<p><strong>ಬಳ್ಳಾರಿ:</strong> ಜಿಲ್ಲೆಯ ಎಲ್ಲ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ ಜುಲೈ 12ರಿಂದ 14ರವರೆಗೆ ಬಳ್ಳಾರಿ ಸಾಂಸ್ಕೃತಿಕ ಉತ್ಸವ ವನ್ನು ಆಯೋಜಿಸಲಾಗುವುದು. ಇದು ಜಿಲ್ಲೆಯಲ್ಲಿ ಮೊಟ್ಟಮೊದಲ ಪ್ರಯತ್ನ ಎಂದು ಉತ್ಸವ ನಿರ್ವಹಣಾ ಸಮಿತಿಯ ಪ್ರಮುಖರಾದ ಜಯಪ್ರಕಾಶ ಗುಪ್ತಾ ತಿಳಿಸಿದರು.</p>.<p>ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಉತ್ಸವದಲ್ಲಿ ಚಿತ್ರ ಸಂತೆ, ಛಾಯಾಚಿತ್ರ ಸಂತೆ, ಪುಸ್ತಕ ಸಂತೆ ಮತ್ತು ಆಹಾರ ಸಂತೆ ನಡೆಯಲಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ನೃತ್ಯ, ಸಂಗೀತ, ರಸಮಂಜರಿ, ಕವಿಗೋಷ್ಠಿ, ಹಾಸ್ಯ, ಹರಟೆ, ಜಾದೂ ಪ್ರದರ್ಶನ, ಮಿಮಿಕ್ರಿ ಕೂಡ ಉತ್ಸವ ದಲ್ಲಿ ನಡೆಯಲಿದೆ. ಉತ್ಸವದ ಸಲುವಾಗಿ 32 ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.</p>.<p>ಜಿಲ್ಲೆಯ ಎಲ್ಲ ಕಲಾವಿದರ ಮಾಹಿತಿಯನ್ನು ಆನ್ ಲೈನ್ನಲ್ಲಿ ಅಳವಡಿಸಲಾಗುವುದು ಮತ್ತು ಜಿಲ್ಲೆಯ ಹಲವು ಮಾಹಿತಿಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಪ್ರಕಟಿಸಲಾಗುವುದು ಎಂದರು.</p>.<p>ಜಿಲ್ಲೆಯ 1500 ಮಂದಿ ಏಕಕಾಲಕ್ಕೆ ನಾಡಗೀತೆ ಹಾಡಲಿದ್ದಾರೆ. ರಾಜ್ಯಮಟ್ಟದ ಚಿತ್ರಸಂತೆಗೆ 80 ಮಳಿಗೆಗಳನ್ನು ಹಾಕಲಾಗುವುದು. ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಸಮಿತಿಯ ಬಿ.ಬಸವರಾಜ ತಿಳಿಸಿದರು.</p>.<p>ಭವ್ಯ ಭಾರತ ಪರಿಕಲ್ಪನೆ ಅಡಿ ದೇಶಭಕ್ತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. 500 ಮೀಟರ್ ಉದ್ದದ ಕಾಗದದ ಮೇಲೆ ಸಾರ್ವಜನಿಕರು ಚಿತ್ರ ರಚಿಸಲು ಅನುವು ಮಾಡಲಾಗುವುದು ಎಂದರು.</p>.<p>ಸುಮಾರು 16 ಲಕ್ಷ ರುಪಾಯಿ ವೆಚ್ಚದಲ್ಲಿ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು. ಪ್ರಾಯೋಜಕತ್ವಕ್ಕೂ ಪ್ರಯತ್ನಿಸಲಾಗುವುದು ಎಂದರು.</p>.<p>ಉತ್ಸವದಲ್ಲಿ ಪಾಲ್ಗೊಳ್ಳಲು ಬಯಸುವವರು 7337745561, 9591110159 ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಜಿಲ್ಲೆಯ ಎಲ್ಲ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ ಜುಲೈ 12ರಿಂದ 14ರವರೆಗೆ ಬಳ್ಳಾರಿ ಸಾಂಸ್ಕೃತಿಕ ಉತ್ಸವ ವನ್ನು ಆಯೋಜಿಸಲಾಗುವುದು. ಇದು ಜಿಲ್ಲೆಯಲ್ಲಿ ಮೊಟ್ಟಮೊದಲ ಪ್ರಯತ್ನ ಎಂದು ಉತ್ಸವ ನಿರ್ವಹಣಾ ಸಮಿತಿಯ ಪ್ರಮುಖರಾದ ಜಯಪ್ರಕಾಶ ಗುಪ್ತಾ ತಿಳಿಸಿದರು.</p>.<p>ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಉತ್ಸವದಲ್ಲಿ ಚಿತ್ರ ಸಂತೆ, ಛಾಯಾಚಿತ್ರ ಸಂತೆ, ಪುಸ್ತಕ ಸಂತೆ ಮತ್ತು ಆಹಾರ ಸಂತೆ ನಡೆಯಲಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ನೃತ್ಯ, ಸಂಗೀತ, ರಸಮಂಜರಿ, ಕವಿಗೋಷ್ಠಿ, ಹಾಸ್ಯ, ಹರಟೆ, ಜಾದೂ ಪ್ರದರ್ಶನ, ಮಿಮಿಕ್ರಿ ಕೂಡ ಉತ್ಸವ ದಲ್ಲಿ ನಡೆಯಲಿದೆ. ಉತ್ಸವದ ಸಲುವಾಗಿ 32 ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.</p>.<p>ಜಿಲ್ಲೆಯ ಎಲ್ಲ ಕಲಾವಿದರ ಮಾಹಿತಿಯನ್ನು ಆನ್ ಲೈನ್ನಲ್ಲಿ ಅಳವಡಿಸಲಾಗುವುದು ಮತ್ತು ಜಿಲ್ಲೆಯ ಹಲವು ಮಾಹಿತಿಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಪ್ರಕಟಿಸಲಾಗುವುದು ಎಂದರು.</p>.<p>ಜಿಲ್ಲೆಯ 1500 ಮಂದಿ ಏಕಕಾಲಕ್ಕೆ ನಾಡಗೀತೆ ಹಾಡಲಿದ್ದಾರೆ. ರಾಜ್ಯಮಟ್ಟದ ಚಿತ್ರಸಂತೆಗೆ 80 ಮಳಿಗೆಗಳನ್ನು ಹಾಕಲಾಗುವುದು. ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಸಮಿತಿಯ ಬಿ.ಬಸವರಾಜ ತಿಳಿಸಿದರು.</p>.<p>ಭವ್ಯ ಭಾರತ ಪರಿಕಲ್ಪನೆ ಅಡಿ ದೇಶಭಕ್ತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. 500 ಮೀಟರ್ ಉದ್ದದ ಕಾಗದದ ಮೇಲೆ ಸಾರ್ವಜನಿಕರು ಚಿತ್ರ ರಚಿಸಲು ಅನುವು ಮಾಡಲಾಗುವುದು ಎಂದರು.</p>.<p>ಸುಮಾರು 16 ಲಕ್ಷ ರುಪಾಯಿ ವೆಚ್ಚದಲ್ಲಿ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು. ಪ್ರಾಯೋಜಕತ್ವಕ್ಕೂ ಪ್ರಯತ್ನಿಸಲಾಗುವುದು ಎಂದರು.</p>.<p>ಉತ್ಸವದಲ್ಲಿ ಪಾಲ್ಗೊಳ್ಳಲು ಬಯಸುವವರು 7337745561, 9591110159 ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>