<p>ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ</p>.<p>ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ</p>.<p>ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ</p>.<p>ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ</p>.<p>ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ!</p>.<p>ಕೂಡಲಸಂಗಮದೇವ ಶ್ವಪಚನ ಮೆರೆದಡೆ ಜಾತಿಭೇದವ ಮಾಡಲಮ್ಮವು.</p>.<p>ಶಿವನ ನಾಮಸ್ಮರಣೆಯ ಶ್ರೇಷ್ಠತೆಯನ್ನು ಇಲ್ಲಿ ಕಾಣಬಹುದು. ಶಿವನ ಸ್ಮರಣೆಯು ವೇದ, ಶಾಸ್ತ್ರ, ತರ್ಕಗಳಿಗೆ ಮೀರಿದುದಾಗಿದೆ. ವೇದವು ಶಬ್ದ ಪ್ರಮಾಣವಾಗಿದ್ದು, ಎಲ್ಲಕ್ಕಿಂತ ಮೂಲ ಎನ್ನುತ್ತಾರೆ. ಅದಕ್ಕಿಂತಲೂ ಮೂಲವಾದುದು ನಿರಾಕಾರ ಸೃಷ್ಟಿಕರ್ತ ಪರಮಾತ್ಮನಾಗಿದ್ದಾನೆ. ಶಾಸ್ತ್ರವು ವೈಚಾರಿಕವಾದುದು; ಪ್ರತಿಯೊಂದರ ಕುರಿತು ವಿವರವಾಗಿ ಚಿಂತನೆ ಮಾಡುತ್ತದೆ. ಇಂತಹ ಶಾಸ್ತ್ರಕ್ಕೂ ಪರಶಿವನ ಶಕ್ತಿಯ ಕುರಿತಾದ ಅರಿವು ಸಾಧ್ಯವಾಗಿಲ್ಲ. ತರ್ಕವು ಬೌದ್ಧಿಕವಾದುದು. ಪ್ರತಿಯೊಂದರ ಕುರಿತಾಗಿ ಆಮೂಲಾಗ್ರವಾಗಿ ಆಲೋಚನೆ ಮಾಡುತ್ತದೆ. ಅಂತಹ ತರ್ಕಕ್ಕೂ ನಿಲುಕಲಾರದುದು ಶಿವನ ಸ್ಮರಣೆ. ಮನುಷ್ಯನ ಸಾಧನಾ ಸಿದ್ಧಿಗಳು ಮಂತ್ರ-ತಂತ್ರಗಳನ್ನು ಅವಲಂಬಿಸಿವೆ. ಇಂತಹ ಮಂತ್ರ-ತಂತ್ರಗಳಿಗೂ ಶಿವನ ನೆಲೆ ತಿಳಿಸಿಕೊಡಲು ಸಾಧ್ಯವಾಗುತ್ತಿಲ್ಲ. ಶಿವನ ನೆಲೆ ಅರಿಯಲು ಈ ಲೋಕ ಪರದಾಡುತ್ತಿದೆ. ಆತ ಅಸ್ಪೃಶ್ಯನಾದ ಶ್ವಪಚಯ್ಯನಿಗೆ ಒಲಿದಿದ್ದಾನೆ. ಶ್ವಪಚಯ್ಯನಿಗೆ ಒಲಿಯಲು ಶಿವನ ಸ್ಮರಣೆಯನ್ನು ಸದಾ ಕಾಲ ಕಾಯಾ–ವಾಚಾ–ಮನಸಾ ಮಾಡಿದುದು ಕಾರಣವಾಗಿದೆ. ಶಿವನ ಸ್ಮರಣೆಗೆ ಜಾತಿ ಭೇದಗಳು ಅಡ್ಡಿಯಾಗವು ಎನ್ನುವುದು ಈ ಮೇಲಿನ ವಚನದ ತಾತ್ಪರ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ</p>.<p>ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ</p>.<p>ಓಂ ನಮಃ ಶಿವಾಯ ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ</p>.<p>ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ</p>.<p>ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ!</p>.<p>ಕೂಡಲಸಂಗಮದೇವ ಶ್ವಪಚನ ಮೆರೆದಡೆ ಜಾತಿಭೇದವ ಮಾಡಲಮ್ಮವು.</p>.<p>ಶಿವನ ನಾಮಸ್ಮರಣೆಯ ಶ್ರೇಷ್ಠತೆಯನ್ನು ಇಲ್ಲಿ ಕಾಣಬಹುದು. ಶಿವನ ಸ್ಮರಣೆಯು ವೇದ, ಶಾಸ್ತ್ರ, ತರ್ಕಗಳಿಗೆ ಮೀರಿದುದಾಗಿದೆ. ವೇದವು ಶಬ್ದ ಪ್ರಮಾಣವಾಗಿದ್ದು, ಎಲ್ಲಕ್ಕಿಂತ ಮೂಲ ಎನ್ನುತ್ತಾರೆ. ಅದಕ್ಕಿಂತಲೂ ಮೂಲವಾದುದು ನಿರಾಕಾರ ಸೃಷ್ಟಿಕರ್ತ ಪರಮಾತ್ಮನಾಗಿದ್ದಾನೆ. ಶಾಸ್ತ್ರವು ವೈಚಾರಿಕವಾದುದು; ಪ್ರತಿಯೊಂದರ ಕುರಿತು ವಿವರವಾಗಿ ಚಿಂತನೆ ಮಾಡುತ್ತದೆ. ಇಂತಹ ಶಾಸ್ತ್ರಕ್ಕೂ ಪರಶಿವನ ಶಕ್ತಿಯ ಕುರಿತಾದ ಅರಿವು ಸಾಧ್ಯವಾಗಿಲ್ಲ. ತರ್ಕವು ಬೌದ್ಧಿಕವಾದುದು. ಪ್ರತಿಯೊಂದರ ಕುರಿತಾಗಿ ಆಮೂಲಾಗ್ರವಾಗಿ ಆಲೋಚನೆ ಮಾಡುತ್ತದೆ. ಅಂತಹ ತರ್ಕಕ್ಕೂ ನಿಲುಕಲಾರದುದು ಶಿವನ ಸ್ಮರಣೆ. ಮನುಷ್ಯನ ಸಾಧನಾ ಸಿದ್ಧಿಗಳು ಮಂತ್ರ-ತಂತ್ರಗಳನ್ನು ಅವಲಂಬಿಸಿವೆ. ಇಂತಹ ಮಂತ್ರ-ತಂತ್ರಗಳಿಗೂ ಶಿವನ ನೆಲೆ ತಿಳಿಸಿಕೊಡಲು ಸಾಧ್ಯವಾಗುತ್ತಿಲ್ಲ. ಶಿವನ ನೆಲೆ ಅರಿಯಲು ಈ ಲೋಕ ಪರದಾಡುತ್ತಿದೆ. ಆತ ಅಸ್ಪೃಶ್ಯನಾದ ಶ್ವಪಚಯ್ಯನಿಗೆ ಒಲಿದಿದ್ದಾನೆ. ಶ್ವಪಚಯ್ಯನಿಗೆ ಒಲಿಯಲು ಶಿವನ ಸ್ಮರಣೆಯನ್ನು ಸದಾ ಕಾಲ ಕಾಯಾ–ವಾಚಾ–ಮನಸಾ ಮಾಡಿದುದು ಕಾರಣವಾಗಿದೆ. ಶಿವನ ಸ್ಮರಣೆಗೆ ಜಾತಿ ಭೇದಗಳು ಅಡ್ಡಿಯಾಗವು ಎನ್ನುವುದು ಈ ಮೇಲಿನ ವಚನದ ತಾತ್ಪರ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>