<p><strong>ಬೆಳಗಾವಿ:</strong> ‘ಬೆಳಗಾವಿ ಮಹಾನಗರ ಪಾಲಿಕೆಯನ್ನು ದೇಶದಲ್ಲೇ ಮಾದರಿಯಾಗಿ ರೂಪಿಸಲು ಪ್ರಯತ್ನಿಸಲಾಗುವುದು. ನಗರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿಶೇಷ ಅನುದಾನ ತರಲಾಗುವುದು’ ಎಂದು ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಭರವಸೆ ನೀಡಿದರು.</p>.<p>ಇಲ್ಲಿನ ತಿಲಕವಾಡಿಯ ಮಿಲೇನಿಯಂ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಾಲಿಕೆ ನೂತನ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಂಘ–ಸಂಸ್ಥೆಗಳ ಸಲಹೆ ಆಧರಿಸಿ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು. ಸಮರ್ಪಕ ಕಸ ವಿಲೇವಾರಿ, ನೀರಿನ ಬವಣೆ ನೀಗಿಸುವುದು, ತೆರಿಗೆ ಸಂಗ್ರಹ, ವಾಹನಗಳ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುವುದು’ ಎಂದರು.</p>.<p>‘ದೇಶದಲ್ಲೇ ಮಾದರಿ ಪಾಲಿಕೆಗಳಾಗಿರುವ ಇಂದೋರ್, ಸೂರತ್, ನಾಗಪುರಕ್ಕೆ ಸ್ವಂತ ಖರ್ಚಿನಲ್ಲೇ ಪಾಲಿಕೆ ಸದಸ್ಯರನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲಾಗುವುದು. ಕಾರ್ಯವೈಖರಿ ಬಗ್ಗೆ ಮನದಟ್ಟು ಮಾಡಲು ಪಕ್ಷಾತೀತವಾಗಿ ಎಲ್ಲ ಸದಸ್ಯರಿಗೂ ಎರಡು ದಿನಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.</p>.<p>‘ನಗರಪಾಲಿಕೆಗೆ ಹೊಸದಾಗಿ ಚುನಾಯಿತರಾದವರು ಬೆಳಗಾವಿಗರ ಆಸ್ತಿ. ಜಾತಿ, ಭಾಷೆ ಬದಿಗೊತ್ತಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಬೆಳಗಾವಿಗರ ಕನಸು ನನಸಾಗಿಸಬೇಕು. ಅವರ ಅಪೇಕ್ಷೆಯಂತೆ ಆಡಳಿತ ನಡೆಸಬೇಕು. ಪ್ರತಿ 4 ತಿಂಗಳಿಗೊಮ್ಮೆ ಪ್ರಮುಖರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಬೇಕು. ವಾರ್ಡ್ನಾದ್ಯಂತ 15 ದಿನಗಳಿಗೊಮ್ಮೆ ಸಂಚರಿಸಬೇಕು. ಎರಡು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಬೇಕು’ ಎಂದು ಸಲಹೆ ನೀಡಿದರು.</p>.<p>ಸಂಸದೆ ಮಂಗಲಾ ಸುರೇಶ ಅಂಗಡಿ, ‘ಸದಸ್ಯರು ಸ್ವಚ್ಛ-ಸುಂದರ ನಗರ ನಿರ್ಮಾಣಕ್ಕಾಗಿ ದುಡಿಯಬೇಕು’ ಎಂದರು.</p>.<p>ಬೆಳಗಾವಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಸಿ. ಪಾಟೀಲ, ಪತ್ರಕರ್ತ ಮೆಹಬೂಬ್ ಮಕಾನದಾರ ಹಲವು ಸಲಹೆಗಳನ್ನು ನೀಡಿದರು.</p>.<p>ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಮನೆ-ಮನೆಯಿಂದ ಒಣ ಹಾಗೂ ಕಸ ಕಸವನ್ನು ಪ್ರತ್ಯೇಕ ವಾಹನದಲ್ಲೇ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ನಗರದ ಹಸಿರೀಕರಣ ಹಾಗೂ ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಬೀದಿಬದಿ ಮಳಿಗೆಗಳಲ್ಲಿ ದೊರೆಯುವ ಆಹಾರದ ಗುಣಮಟ್ಟ ಪರೀಕ್ಷಿಸಲು ವಿಶೇಷ ತಂಡ ರಚಿಸಬೇಕು ಎಂಬ ಒತ್ತಾಯಗಳು ನೆರೆದಿದ್ದವರಿಂದ ಕೇಳಿಬಂದವು.</p>.<p>ಶಾಸಕ ಅನಿಲ ಬೆನಕೆ, ಪಾಲಿಕೆ ಸದಸ್ಯರಾದ ಮಂಗೇಶ ಪವಾರ, ವಾಣಿ ಜೋಶಿ ಮಾತನಾಡಿದರು.</p>.<p class="Briefhead"><strong>ಸಲಹೆಗಳೇನು?</strong></p>.<p><strong>ಶೌಚಾಲಯ ನಿರ್ಮಿಸಿ</strong></p>.<p>ನಗರದಲ್ಲಿ ಜನಸಂದಣಿ ಕಂಡುಬರುವ ಸ್ಥಳಗಳಲ್ಲಿ ಸುಲಭ್ ಶೌಚಾಲಯ ನಿರ್ಮಿಸಬೇಕು. ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು.</p>.<p><em>– ಪಂಚಾಕ್ಷರಿ ಚೊನ್ನದ, ಅಧ್ಯಕ್ಷ, ಬೆಳಗಾವಿ ವಾಣಿಜ್ಯೋದ್ಯಮ ಸಂಘ</em></p>.<p><strong>ಅನುಕೂಲ ಆಗುವಂತಿರಲಿ</strong></p>.<p>ಕೆಲವು ಬಡಾವಣೆಗಳಲ್ಲಿ ನಸುಕಿನ 3ಕ್ಕೆ ಕುಡಿಯುವ ನೀರು ಪೂರೈಸಲಾಗುತ್ತದೆ. ಇದರ ಬದಲಿಗೆ ಜನರಿಗೆ ಅನುಕೂಲವಾಗುವ ಸಮಯದಲ್ಲಿ ಸರಬರಾಜು ಮಾಡಬೇಕು. ಪ್ರತಿ ಸದಸ್ಯರೂ ತಮ್ಮ ವಾರ್ಡ್ನ ವ್ಯಾಪ್ತಿ ಅರಿತು, ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು.</p>.<p><em>–ಸುನೀಲ ನಾಯ್ಕ, ಅಧ್ಯಕ್ಷ, ಖಡೇಬಜಾರ್ ವ್ಯಾಪಾರಿಗಳ ಸಂಘ</em></p>.<p><strong>ಅಭಿವೃದ್ಧಿಗೆ ವೇಗ ನೀಡಿ</strong></p>.<p>ಪಾಲಿಕೆಗೆ ಬರುವ ಆದಾಯ ಹೆಚ್ಚಿಸಿಕೊಂಡು, ನಗರದ ಅಭಿವೃದ್ಧಿಗೆ ವೇಗ ನೀಡಬೇಕು. ರಸ್ತೆಯಲ್ಲಿ ಕಸ ಎಸೆಯುವವರಿಗೆ ಹೆಚ್ಚಿನ ದಂಡ ವಿಧಿಸಬೇಕು. ನಗರದ ಕೆಲವೆಡೆ ಲ್ಯಾಪ್ಟಾಪ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಅಳವಡಿಸಬೇಕು.</p>.<p><em>– ರೋಹನ ಜುವಳಿ, ಅಧ್ಯಕ್ಷ, ಸಣ್ಣ ಕೈಗಾರಿಕೆಗಳ ಸಂಘ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಬೆಳಗಾವಿ ಮಹಾನಗರ ಪಾಲಿಕೆಯನ್ನು ದೇಶದಲ್ಲೇ ಮಾದರಿಯಾಗಿ ರೂಪಿಸಲು ಪ್ರಯತ್ನಿಸಲಾಗುವುದು. ನಗರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿಶೇಷ ಅನುದಾನ ತರಲಾಗುವುದು’ ಎಂದು ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಭರವಸೆ ನೀಡಿದರು.</p>.<p>ಇಲ್ಲಿನ ತಿಲಕವಾಡಿಯ ಮಿಲೇನಿಯಂ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಾಲಿಕೆ ನೂತನ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಂಘ–ಸಂಸ್ಥೆಗಳ ಸಲಹೆ ಆಧರಿಸಿ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು. ಸಮರ್ಪಕ ಕಸ ವಿಲೇವಾರಿ, ನೀರಿನ ಬವಣೆ ನೀಗಿಸುವುದು, ತೆರಿಗೆ ಸಂಗ್ರಹ, ವಾಹನಗಳ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುವುದು’ ಎಂದರು.</p>.<p>‘ದೇಶದಲ್ಲೇ ಮಾದರಿ ಪಾಲಿಕೆಗಳಾಗಿರುವ ಇಂದೋರ್, ಸೂರತ್, ನಾಗಪುರಕ್ಕೆ ಸ್ವಂತ ಖರ್ಚಿನಲ್ಲೇ ಪಾಲಿಕೆ ಸದಸ್ಯರನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲಾಗುವುದು. ಕಾರ್ಯವೈಖರಿ ಬಗ್ಗೆ ಮನದಟ್ಟು ಮಾಡಲು ಪಕ್ಷಾತೀತವಾಗಿ ಎಲ್ಲ ಸದಸ್ಯರಿಗೂ ಎರಡು ದಿನಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.</p>.<p>‘ನಗರಪಾಲಿಕೆಗೆ ಹೊಸದಾಗಿ ಚುನಾಯಿತರಾದವರು ಬೆಳಗಾವಿಗರ ಆಸ್ತಿ. ಜಾತಿ, ಭಾಷೆ ಬದಿಗೊತ್ತಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಬೆಳಗಾವಿಗರ ಕನಸು ನನಸಾಗಿಸಬೇಕು. ಅವರ ಅಪೇಕ್ಷೆಯಂತೆ ಆಡಳಿತ ನಡೆಸಬೇಕು. ಪ್ರತಿ 4 ತಿಂಗಳಿಗೊಮ್ಮೆ ಪ್ರಮುಖರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಬೇಕು. ವಾರ್ಡ್ನಾದ್ಯಂತ 15 ದಿನಗಳಿಗೊಮ್ಮೆ ಸಂಚರಿಸಬೇಕು. ಎರಡು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಬೇಕು’ ಎಂದು ಸಲಹೆ ನೀಡಿದರು.</p>.<p>ಸಂಸದೆ ಮಂಗಲಾ ಸುರೇಶ ಅಂಗಡಿ, ‘ಸದಸ್ಯರು ಸ್ವಚ್ಛ-ಸುಂದರ ನಗರ ನಿರ್ಮಾಣಕ್ಕಾಗಿ ದುಡಿಯಬೇಕು’ ಎಂದರು.</p>.<p>ಬೆಳಗಾವಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಸಿ. ಪಾಟೀಲ, ಪತ್ರಕರ್ತ ಮೆಹಬೂಬ್ ಮಕಾನದಾರ ಹಲವು ಸಲಹೆಗಳನ್ನು ನೀಡಿದರು.</p>.<p>ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಮನೆ-ಮನೆಯಿಂದ ಒಣ ಹಾಗೂ ಕಸ ಕಸವನ್ನು ಪ್ರತ್ಯೇಕ ವಾಹನದಲ್ಲೇ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ನಗರದ ಹಸಿರೀಕರಣ ಹಾಗೂ ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಬೀದಿಬದಿ ಮಳಿಗೆಗಳಲ್ಲಿ ದೊರೆಯುವ ಆಹಾರದ ಗುಣಮಟ್ಟ ಪರೀಕ್ಷಿಸಲು ವಿಶೇಷ ತಂಡ ರಚಿಸಬೇಕು ಎಂಬ ಒತ್ತಾಯಗಳು ನೆರೆದಿದ್ದವರಿಂದ ಕೇಳಿಬಂದವು.</p>.<p>ಶಾಸಕ ಅನಿಲ ಬೆನಕೆ, ಪಾಲಿಕೆ ಸದಸ್ಯರಾದ ಮಂಗೇಶ ಪವಾರ, ವಾಣಿ ಜೋಶಿ ಮಾತನಾಡಿದರು.</p>.<p class="Briefhead"><strong>ಸಲಹೆಗಳೇನು?</strong></p>.<p><strong>ಶೌಚಾಲಯ ನಿರ್ಮಿಸಿ</strong></p>.<p>ನಗರದಲ್ಲಿ ಜನಸಂದಣಿ ಕಂಡುಬರುವ ಸ್ಥಳಗಳಲ್ಲಿ ಸುಲಭ್ ಶೌಚಾಲಯ ನಿರ್ಮಿಸಬೇಕು. ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು.</p>.<p><em>– ಪಂಚಾಕ್ಷರಿ ಚೊನ್ನದ, ಅಧ್ಯಕ್ಷ, ಬೆಳಗಾವಿ ವಾಣಿಜ್ಯೋದ್ಯಮ ಸಂಘ</em></p>.<p><strong>ಅನುಕೂಲ ಆಗುವಂತಿರಲಿ</strong></p>.<p>ಕೆಲವು ಬಡಾವಣೆಗಳಲ್ಲಿ ನಸುಕಿನ 3ಕ್ಕೆ ಕುಡಿಯುವ ನೀರು ಪೂರೈಸಲಾಗುತ್ತದೆ. ಇದರ ಬದಲಿಗೆ ಜನರಿಗೆ ಅನುಕೂಲವಾಗುವ ಸಮಯದಲ್ಲಿ ಸರಬರಾಜು ಮಾಡಬೇಕು. ಪ್ರತಿ ಸದಸ್ಯರೂ ತಮ್ಮ ವಾರ್ಡ್ನ ವ್ಯಾಪ್ತಿ ಅರಿತು, ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು.</p>.<p><em>–ಸುನೀಲ ನಾಯ್ಕ, ಅಧ್ಯಕ್ಷ, ಖಡೇಬಜಾರ್ ವ್ಯಾಪಾರಿಗಳ ಸಂಘ</em></p>.<p><strong>ಅಭಿವೃದ್ಧಿಗೆ ವೇಗ ನೀಡಿ</strong></p>.<p>ಪಾಲಿಕೆಗೆ ಬರುವ ಆದಾಯ ಹೆಚ್ಚಿಸಿಕೊಂಡು, ನಗರದ ಅಭಿವೃದ್ಧಿಗೆ ವೇಗ ನೀಡಬೇಕು. ರಸ್ತೆಯಲ್ಲಿ ಕಸ ಎಸೆಯುವವರಿಗೆ ಹೆಚ್ಚಿನ ದಂಡ ವಿಧಿಸಬೇಕು. ನಗರದ ಕೆಲವೆಡೆ ಲ್ಯಾಪ್ಟಾಪ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಅಳವಡಿಸಬೇಕು.</p>.<p><em>– ರೋಹನ ಜುವಳಿ, ಅಧ್ಯಕ್ಷ, ಸಣ್ಣ ಕೈಗಾರಿಕೆಗಳ ಸಂಘ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>