<p><strong>ಅಥಣಿ</strong>: ‘ಯುವ ಜನತೆಯ ಆಶಾಕಿರಣ, ಸ್ಫೂರ್ತಿಯ ಚಿಲುಮೆಯಾಗಿದ್ದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಇಂದಿಗೂ ಆದರ್ಶಪ್ರಾಯವಾಗಿವೆ’ ಎಂದು ನಿಲಯಪಾಲಕಿ ಪಾರ್ವತಿ ಮಲಗೌಡರ ಹೇಳಿದರು.</p>.<p>ಇಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ಶ್ರಮದಾನ ಹಾಗೂ ರಾಷ್ಟ್ರೀಯ ಭಾವೈಕ್ಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ಯುವಜನತೆ ಅಂತರ್ಜಾಲದ ಮೋಹದಿಂದಾಗಿ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳುವ ಜೊತೆಗೆ ಗುರಿ ಸಾಧಿಸುವ ನಿಟ್ಟಿನಲ್ಲಿ ವಿಫಲರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಉತ್ತಮ ಗುರಿ ಹಾಗೂ ಗುರುವಿನ ಅಗತ್ಯವಿದೆ’ ಎಂದರು.</p>.<p>ವಿದ್ಯಾರ್ಥಿನಿಯರಾದ ಪೂಜಾ ಚಾಬರೆ, ಲಕ್ಷ್ಮಿ ಶಿಂಧೆ ಮಾತನಾಡಿದರು. ಎ. ಗುಮಟೆ, ಶ್ವೇತಾ ಬಾನಿ, ಕಾವೇರಿ ಬನ್ನೂರ, ಲಕ್ಷ್ಮಿ ಕುಲಗೊಡ, ಸಾವಿತ್ರಿ ನಾಯ್ಕರ, ಸವಿತಾ ಶಿಂಧೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ</strong>: ‘ಯುವ ಜನತೆಯ ಆಶಾಕಿರಣ, ಸ್ಫೂರ್ತಿಯ ಚಿಲುಮೆಯಾಗಿದ್ದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಇಂದಿಗೂ ಆದರ್ಶಪ್ರಾಯವಾಗಿವೆ’ ಎಂದು ನಿಲಯಪಾಲಕಿ ಪಾರ್ವತಿ ಮಲಗೌಡರ ಹೇಳಿದರು.</p>.<p>ಇಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ಶ್ರಮದಾನ ಹಾಗೂ ರಾಷ್ಟ್ರೀಯ ಭಾವೈಕ್ಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ಯುವಜನತೆ ಅಂತರ್ಜಾಲದ ಮೋಹದಿಂದಾಗಿ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳುವ ಜೊತೆಗೆ ಗುರಿ ಸಾಧಿಸುವ ನಿಟ್ಟಿನಲ್ಲಿ ವಿಫಲರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಉತ್ತಮ ಗುರಿ ಹಾಗೂ ಗುರುವಿನ ಅಗತ್ಯವಿದೆ’ ಎಂದರು.</p>.<p>ವಿದ್ಯಾರ್ಥಿನಿಯರಾದ ಪೂಜಾ ಚಾಬರೆ, ಲಕ್ಷ್ಮಿ ಶಿಂಧೆ ಮಾತನಾಡಿದರು. ಎ. ಗುಮಟೆ, ಶ್ವೇತಾ ಬಾನಿ, ಕಾವೇರಿ ಬನ್ನೂರ, ಲಕ್ಷ್ಮಿ ಕುಲಗೊಡ, ಸಾವಿತ್ರಿ ನಾಯ್ಕರ, ಸವಿತಾ ಶಿಂಧೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>