‘ಕೊರೊನಾ ಆತಂಕ ನಿವಾರಣೆಯಾಗದೆ ಇರುವುದರಿಂದಾಗಿ, ಸಾರಿಗೆ ಬಸ್ಗಳಲ್ಲಿ ಸಂಚರಿಸಲು ಪ್ರಯಾಣಿಕರು ನಿರೀಕ್ಷಿಸಿದಷ್ಟು ಬರುತ್ತಿಲ್ಲ. ಇದರಿಂದಾಗಿ, ಈಗ ಸಿಗುತ್ತಿರುವ ವರಮಾನವು ಬಸ್ಗಳ ಡೀಸೆಲ್ಗೆ ಮಾತ್ರವೇ ಸಾಕಾಗುತ್ತಿದೆ. ಹೀಗಾಗಿ ವೇತನ ಕೊಡಲು ನಮ್ಮ ಬಳಿ ಹಣವಿಲ್ಲದಾಗಿದೆ. ಆದ್ದರಿಂದ ನೌಕರರಿಗೆ ಸಂಬಳ ಬಿಡುಗಡೆಯಲ್ಲಿ ತೊಂದರೆ ಆಗುತ್ತಿದೆ’ ಎಂದು ಮಾಹಿತಿ ನೀಡಿದರು.