮಾರುತದ ಪರಿಣಾಮ ನಗರದಲ್ಲಿ ಭಾನುವಾರ ನಸುಕಿನಿಂದಲೂ ಜೋರು ಗಾಳಿಯೊಂದಿಗೆ ಮಳೆಯಾಗುತ್ತಿದೆ.</p>.<p>ಶನಿವಾರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಆಗಾಗ ಮಳೆಯಾಗಿತ್ತು. ಗಾಳಿಯ ಅಬ್ಬರವೂ ಜೋರಾಗಿತ್ತು. ಈ ವಾತಾವರಣ ನಗರದಲ್ಲಿ ಭಾನುವಾರವೂ ಮುಂದುವರಿದಿದೆ.</p>.<p>ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಈ ಸಮಯದಲ್ಲಿ ರಸ್ತೆಬದಿ ವ್ಯಾಪಾರಿಗಳು ಒಂದಷ್ಟು ವ್ಯಾಪಾರ ಮಾಡಿಕೊಳ್ಳುತ್ತಿದ್ದರು ಮತ್ತು ಗ್ರಾಹಕರು ತರಕಾರಿ, ಹಾಲು, ಹಣ್ಣು, ಮಾಂಸ ಮೊದಲಾದವುಗಳನ್ನು ತಂದುಕೊಳ್ಳುತ್ತಿದ್ದರು. ಮಳೆಯಿಂದಾಗಿ ಅವರು ತೊಂದರೆ ಅನುಭವಿಸಿದರು. ವಾಯುವಿಹಾರಕ್ಕೆ ಹೋಗುವವರಲ್ಲಿ ಬಹುತೇಕರು ಮನೆಯಲ್ಲೇ ಉಳಿದರು.</p>.<p><a href="https://www.prajavani.net/karnataka-news/tauktae-cyclone-effect-relocation-of-more-than-80-families-karnatakas-coastal-districts-830860.html" itemprop="url">‘ತೌಕ್ತೆ’ ಚಂಡಮಾರುತ ಅಬ್ಬರಕ್ಕೆ ಕಡಲ್ಕೊರೆತ: 80ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ </a></p>.<p>ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ದಿನದ ಬಹುತೇಕ ಸಮಯ ಜೋರು ಗಾಳಿ ಮುಂದುವರಿಯಲಿದೆ ಹಾಗೂ ಆಗಾಗ ಮಳೆಯಾಗುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>