ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಪತಂಜಲಿ ಯೋಗ ಪೀಠದ ಕೊಡುಗೆ ಅಪಾರ: ಎಸ್.ಕೆ. ಹೊಳೆಪ್ಪನವರ

Last Updated 6 ಜನವರಿ 2020, 15:31 IST
ಅಕ್ಷರ ಗಾತ್ರ

ಅಥಣಿ: ‘ಬಾಬಾ ರಾಮದೇವ್‌ ಸ್ಥಾಪಿಸಿರುವ ಪತಂಜಲಿ ಯೋಗ ಪೀಠ ದೇಶಕ್ಕೆ ಅಪಾರ ಕೊಡುಗೆ ನೀಡಿದೆ’ ಎಂದು ಇಲ್ಲಿನ ಪತಂಜಲಿ ಯೋಗ ಪೀಠದ ಪ್ರಭಾರಿ ಎಸ್.ಕೆ. ಹೊಳೆಪ್ಪನವರ ಹೇಳಿದರು.

ಸೋಮವಾರ ನಡೆದ ಯೋಗಪೀಡದ 25ನೇ ಸಂಸ್ಥಾನ ದಿನಾಚರಣೆ ಹಾಗೂ ಹರಿದ್ವಾರದ ಶಿಕ್ಷಣ ಸಂಸ್ಕಾರ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪೀಠದಿಂದ ಜನರಿಗೆ ಉಚಿತ ಯೋಗ ತರಬೇತಿ ನೀಡುವ ಮೂಲಕ ಆರೋಗ್ಯಯುತ ಭಾರತ ನಿರ್ಮಾಣಕ್ಕೆ ಪಣ ತೊಡಲಾಗಿದೆ’ ಎಂದರು.

ಹರಿದ್ವಾರದಲ್ಲಿ ನಡೆದ ಯೋಗ ಶಿಬಿರದಲ್ಲಿ ಪಾಲ್ಗೊಂಡ ಮುಖ್ಯಶಿಕ್ಷಕ ಶಿವಾನಂದ ಮಾಲಗಾವಿ ಅನುಭವ ಹಂಚಿಕೊಂಡರು. ಡಾ.ಆರ್.ಎಸ್. ದೊಡ್ಡನಿಂಗಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.

ಯೋಗ ಶಿಕ್ಷಕಿ ಅನುರಾಧಾ ದಾಸರ, ಶಿಬಿರಾರ್ಥಿಗಳಾದ ವಿದ್ಯಾ ಶಿರಗೂರ, ದಿವ್ಯಾ ಹೊಳೆಪ್ಪನವರ, ಮಹಾದೇವಿ ಬೆಟಸೂರ, ಮಂಜುಳಾ ಪೋಲಿಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT