<p><strong>ಬೆಳಗಾವಿ:</strong> ‘ವೀರ ಸಾವರ್ಕರ್ ಅವರನ್ನು ಮಹಾಕಾವ್ಯ ಬರೆಯದ ಮಹಾಕವಿ ಎಂದು ಕರೆದಿದ್ದಾರೆ. ಏಕೆಂದರೆ, ಅವರ ಜೀವನವೇ ಮಹಾಕಾವ್ಯವಾಗಿತ್ತು. ಬರೆದಂತೆ ಬದುಕಿದವರು. ರಾಷ್ಟ್ರೀಯತ್ವ ಅವರ ಕವಿತೆಗಳ ವಸ್ತುವಾಗಿದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮರಾಠಿ ವಿಭಾಗದ ಮುಖ್ಯಸ್ಥ ಡಾ.ವಿನೋದ ಗಾಯಕವಾಡ ಹೇಳಿದರು.</p>.<p>ನಗರದ ಶಹಾಪುರದ ಸರಸ್ವತಿ ವಾಚನಾಲಯದಿಂದ ಕೋರೆಗಲ್ಲಿಯ ಸರಸ್ವತಿ ವಾಚನಾಲಯದಲ್ಲಿ ಆಯೋಜಿಸಿದ್ದ ‘ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಸ್ಮೃತಿ ವ್ಯಾಖ್ಯಾಮಾಲಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.</p>.<p>‘ದೀನ–ದಲಿತರು, ಬಡವರು ಹೀಗೆ... ಎಲ್ಲರ ಉದ್ದಾರವೇ ಅವರ ಕವಿತೆಗಳ ಸಾರವಾಗಿದೆ’ ಎಂದರು.</p>.<p>‘ಅಂಡಮಾನಿನ ಜೈಲಿನಲ್ಲಿದ್ದ ದೀರ್ಘಕಾಲದಲ್ಲಿ, ಅವರಿಗೆ ಪೆನ್ ಹಾಗೂ ಕಾಗದ ಕೊಡುವುದನ್ನು ನಿಷೇಧಿಸಲಾಗಿತ್ತು. ಸಾವರ್ಕರ್ ತಮ್ಮ ಗೀತೆಗಳನ್ನು ಜೈಲಿನ ಗೋಡೆಗಳ ಮೇಲೆ ಮುಳ್ಳಿನಿಂದ, ಕಲ್ಲಿನ ತುಂಡುಗಳಿಂದ ಕೊರೆದರು. ಆ ಜೈಲಿನಲ್ಲಿ ಭಾರತೀಯ ಕೈದಿಗಳ ಪಾಡನ್ನು ಪ್ರತಿಬಿಂಬಿಸುವ ‘ಕಾಳಾ ಪಾಣಿ’ (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ) ಎನ್ನುವುದು ಅವರ ಗಮನಾರ್ಹ ಕೃತಿಯಾಗಿದೆ. ಮರಾಠಿ ಗೀತೆಗಳನ್ನು ಅವರು ಬರೆದರು. ಅವು ಜನಪ್ರಿಯವಾಗಿದ್ದು, ಇಂದಿಗೂ ಮಹಾರಾಷ್ಟ್ರದಲ್ಲಿ ಕೇಳಸಿಗುತ್ತವೆ’ ಎಂದು ತಿಳಿಸಿದರು.</p>.<p>ಮುಖ್ಯಅತಿಥಿಯಾಗಿದ್ದ ರಾಜೆ ಹರಿಹರರಾವ ಪಟವರ್ಧನ ಮಾತನಾಡಿದರು.</p>.<p>ಕಾರ್ಯಾಧ್ಯಕ್ಷ ಸುಹಾಸ ಸಾಂಗ್ಲೀಕರ, ಆರ್.ಎಂ. ಕರಡಿಗುದ್ದಿ, ಜಗದೀಶ ಕುಂಟೆ, ಡಾ.ದತ್ತಪ್ರಸಾದ ಗಿಝರೆ, ಜಿ.ಬಿ. ಇನಾಮದಾರ, ಎಂ.ಜಿ. ಆರಬೊಳೆ ಇದ್ದರು.</p>.<p>ಅಕ್ಷತಾ ಮೋರೆ, ವಿನಾಯಕ ಮೋರೆ ಪ್ರಾರ್ಥಿಸಿದರು. ಸ್ವರೂಪಾ ಇನಾಮದಾರ ಪ್ರಸ್ತಾವಿಕ ಮಾತನಾಡಿದರು. ಹಿಮಾಂಗಿ ಪ್ರಭು ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ವೀರ ಸಾವರ್ಕರ್ ಅವರನ್ನು ಮಹಾಕಾವ್ಯ ಬರೆಯದ ಮಹಾಕವಿ ಎಂದು ಕರೆದಿದ್ದಾರೆ. ಏಕೆಂದರೆ, ಅವರ ಜೀವನವೇ ಮಹಾಕಾವ್ಯವಾಗಿತ್ತು. ಬರೆದಂತೆ ಬದುಕಿದವರು. ರಾಷ್ಟ್ರೀಯತ್ವ ಅವರ ಕವಿತೆಗಳ ವಸ್ತುವಾಗಿದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮರಾಠಿ ವಿಭಾಗದ ಮುಖ್ಯಸ್ಥ ಡಾ.ವಿನೋದ ಗಾಯಕವಾಡ ಹೇಳಿದರು.</p>.<p>ನಗರದ ಶಹಾಪುರದ ಸರಸ್ವತಿ ವಾಚನಾಲಯದಿಂದ ಕೋರೆಗಲ್ಲಿಯ ಸರಸ್ವತಿ ವಾಚನಾಲಯದಲ್ಲಿ ಆಯೋಜಿಸಿದ್ದ ‘ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಸ್ಮೃತಿ ವ್ಯಾಖ್ಯಾಮಾಲಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.</p>.<p>‘ದೀನ–ದಲಿತರು, ಬಡವರು ಹೀಗೆ... ಎಲ್ಲರ ಉದ್ದಾರವೇ ಅವರ ಕವಿತೆಗಳ ಸಾರವಾಗಿದೆ’ ಎಂದರು.</p>.<p>‘ಅಂಡಮಾನಿನ ಜೈಲಿನಲ್ಲಿದ್ದ ದೀರ್ಘಕಾಲದಲ್ಲಿ, ಅವರಿಗೆ ಪೆನ್ ಹಾಗೂ ಕಾಗದ ಕೊಡುವುದನ್ನು ನಿಷೇಧಿಸಲಾಗಿತ್ತು. ಸಾವರ್ಕರ್ ತಮ್ಮ ಗೀತೆಗಳನ್ನು ಜೈಲಿನ ಗೋಡೆಗಳ ಮೇಲೆ ಮುಳ್ಳಿನಿಂದ, ಕಲ್ಲಿನ ತುಂಡುಗಳಿಂದ ಕೊರೆದರು. ಆ ಜೈಲಿನಲ್ಲಿ ಭಾರತೀಯ ಕೈದಿಗಳ ಪಾಡನ್ನು ಪ್ರತಿಬಿಂಬಿಸುವ ‘ಕಾಳಾ ಪಾಣಿ’ (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ) ಎನ್ನುವುದು ಅವರ ಗಮನಾರ್ಹ ಕೃತಿಯಾಗಿದೆ. ಮರಾಠಿ ಗೀತೆಗಳನ್ನು ಅವರು ಬರೆದರು. ಅವು ಜನಪ್ರಿಯವಾಗಿದ್ದು, ಇಂದಿಗೂ ಮಹಾರಾಷ್ಟ್ರದಲ್ಲಿ ಕೇಳಸಿಗುತ್ತವೆ’ ಎಂದು ತಿಳಿಸಿದರು.</p>.<p>ಮುಖ್ಯಅತಿಥಿಯಾಗಿದ್ದ ರಾಜೆ ಹರಿಹರರಾವ ಪಟವರ್ಧನ ಮಾತನಾಡಿದರು.</p>.<p>ಕಾರ್ಯಾಧ್ಯಕ್ಷ ಸುಹಾಸ ಸಾಂಗ್ಲೀಕರ, ಆರ್.ಎಂ. ಕರಡಿಗುದ್ದಿ, ಜಗದೀಶ ಕುಂಟೆ, ಡಾ.ದತ್ತಪ್ರಸಾದ ಗಿಝರೆ, ಜಿ.ಬಿ. ಇನಾಮದಾರ, ಎಂ.ಜಿ. ಆರಬೊಳೆ ಇದ್ದರು.</p>.<p>ಅಕ್ಷತಾ ಮೋರೆ, ವಿನಾಯಕ ಮೋರೆ ಪ್ರಾರ್ಥಿಸಿದರು. ಸ್ವರೂಪಾ ಇನಾಮದಾರ ಪ್ರಸ್ತಾವಿಕ ಮಾತನಾಡಿದರು. ಹಿಮಾಂಗಿ ಪ್ರಭು ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>