‘ಗಂಗಾಬಿಕೆಯವರು ಕಲ್ಯಾಣ ಪಟ್ಟಣದ ಮಹಾಮನೆಯಲ್ಲಿ ಪ್ರತಿ ನಿತ್ಯ ಜರುಗುತ್ತಿದ್ದ ಪೂಜೆ, ಪ್ರಸಾದ ವ್ಯವಸ್ಥೆಯ ಸಮಸ್ತ ಉಸ್ತುವಾರಿಯನ್ನು ಹೊತ್ತು ಬಸವಾದಿ ಪ್ರಮಥರು ನಿರ್ವಹಿಸಿದ್ದ ಕಾಯಕವನ್ನು ನಿಷ್ಠೆಯಿಂದ ಪೂರೈಸುತ್ತಿದ್ದರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬಿಜ್ಜಳನ ಸೈನ್ಯವು ಶರಣರನ್ನು ಬೆನ್ನಟ್ಟಿತ್ತು. ಶರಣರು ಗುಂಪು ಗುಂಪುಗಳಾಗಿ ಉಳವಿ, ಶ್ರೀಶೈಲ, ಕೂಡಲಸಂಗಮದ ಕಡೆಗೆ ನಡೆದವು. ಗುಂಪೊಂದು ಕಾದರವಳ್ಳಿಯ ಸಮೀಪದಲ್ಲಿ ಬಿಜ್ಜಳನ ಸೈನ್ಯದೊಂದಿಗೆ ಹೋರಾಡಿತು. ಗಂಗಾಂಬಿಕೆ ಒಂದು ಕೈಯಲ್ಲಿ ವಚನದ ಕಟ್ಟು, ಇನ್ನೊಂದು ಕೈಯ್ಯಲ್ಲಿ ಖಡ್ಗ ಹಿಡಿದು ವೈರಿಗಳೊಡನೆ ಸೆಣಸಿ ಗಣಾಚಾರ ತತ್ವ ಪಾಲಿಸಿದರು. ಆ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡು ಲಿಂಗೈಕ್ಯರಾದರು. ಮಲೆಪ್ರಭಾ ದಂಡೆಯಲ್ಲಿ ಅವರನ್ನು ಸಮಾಧಿ ಮಾಡಿ ಗುಡಿ ಕಟ್ಟುತ್ತಾರೆ. ಅಲ್ಲಿ ಇಂದು ಗಂಗಾಂಬಿಕೆಯ ಐಕ್ಯ ಮಂಟಪ ನಿರ್ಮಿಸಲಾಗಿದೆ’ ಎಂದರು.