<p><strong>ಬೆಳಗಾವಿ:</strong> ‘ಕೋವಿಡ್-19 ನಂತರದ ಜಗತ್ತಿನಲ್ಲಿ ಸಂವಹನ ಕೌಶಲಕ್ಕೆ ತಂತ್ರಜ್ಞಾನ ಸಾಕ್ಷರತೆಯು ಅತ್ಯವಶ್ಯವಾಗಿದೆ’ ಎಂದುಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಸುಮಿತಾ ರಾಯ್ ಹೇಳಿದರು.</p>.<p>ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಿಂದ ‘ಎಫೆಕ್ಟಿವ್ ಕಮ್ಯುನಿಕೇಷನ್ ಸ್ಕಿಲ್ ಇನ್ ದ ಡಿಜಿಟಲ್ ಎರಾ’ ಎಂಬ ವಿಷಯ ಕುರಿತು ಈಚೆಗೆ ಆಯೋಜಿಸಿದ್ದ ಆನ್ಲೈನ್ ಅಂತರರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಕೊರೊನಾ ಸೃಷ್ಟಿಸಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಮೂಲಕ ನಾವು ಸುಧಾರಣೆ ಕಾಣಬೇಕು. ಇದಕ್ಕಾಗಿ ತಂತ್ರಜ್ಞಾನ ಬಳಸಿಕೊಳ್ಳಬೇಕಾಗಿದೆ’ ಎಂದರು.</p>.<p>ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಉದ್ಘಾಟಿಸಿದರು. ವಿಭಾಗ ಮುಖ್ಯಸ್ಥ ಪ್ರೊ.ವಿ.ಎಫ್. ನಾಗಣ್ಣವರ ಮಾತನಾಡಿದರು.</p>.<p>ಮೊದಲ ಗೋಷ್ಠಿಯಲ್ಲಿ ಡಾ.ಅಜಯ ಚೊಬೆ ಅವರು ‘ಭಾಷಾ ಪರಿಣತಿ ಮತ್ತು ಪ್ರಬಂದ ಮಂಡನಾ ಕೌಶಲ’, 2ನೇ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಜೋಧಪುರದ ಜೈ ನಾರಾಯಣ ವ್ಯಾಸ ವಿಶ್ವವಿದ್ಯಾಲಯದ ಡಾ.ವಿಭಾ ಭೂತ ‘ವರ್ಚಸ್ಸು ನಿಯಮಗಳು: ಸಂಭಾಷಣೆಯ ಮಹತ್ವ’ ವಿಷಯ ಕುರಿತು ಮಾತನಾಡಿದರು.</p>.<p>3ನೇ ಗೋಷ್ಠಿಯಲ್ಲಿ ಅಮೆರಿಕದ ಪ್ರೊ.ನೀಲಾ ಭಟ್ಟಾಚಾರ್ಯ ಅವರು ‘ಸಂವಹನವು ಸಮ್ಮಿಲನ: ತಂತ್ರಜ್ಞಾನ ಯುಗದಲ್ಲಿ ಅನುಕರಣೆಯ ಅನಾವರಣ’ ವಿಷಯದ ಬಗ್ಗೆ ವಿಷಯ ಮಂಡಿಸಿದರು.</p>.<p>ವಿಚಾರಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ನಾಗರತ್ನಾ ಪರಾಂಡೆ ಸ್ವಾಗತಿಸಿದರು. ಪೂಜಾ ಹಲ್ಯಾಳ ನಿರೂಪಿಸಿದರು. ಡಾ.ಕವಿತಾ ಕುಸುಗಲ್ಲ ವಂದಿಸಿದರು.</p>.<p>ಗೋಷ್ಠಿಗಳ ಸಂಯೋಜಕರಾಗಿ ಡಾ.ತಾಂಡವಗೌಡ, ಡಾ.ಫಯಾಜ್ ಅಹಮ್ಮದ್ ಇಳಕಲ್ ಮತ್ತು ಡಾ.ಮಧುಶ್ರೀ ಕಳ್ಳಿಮನಿ ಕಾರ್ಯನಿರ್ವಹಿಸಿದರು.</p>.<p>ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ, ಪ್ರೊ.ಎಸ್.ಎಂ. ಹುರಕಡ್ಲಿ ಹಾಗೂ ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ, ಭೂಗೋಳಶಾಸ್ತ್ರ ವಿಭಾಗದ ಡಾ.ಬಸವರಾಜ ಬಗಾಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಕೋವಿಡ್-19 ನಂತರದ ಜಗತ್ತಿನಲ್ಲಿ ಸಂವಹನ ಕೌಶಲಕ್ಕೆ ತಂತ್ರಜ್ಞಾನ ಸಾಕ್ಷರತೆಯು ಅತ್ಯವಶ್ಯವಾಗಿದೆ’ ಎಂದುಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಸುಮಿತಾ ರಾಯ್ ಹೇಳಿದರು.</p>.<p>ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಿಂದ ‘ಎಫೆಕ್ಟಿವ್ ಕಮ್ಯುನಿಕೇಷನ್ ಸ್ಕಿಲ್ ಇನ್ ದ ಡಿಜಿಟಲ್ ಎರಾ’ ಎಂಬ ವಿಷಯ ಕುರಿತು ಈಚೆಗೆ ಆಯೋಜಿಸಿದ್ದ ಆನ್ಲೈನ್ ಅಂತರರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಕೊರೊನಾ ಸೃಷ್ಟಿಸಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಮೂಲಕ ನಾವು ಸುಧಾರಣೆ ಕಾಣಬೇಕು. ಇದಕ್ಕಾಗಿ ತಂತ್ರಜ್ಞಾನ ಬಳಸಿಕೊಳ್ಳಬೇಕಾಗಿದೆ’ ಎಂದರು.</p>.<p>ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಉದ್ಘಾಟಿಸಿದರು. ವಿಭಾಗ ಮುಖ್ಯಸ್ಥ ಪ್ರೊ.ವಿ.ಎಫ್. ನಾಗಣ್ಣವರ ಮಾತನಾಡಿದರು.</p>.<p>ಮೊದಲ ಗೋಷ್ಠಿಯಲ್ಲಿ ಡಾ.ಅಜಯ ಚೊಬೆ ಅವರು ‘ಭಾಷಾ ಪರಿಣತಿ ಮತ್ತು ಪ್ರಬಂದ ಮಂಡನಾ ಕೌಶಲ’, 2ನೇ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಜೋಧಪುರದ ಜೈ ನಾರಾಯಣ ವ್ಯಾಸ ವಿಶ್ವವಿದ್ಯಾಲಯದ ಡಾ.ವಿಭಾ ಭೂತ ‘ವರ್ಚಸ್ಸು ನಿಯಮಗಳು: ಸಂಭಾಷಣೆಯ ಮಹತ್ವ’ ವಿಷಯ ಕುರಿತು ಮಾತನಾಡಿದರು.</p>.<p>3ನೇ ಗೋಷ್ಠಿಯಲ್ಲಿ ಅಮೆರಿಕದ ಪ್ರೊ.ನೀಲಾ ಭಟ್ಟಾಚಾರ್ಯ ಅವರು ‘ಸಂವಹನವು ಸಮ್ಮಿಲನ: ತಂತ್ರಜ್ಞಾನ ಯುಗದಲ್ಲಿ ಅನುಕರಣೆಯ ಅನಾವರಣ’ ವಿಷಯದ ಬಗ್ಗೆ ವಿಷಯ ಮಂಡಿಸಿದರು.</p>.<p>ವಿಚಾರಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ನಾಗರತ್ನಾ ಪರಾಂಡೆ ಸ್ವಾಗತಿಸಿದರು. ಪೂಜಾ ಹಲ್ಯಾಳ ನಿರೂಪಿಸಿದರು. ಡಾ.ಕವಿತಾ ಕುಸುಗಲ್ಲ ವಂದಿಸಿದರು.</p>.<p>ಗೋಷ್ಠಿಗಳ ಸಂಯೋಜಕರಾಗಿ ಡಾ.ತಾಂಡವಗೌಡ, ಡಾ.ಫಯಾಜ್ ಅಹಮ್ಮದ್ ಇಳಕಲ್ ಮತ್ತು ಡಾ.ಮಧುಶ್ರೀ ಕಳ್ಳಿಮನಿ ಕಾರ್ಯನಿರ್ವಹಿಸಿದರು.</p>.<p>ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ, ಪ್ರೊ.ಎಸ್.ಎಂ. ಹುರಕಡ್ಲಿ ಹಾಗೂ ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ, ಭೂಗೋಳಶಾಸ್ತ್ರ ವಿಭಾಗದ ಡಾ.ಬಸವರಾಜ ಬಗಾಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>