ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ: ಇಂದ್ರಿಯಗಳ ಬಲೆಗೆ ಸಿಲುಕಬಾರದು

Last Updated 3 ನವೆಂಬರ್ 2021, 10:58 IST
ಅಕ್ಷರ ಗಾತ್ರ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

––––––––

ಕಾಯವಿಕಾರ ಕಾಡಿಹುದಯ್ಯಾ;

ಮನೋವಿಕಾರ ಕೂಡಿಹುದಯ್ಯಾ;

ಇಂದ್ರಿಯವಿಕಾರ ಸುಳಿವುದಯ್ಯಾ!

ಸುಳಿವಿನೊಳಗೆ ಸುಳಿಯುತ್ತಲಿದ್ದೇನೆ;

ಸಿಲುಕಿಸದಿರಯ್ಯಾ!

ಅನ್ಯ ಚಿತ್ತವಿರಸದಿರಯ್ಯಾ; ನಿಮ್ಮ ಚಿತ್ತವಿರಿಸಯ್ಯಾ!

ಕೂಡಲಸಂಗಮ ದೇವಾ, ಇದನೆ ಬೇಡುವೆನಯ್ಯಾ!

ಈ ಜಗತ್ತಿನಲ್ಲಿಯೆ ಬುದ್ಧಿವಂತ ಪ್ರಾಣಿಯೆಂದರೆ ಮನುಷ್ಯ. ಅವನಲ್ಲಿರುವ ಅತಿಯಾದ ಬುದ್ಧಿವಂತಿಕೆಯೇ ಒಮ್ಮೊಮ್ಮೆ ಅವನನ್ನು ದುಷ್ಟನನ್ನಾಗಿ ಮಾಡುತ್ತದೆ. ಅದಕ್ಕೆ ಬಸವಣ್ಣನವರು ಇಲ್ಲಿ ಮನುಷ್ಯನಿಗೆ ಯಾವ ಯಾವ ರೀತಿಯ ವಿಕಾರಗಳು ಕಾಡುತ್ತವೆ ಎನ್ನುವುದರ ಕುರಿತಾಗಿ ವಚನದ ಮೂಲಕ ವಿವರಿಸಿದ್ದಾರೆ. ನಮ್ಮ ಶರೀರವು ಸುಖಾಪೇಕ್ಷಿಯಾಗಿರುವುದರಿಂದ ಸದಾ ಕಾಲ ದೈಹಿಕ ಆನಂದವನ್ನೆ ಬಯಸುತ್ತದೆ. ಮನಸ್ಸು ತನಗೆ ಬೇಕಾದುದನ್ನೇ ಬಯಸುತ್ತದೆ. ಇಂದ್ರಿಯಗಳು ತಮಗೆ ಇಷ್ಟವಾದುದರ ಕುರಿತಾಗಿಯೆ ಚಿಂತಿಸುತ್ತವೆ. ಇಂತಹ ಸಂದರ್ಭದಲ್ಲಿ ಒಳ್ಳೆಯ ವಿಷಯಗಳ ಕುರಿತು ಚಿಂತಿಸಲು ಸಮಯವೇ ಸಿಗುವುದಿಲ್ಲ. ದೇಹ, ಮನಸ್ಸು, ಇಂದ್ರಿಯಗಳ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇನೆ. ಇವುಗಳ ಕುರಿತು ಚಿಂತಿಸದೆ ಸದಾಕಾಲ ನಿನ್ನದೆ ಧ್ಯಾನ ಮಾಡುವಂತೆ ಮಾಡಯ್ಯ. ಇದನ್ನಲ್ಲದೆ ಮತ್ತೇನನ್ನೂ ಬೇಡೆನು ಎಂದು ಪ್ರಾರ್ಥಿಸಿದ್ದಾರೆ ಬಸವಣ್ಣ. ನಾವೂ ಅವರನ್ನೆ ಪಾಲಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT