<p><strong>ಬೆಳಗಾವಿ:</strong> ಜಿಲ್ಲೆಯಲ್ಲಿ ಕೋವಿಡ್ 1ನೇ ಹಾಗೂ 2ನೇ ಅಲೆಯ ಸಂದರ್ಭದಲ್ಲಿ 17 ಮಕ್ಕಳು ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಬರೋಬ್ಬರಿ 2,745 ಮಕ್ಕಳು ತಂದೆ ಅಥವಾ ತಾಯಿಯ ಆಸರೆಯಿಂದ ದೂರಾಗಿ ಏಕ ಪೋಷಕರ ಆಶ್ರಯದಲ್ಲಿದ್ದಾರೆ.</p>.<p>ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪಟ್ಟಿ ಸಿದ್ಧಪಡಿಸಿದೆ.</p>.<p>ಕೋವಿಡ್ ಸೋಂಕು ನೂರಾರು ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟು ಅತಂತ್ರವನ್ನಾಗಿಸಿದೆ. ಕಂಗಾಲಾಗಿರುವ ಮಕ್ಕಳು ಬಂಧುಗಳ ಆಸರೆಯಲ್ಲಿದ್ದಾರೆ. ತಂದೆ–ತಾಯಿಯ ಪ್ರೀತಿ–ಮಮತೆಯಿಂದ ವಂಚಿತವಾಗಿದ್ದಾರೆ. ಬಾಲ್ಯದಲ್ಲೇ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಮತ್ತು ಅನ್ಯರ ಆಶ್ರಯದ ಅನಿವಾರ್ಯಯಲ್ಲಿದ್ದಾರೆ.</p>.<p class="Subhead"><strong>ಸೋಂಕಿನ ಕಾರಣದಿಂದ:</strong></p>.<p>17 ಮಕ್ಕಳು ಕೋವಿಡ್ಗಿಂತ ಮುಂಚೆ ಅನಾರೋಗ್ಯ ಮತ್ತಿತರ ಕಾರಣಗಳಿಂದ ತಂದೆ ಅಥವಾ ತಾಯಿ ಕಳೆದುಕೊಂಡು ಏಕ ಪೋಷಕರ ಆರೈಕೆಯಲ್ಲಿದ್ದರು. ಬರಸಿಡಿಲಿನಂತೆ ಬಂದೆರಗಿದ ಕೋವಿಡ್ ಸೋಂಕು, ಇದ್ದ ತಂದೆ ಅಥವಾ ತಾಯಿಯನ್ನೂ ಕಿತ್ತುಕೊಂಡು ಆ ಮಕ್ಕಳನ್ನು ಅನಾಥರನ್ನಾಗಿಸಿದೆ.</p>.<p>ಕೋವಿಡ್ನಿಂದಾಗಿ ಒಬ್ಬ ಪೋಷಕರನ್ನು ಕಳೆದುಕೊಂಡು, ಏಕ ಪೋಷಕರ ಆರೈಕೆಯಲ್ಲಿರುವವರೆ ಹೆಚ್ಚಿದ್ದಾರೆ. ಅವರಲ್ಲಿ ಬಹುತೇಕ ಕುಟುಂಬಗಳು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವಾಗಿವೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.</p>.<p>‘17 ಮಕ್ಕಳಲ್ಲಿ ಮಂಗಳವಾರದವರೆಗೆ 14 ಮಕ್ಕಳಿಗೆ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ಯಲ್ಲಿ ತಿಂಗಳಿಗೆ ₹ 3,500 ಆರ್ಥಿಕ ನೆರವು ಒದಗಿಸಲಾಗುತ್ತಿದೆ. 18 ವರ್ಷ ವಯಸ್ಸಿನವರೆಗೂ ಅವರಿಗೆ ಈ ಪರಿಹಾರ ದೊರೆಯಲಿದೆ ಎಂದು ಸರ್ಕಾರ ತಿಳಿಸಿದೆ. ಈಗಾಗಲೇ ₹ 1.33 ಲಕ್ಷವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಖಸಾಗರೆ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಉಳಿದ ಮೂರು ಮಕ್ಕಳ ಮಾಹಿತಿಯನ್ನೂ ನಿಗದಿತ ತಂತ್ರಾಂಶದಲ್ಲಿ ಶೀಘ್ರದಲ್ಲೇ ದಾಖಲಿಸಲಾಗುವುದು. ಅವರಿಗೂ ಪ್ರತಿ ತಿಂಗಳು ನೆರವು ಸಿಗಲಿದೆ’ ಎನ್ನುತ್ತಾರೆ ಅವರು.</p>.<p class="Subhead"><strong>23 ವರ್ಷವಾದಾಗ ₹ 10 ಲಕ್ಷ:</strong></p>.<p>ಈ ಎಲ್ಲ 17 ಮಕ್ಕಳಿಗೂ ‘ಪಿಎಂ ಕೇರ್ಸ್’ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ನೆರವು ಸಿಗಲಿದೆ. ಸರ್ಕಾರದ ಸೂಚನೆಯಂತೆ ಬಾಲಸ್ವರಾಜ್ ಪೋರ್ಟಲ್ನಲ್ಲಿ ಸಂಪೂರ್ಣ ಮಾಹಿತಿಯನ್ನು ದಾಖಲಿಸಲಾಗಿದೆ. ಅಂಚೆ ಕಚೇರಿಗಳಲ್ಲಿ ಖಾತೆಗಳನ್ನೂ ತೆರೆಯಲಾಗಿದೆ. ಫಲಾನುಭವಿ ಹಾಗೂ ಜಿಲ್ಲಾಧಿಕಾರಿ ಹೆಸರಿನ ಜಂಟಿ ಖಾತೆ ಇದಾಗಿರುತ್ತದೆ.</p>.<p>ಫಲಾನುಭವಿಗೆ 18 ವರ್ಷವಾದಾಗ ₹ 10 ಲಕ್ಷ ಪರಿಹಾರ ಅವರ ಖಾತೆಗೆ ಜಮೆಯಾಗುತ್ತದೆ. 23 ವರ್ಷ ವಯಸ್ಸಾದಾಗ ದಾಖಲೆಗಳನ್ನು ಪ್ರಸ್ತುತಪಡಿಸಿ ಖಾತೆಯಿಂದ ಹಣ ಪಡೆದುಕೊಳ್ಳಬಹುದು (ವಿತ್ ಡ್ರಾ). ₹ 10 ಲಕ್ಷಕ್ಕೆ 5 ವರ್ಷದ ಬಡ್ಡಿಯನ್ನೂ ಸೇರಿಸಲಾಗುವುದು. ಅದೂ ಕೂಡ ಸಿಗಲಿದೆ ಎಂದು ತಿಳಿಸಲಾಗಿದೆ. ಅಂಚೆ ಕಚೇರಿಯಲ್ಲಿ ತೆರೆದಿರುವ ಖಾತೆಗೆ ಸಂಬಂಧಿಸಿದ ಪಾಸ್ಬುಕ್ ಅನ್ನು ಫಲಾನುಭವಿಗಳು ಅಥವಾ ಚಿಕ್ಕ ಮಕ್ಕಳಾಗಿದ್ದರೆ ಅವರ ಬಂಧುಗಳಿಗೆ ನೀಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.</p>.<p>ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ 11 ಮಂದಿ ಮಕ್ಕಳು ಕೋವಿಡೇತರ ಸಮಸ್ಯೆಯಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅವರ ಶಿಕ್ಷಣಕ್ಕೆ ಹಾಗೂ ಹಾಸ್ಟೆಲ್ಗಳ ಪ್ರವೇಶಕ್ಕೆ ಮಾತ್ರವೇ ನೆರವು ಒದಗಿಸಲಾಗಿದೆ. ಪರಿಹಾರ ಕೊಡವುದಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.</p>.<p class="Briefhead"><strong>ಇನ್ನೂರಷ್ಟೆ ಗುರಿ!</strong></p>.<p>ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ತಂದೆ ಅಥವಾ ತಾಯಿ ಕಳೆದುಕೊಂಡ 2,745 ಮಕ್ಕಳು ಏಕಪೋಷಕರ ಆರೈಕೆಯಲ್ಲಿದ್ದಾರೆ. ಅಂತಹ ಮಕ್ಕಳಿಗೆ ತಿಂಗಳಿಗೆ ₹ 1ಸಾವಿರ ನೀಡುವ ಯೋಜನೆ ಇದೆ. ಅದರಲ್ಲಿ ಜಿಲ್ಲೆಗೆ 200 ಮಕ್ಕಳ ಗುರಿಯನ್ನಷ್ಟೆ ಕೊಡಲಾಗಿದೆ! ಉಳಿದ ಮಕ್ಕಳಿಗೆ ಆರ್ಥಿಕ ನೆರವು ಸಿಗದಿರುವ ಸಾಧ್ಯತೆ ಇದೆ.</p>.<p>‘ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಎಲ್ಲ ಮಕ್ಕಳ ಮಾಹಿತಿ ಮತ್ತು ದಾಖಲೆಗಳನ್ನೂ ಸಂಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ನಿಜವಾಗಿಯೂ ನೆರವು ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯು ಆಯ್ಕೆ ಮಾಡುತ್ತದೆ. 3 ವರ್ಷದವರೆಗೆ ಪ್ರತಿ ತಿಂಗಳು ₹ 1ಸಾವಿರ ನೆರವು ಅವರಿಗೆ ದೊರೆಯಲಿದೆ. ಹಾಸ್ಟೆಲ್ ಅವಶ್ಯವಿದ್ದಲ್ಲಿ ಆದ್ಯತೆ ಮೇರೆಗೆ ಮಾಡಲಾಗುವುದು. ಈವರೆಗೆ 35 ಮಕ್ಕಳಿಗೆ ಬಾಲಮಂದಿರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.</p>.<p class="Briefhead"><strong>18ರ ನಂತರ ‘ಉಪಕಾರ್’</strong></p>.<p>ಸರ್ಕಾರಿ ಬಾಲಮಂದಿರದಲ್ಲಿ ಆಸರೆ ಪಡೆದವರನ್ನು 18 ವರ್ಷದ ನಂತರ ಅಲ್ಲಿಂದ ಬಿಡುಗಡೆ ಕಳುಹಿಸಬೇಕಾಗುತ್ತದೆ. ಅಂತಹ ಬಡ ಅಥವಾ ಅನಾಥ ಮಕ್ಕಳಿಗೆ ಆರ್ಥಿಕವಾಗಿ ನೆರವು ಒದಗಿಸಲು ‘ಉಪಕಾರ್’ ಯೋಜನೆ ಜಾರಿಗೊಳಿಸಲಾಗಿದೆ. ಅವರಿಗೆ ಪ್ರತಿ ತಿಂಗಳೂ ₹ 5ಸಾವಿರ ಕೊಡಲಾಗುವುದು. ಈ ಸಾಲಿನಲ್ಲಿ 10 ಮಂದಿ ಆ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಇನ್ನೂ 12 ಮಂದಿಗೆ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಜಿಲ್ಲೆಯಲ್ಲಿ ಕೋವಿಡ್ 1ನೇ ಹಾಗೂ 2ನೇ ಅಲೆಯ ಸಂದರ್ಭದಲ್ಲಿ 17 ಮಕ್ಕಳು ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಬರೋಬ್ಬರಿ 2,745 ಮಕ್ಕಳು ತಂದೆ ಅಥವಾ ತಾಯಿಯ ಆಸರೆಯಿಂದ ದೂರಾಗಿ ಏಕ ಪೋಷಕರ ಆಶ್ರಯದಲ್ಲಿದ್ದಾರೆ.</p>.<p>ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪಟ್ಟಿ ಸಿದ್ಧಪಡಿಸಿದೆ.</p>.<p>ಕೋವಿಡ್ ಸೋಂಕು ನೂರಾರು ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟು ಅತಂತ್ರವನ್ನಾಗಿಸಿದೆ. ಕಂಗಾಲಾಗಿರುವ ಮಕ್ಕಳು ಬಂಧುಗಳ ಆಸರೆಯಲ್ಲಿದ್ದಾರೆ. ತಂದೆ–ತಾಯಿಯ ಪ್ರೀತಿ–ಮಮತೆಯಿಂದ ವಂಚಿತವಾಗಿದ್ದಾರೆ. ಬಾಲ್ಯದಲ್ಲೇ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಮತ್ತು ಅನ್ಯರ ಆಶ್ರಯದ ಅನಿವಾರ್ಯಯಲ್ಲಿದ್ದಾರೆ.</p>.<p class="Subhead"><strong>ಸೋಂಕಿನ ಕಾರಣದಿಂದ:</strong></p>.<p>17 ಮಕ್ಕಳು ಕೋವಿಡ್ಗಿಂತ ಮುಂಚೆ ಅನಾರೋಗ್ಯ ಮತ್ತಿತರ ಕಾರಣಗಳಿಂದ ತಂದೆ ಅಥವಾ ತಾಯಿ ಕಳೆದುಕೊಂಡು ಏಕ ಪೋಷಕರ ಆರೈಕೆಯಲ್ಲಿದ್ದರು. ಬರಸಿಡಿಲಿನಂತೆ ಬಂದೆರಗಿದ ಕೋವಿಡ್ ಸೋಂಕು, ಇದ್ದ ತಂದೆ ಅಥವಾ ತಾಯಿಯನ್ನೂ ಕಿತ್ತುಕೊಂಡು ಆ ಮಕ್ಕಳನ್ನು ಅನಾಥರನ್ನಾಗಿಸಿದೆ.</p>.<p>ಕೋವಿಡ್ನಿಂದಾಗಿ ಒಬ್ಬ ಪೋಷಕರನ್ನು ಕಳೆದುಕೊಂಡು, ಏಕ ಪೋಷಕರ ಆರೈಕೆಯಲ್ಲಿರುವವರೆ ಹೆಚ್ಚಿದ್ದಾರೆ. ಅವರಲ್ಲಿ ಬಹುತೇಕ ಕುಟುಂಬಗಳು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವಾಗಿವೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.</p>.<p>‘17 ಮಕ್ಕಳಲ್ಲಿ ಮಂಗಳವಾರದವರೆಗೆ 14 ಮಕ್ಕಳಿಗೆ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ಯಲ್ಲಿ ತಿಂಗಳಿಗೆ ₹ 3,500 ಆರ್ಥಿಕ ನೆರವು ಒದಗಿಸಲಾಗುತ್ತಿದೆ. 18 ವರ್ಷ ವಯಸ್ಸಿನವರೆಗೂ ಅವರಿಗೆ ಈ ಪರಿಹಾರ ದೊರೆಯಲಿದೆ ಎಂದು ಸರ್ಕಾರ ತಿಳಿಸಿದೆ. ಈಗಾಗಲೇ ₹ 1.33 ಲಕ್ಷವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಖಸಾಗರೆ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಉಳಿದ ಮೂರು ಮಕ್ಕಳ ಮಾಹಿತಿಯನ್ನೂ ನಿಗದಿತ ತಂತ್ರಾಂಶದಲ್ಲಿ ಶೀಘ್ರದಲ್ಲೇ ದಾಖಲಿಸಲಾಗುವುದು. ಅವರಿಗೂ ಪ್ರತಿ ತಿಂಗಳು ನೆರವು ಸಿಗಲಿದೆ’ ಎನ್ನುತ್ತಾರೆ ಅವರು.</p>.<p class="Subhead"><strong>23 ವರ್ಷವಾದಾಗ ₹ 10 ಲಕ್ಷ:</strong></p>.<p>ಈ ಎಲ್ಲ 17 ಮಕ್ಕಳಿಗೂ ‘ಪಿಎಂ ಕೇರ್ಸ್’ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ನೆರವು ಸಿಗಲಿದೆ. ಸರ್ಕಾರದ ಸೂಚನೆಯಂತೆ ಬಾಲಸ್ವರಾಜ್ ಪೋರ್ಟಲ್ನಲ್ಲಿ ಸಂಪೂರ್ಣ ಮಾಹಿತಿಯನ್ನು ದಾಖಲಿಸಲಾಗಿದೆ. ಅಂಚೆ ಕಚೇರಿಗಳಲ್ಲಿ ಖಾತೆಗಳನ್ನೂ ತೆರೆಯಲಾಗಿದೆ. ಫಲಾನುಭವಿ ಹಾಗೂ ಜಿಲ್ಲಾಧಿಕಾರಿ ಹೆಸರಿನ ಜಂಟಿ ಖಾತೆ ಇದಾಗಿರುತ್ತದೆ.</p>.<p>ಫಲಾನುಭವಿಗೆ 18 ವರ್ಷವಾದಾಗ ₹ 10 ಲಕ್ಷ ಪರಿಹಾರ ಅವರ ಖಾತೆಗೆ ಜಮೆಯಾಗುತ್ತದೆ. 23 ವರ್ಷ ವಯಸ್ಸಾದಾಗ ದಾಖಲೆಗಳನ್ನು ಪ್ರಸ್ತುತಪಡಿಸಿ ಖಾತೆಯಿಂದ ಹಣ ಪಡೆದುಕೊಳ್ಳಬಹುದು (ವಿತ್ ಡ್ರಾ). ₹ 10 ಲಕ್ಷಕ್ಕೆ 5 ವರ್ಷದ ಬಡ್ಡಿಯನ್ನೂ ಸೇರಿಸಲಾಗುವುದು. ಅದೂ ಕೂಡ ಸಿಗಲಿದೆ ಎಂದು ತಿಳಿಸಲಾಗಿದೆ. ಅಂಚೆ ಕಚೇರಿಯಲ್ಲಿ ತೆರೆದಿರುವ ಖಾತೆಗೆ ಸಂಬಂಧಿಸಿದ ಪಾಸ್ಬುಕ್ ಅನ್ನು ಫಲಾನುಭವಿಗಳು ಅಥವಾ ಚಿಕ್ಕ ಮಕ್ಕಳಾಗಿದ್ದರೆ ಅವರ ಬಂಧುಗಳಿಗೆ ನೀಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.</p>.<p>ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ 11 ಮಂದಿ ಮಕ್ಕಳು ಕೋವಿಡೇತರ ಸಮಸ್ಯೆಯಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅವರ ಶಿಕ್ಷಣಕ್ಕೆ ಹಾಗೂ ಹಾಸ್ಟೆಲ್ಗಳ ಪ್ರವೇಶಕ್ಕೆ ಮಾತ್ರವೇ ನೆರವು ಒದಗಿಸಲಾಗಿದೆ. ಪರಿಹಾರ ಕೊಡವುದಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.</p>.<p class="Briefhead"><strong>ಇನ್ನೂರಷ್ಟೆ ಗುರಿ!</strong></p>.<p>ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ತಂದೆ ಅಥವಾ ತಾಯಿ ಕಳೆದುಕೊಂಡ 2,745 ಮಕ್ಕಳು ಏಕಪೋಷಕರ ಆರೈಕೆಯಲ್ಲಿದ್ದಾರೆ. ಅಂತಹ ಮಕ್ಕಳಿಗೆ ತಿಂಗಳಿಗೆ ₹ 1ಸಾವಿರ ನೀಡುವ ಯೋಜನೆ ಇದೆ. ಅದರಲ್ಲಿ ಜಿಲ್ಲೆಗೆ 200 ಮಕ್ಕಳ ಗುರಿಯನ್ನಷ್ಟೆ ಕೊಡಲಾಗಿದೆ! ಉಳಿದ ಮಕ್ಕಳಿಗೆ ಆರ್ಥಿಕ ನೆರವು ಸಿಗದಿರುವ ಸಾಧ್ಯತೆ ಇದೆ.</p>.<p>‘ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಎಲ್ಲ ಮಕ್ಕಳ ಮಾಹಿತಿ ಮತ್ತು ದಾಖಲೆಗಳನ್ನೂ ಸಂಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ನಿಜವಾಗಿಯೂ ನೆರವು ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯು ಆಯ್ಕೆ ಮಾಡುತ್ತದೆ. 3 ವರ್ಷದವರೆಗೆ ಪ್ರತಿ ತಿಂಗಳು ₹ 1ಸಾವಿರ ನೆರವು ಅವರಿಗೆ ದೊರೆಯಲಿದೆ. ಹಾಸ್ಟೆಲ್ ಅವಶ್ಯವಿದ್ದಲ್ಲಿ ಆದ್ಯತೆ ಮೇರೆಗೆ ಮಾಡಲಾಗುವುದು. ಈವರೆಗೆ 35 ಮಕ್ಕಳಿಗೆ ಬಾಲಮಂದಿರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.</p>.<p class="Briefhead"><strong>18ರ ನಂತರ ‘ಉಪಕಾರ್’</strong></p>.<p>ಸರ್ಕಾರಿ ಬಾಲಮಂದಿರದಲ್ಲಿ ಆಸರೆ ಪಡೆದವರನ್ನು 18 ವರ್ಷದ ನಂತರ ಅಲ್ಲಿಂದ ಬಿಡುಗಡೆ ಕಳುಹಿಸಬೇಕಾಗುತ್ತದೆ. ಅಂತಹ ಬಡ ಅಥವಾ ಅನಾಥ ಮಕ್ಕಳಿಗೆ ಆರ್ಥಿಕವಾಗಿ ನೆರವು ಒದಗಿಸಲು ‘ಉಪಕಾರ್’ ಯೋಜನೆ ಜಾರಿಗೊಳಿಸಲಾಗಿದೆ. ಅವರಿಗೆ ಪ್ರತಿ ತಿಂಗಳೂ ₹ 5ಸಾವಿರ ಕೊಡಲಾಗುವುದು. ಈ ಸಾಲಿನಲ್ಲಿ 10 ಮಂದಿ ಆ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಇನ್ನೂ 12 ಮಂದಿಗೆ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>