<p><strong>ಬೆಳಗಾವಿ:</strong> ‘ಜನರಿಂದ ಮನ್ನಣೆಗೆ ಒಳಗಾಗುವ ಸಾಹಿತಿಗಳು ಸಮಾಜಕ್ಕೆ ಬದ್ಧರಾಗಿ ಬರೆಯಬೇಕು. ರೈತರು, ಮಹಿಳೆಯರು, ದಲಿತರು ಮತ್ತು ತುಳಿತಕ್ಕೆ ಒಳಗಾದ ಸಮುದಾಯದ ಪರವಾಗಿ ಹಾಗೂ ಅವರ ದನಿಯಾಗಿ ಸಾಹಿತ್ಯ ರಚಿಸಿ, ಬದುಕಿನಲ್ಲೂ ಆ ಬದ್ಧತೆಯನ್ನು ಪ್ರದರ್ಶಿಸಬೇಕು’ ಎಂದು ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.</p>.<p>ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿಯ ಸಭಾಭವನದಲ್ಲಿ ಮಂಗಳವಾರ ನಡೆದ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದ ನೂತನ ಸಂಚಾಲಕರ ಆಯ್ಕೆ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>‘ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಪರವಾಗಿ ದನಿ ಎತ್ತಿ ಮಾನವ ಹಕ್ಕುಗಳ ರಕ್ಷಕರಾಗಬೇಕು. ಅದುವೇ ನಿಜವಾದ ಬಂಡಾಯ ಸಾಹಿತ್ಯ’ ಎಂದರು.</p>.<p>‘ಇಂದು ನಮ್ಮ ದೇಶದ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಅವರಿಗೆ ನೈತಿಕ ಬೆಂಬಲವನ್ನು ಎಲ್ಲರೂ ವ್ಯಕ್ತಪಡಿಸಬೇಕು. ಅನ್ನ ನೀಡುವ ನೆಲದವ್ವನ ಮಕ್ಕಳ ಕುರಿತ ಸಾಹಿತ್ಯ ರಚನೆ ನಮ್ಮ ಮೊದಲ ಆದ್ಯತೆ ಆಗಬೇಕು’ ಎಂದು ಆಶಿಸಿದರು.</p>.<p>‘ಇಡೀ ಕನ್ನಡ ಸಾಹಿತ್ಯವೇ ಕಾಯಕ ಜೀವಿಗಳ ಸಂವೇದನೆಯಾಗಿ ಮೂಡಿ ಬಂದಿರುವುದು ನಮ್ಮ ಸಾಹಿತ್ಯ ಪರಂಪರೆಯ ಸದಭಿರುಚಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ತಿಳಿಸಿದರು.</p>.<p>ಸಂಘಟನೆಯ ಜಿಲ್ಲಾ ಘಟಕದ ನೂತನ ಸಂಚಾಲಕರನ್ನಾಗಿ ಅಡಿವೆಪ್ಪ ಇಟಗಿ, ದೇಮಣ್ಣ ಸೊಗಲದ, ನದೀಮ ಸನದಿ ಮತ್ತು ಸುಧಾ ಕೊಟಬಾಗಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.</p>.<p>ಸಂಘಟನೆಯ ಶಂಕರ ಬಾಗೇವಾಡಿ, ಸಿದ್ದರಾಮ ತಳವಾರ, ರಾಕೇಶ ಪೂಜೇರಿ, ಮೇಘಾ ಗೌಡ ಇದ್ದರು.</p>.<p>ಕಾವೇರಿ ಬುಕ್ಯಾಳಕರ ಕ್ರಾಂತಿಗೀತೆ ಹಾಡಿದರು. ಸುಧಾ ಕೊಟಬಾಗಿ ನಿರೂಪಿಸಿದರು. ದೇಮಣ್ಣ ಸೊಗಲದ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಜನರಿಂದ ಮನ್ನಣೆಗೆ ಒಳಗಾಗುವ ಸಾಹಿತಿಗಳು ಸಮಾಜಕ್ಕೆ ಬದ್ಧರಾಗಿ ಬರೆಯಬೇಕು. ರೈತರು, ಮಹಿಳೆಯರು, ದಲಿತರು ಮತ್ತು ತುಳಿತಕ್ಕೆ ಒಳಗಾದ ಸಮುದಾಯದ ಪರವಾಗಿ ಹಾಗೂ ಅವರ ದನಿಯಾಗಿ ಸಾಹಿತ್ಯ ರಚಿಸಿ, ಬದುಕಿನಲ್ಲೂ ಆ ಬದ್ಧತೆಯನ್ನು ಪ್ರದರ್ಶಿಸಬೇಕು’ ಎಂದು ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.</p>.<p>ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿಯ ಸಭಾಭವನದಲ್ಲಿ ಮಂಗಳವಾರ ನಡೆದ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದ ನೂತನ ಸಂಚಾಲಕರ ಆಯ್ಕೆ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>‘ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಪರವಾಗಿ ದನಿ ಎತ್ತಿ ಮಾನವ ಹಕ್ಕುಗಳ ರಕ್ಷಕರಾಗಬೇಕು. ಅದುವೇ ನಿಜವಾದ ಬಂಡಾಯ ಸಾಹಿತ್ಯ’ ಎಂದರು.</p>.<p>‘ಇಂದು ನಮ್ಮ ದೇಶದ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಅವರಿಗೆ ನೈತಿಕ ಬೆಂಬಲವನ್ನು ಎಲ್ಲರೂ ವ್ಯಕ್ತಪಡಿಸಬೇಕು. ಅನ್ನ ನೀಡುವ ನೆಲದವ್ವನ ಮಕ್ಕಳ ಕುರಿತ ಸಾಹಿತ್ಯ ರಚನೆ ನಮ್ಮ ಮೊದಲ ಆದ್ಯತೆ ಆಗಬೇಕು’ ಎಂದು ಆಶಿಸಿದರು.</p>.<p>‘ಇಡೀ ಕನ್ನಡ ಸಾಹಿತ್ಯವೇ ಕಾಯಕ ಜೀವಿಗಳ ಸಂವೇದನೆಯಾಗಿ ಮೂಡಿ ಬಂದಿರುವುದು ನಮ್ಮ ಸಾಹಿತ್ಯ ಪರಂಪರೆಯ ಸದಭಿರುಚಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ತಿಳಿಸಿದರು.</p>.<p>ಸಂಘಟನೆಯ ಜಿಲ್ಲಾ ಘಟಕದ ನೂತನ ಸಂಚಾಲಕರನ್ನಾಗಿ ಅಡಿವೆಪ್ಪ ಇಟಗಿ, ದೇಮಣ್ಣ ಸೊಗಲದ, ನದೀಮ ಸನದಿ ಮತ್ತು ಸುಧಾ ಕೊಟಬಾಗಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.</p>.<p>ಸಂಘಟನೆಯ ಶಂಕರ ಬಾಗೇವಾಡಿ, ಸಿದ್ದರಾಮ ತಳವಾರ, ರಾಕೇಶ ಪೂಜೇರಿ, ಮೇಘಾ ಗೌಡ ಇದ್ದರು.</p>.<p>ಕಾವೇರಿ ಬುಕ್ಯಾಳಕರ ಕ್ರಾಂತಿಗೀತೆ ಹಾಡಿದರು. ಸುಧಾ ಕೊಟಬಾಗಿ ನಿರೂಪಿಸಿದರು. ದೇಮಣ್ಣ ಸೊಗಲದ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>