ಬಾದಾಮಿ ತಾಲ್ಲೂಕಿನ ಕೆರೂರು ಬಳಿ ರಾಷ್ಟ್ರೀಯ 218ರಲ್ಲಿ ಸೈಕಲ್ ಓಡಿಸುವಾಗಲೇ ಹೃದಯಾಘಾತವಾಗಿ ವಿನೋದ ಕುಸಿದುಬಿದ್ದಿದ್ದಾರೆ. ಅವರ ಸೈಕ್ಲಿಂಗ್ ತಂಡದಲ್ಲಿ ಇದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಕೆರೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದಾರಿ ಮಧ್ಯೆಯೇ ವಿನೋದ ಸಾವಿಗೀಡಾಗಿದ್ದಾರೆ ಎಂದು ಮಾಜಿ ಅಂತಾರಾಷ್ಟ್ರೀಯ ಸೈಕ್ಲಿಸ್ಟ್ ಸಿದ್ದು ಸರವಾರಿ ’ಪ್ರಜಾವಾಣಿ’ಗೆ ತಿಳಿಸಿದರು. ವಿನೋದ ಪಾಟೀಲ ಅವರಿಗೆ ಪತ್ನಿ, ಪುತ್ರ ಇದ್ದಾರೆ.