ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನ‌ಗಾಡಿಗೆ ಬೈಕ್ ಡಿಕ್ಕಿ: ಕಬ್ಬಿಣದ ಸಲಾಕೆ ಹೊಕ್ಕು ದಂಪತಿ ಸ್ಥಳದಲ್ಲೇ ಸಾವು

Last Updated 5 ಜನವರಿ 2021, 9:54 IST
ಅಕ್ಷರ ಗಾತ್ರ

ಕೊಟ್ಟೂರು: ತಾಲ್ಲೂಕಿನ ಬೆನಕನಹಳ್ಳಿ ಬಳಿ ಎತ್ತಿನ ಬಂಡಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

ನಿವೇದಿತಾ(23), ಶಿವಕುಮಾರ್(34) ಮೃತರು. ನಿವೇದಿತಾ ತಮ್ಮ ತವರೂರು ಜಗಳೂರು ತಾಲ್ಲೂಕಿನ ಹೊಸಕೆರೆಯಿಂದ ಶಿವಕುಮಾರ್ ಅವರ ಸಂಡೂರಿಗೆ ಹೊರಟಿದ್ದರು. ಹೊಸಕೆರೆಯಿಂದ- ಸಂಡೂರಿಗೆ ಹೋಗುವ ಮಾರ್ಗ ಮಧ್ಯೆ ಅಪಘಾತವಾಗಿದೆ.

ಬೈಕ್‌ ಎತ್ತಿನಗಾಡಿಗೆ ಡಿಕ್ಕಿ ಹೊಡೆದ ರಭಸಕ್ಕೆ ಗಾಡಿಯ ಮುಂಭಾಗದ ಕಬ್ಬಿಣದ ಸಲಾಕೆ(ಮೋಕು) ಇಬ್ಬರ ಎದೆಗೂ ಹೊಕ್ಕಿ, ತೀವ್ರಗಾಯಗಳಾದ ಪರಿಣಾಮ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ‌.

ಎತ್ತಿನ‌ಗಾಡಿ ಸಾವರನಿಗೂ ಗಾಯಗಳಾಗಿವೆ ಎಂದು ಪಿಎಸ್ಐ ಎಚ್. ನಾಗಪ್ಪ‌ ತಿಳಿಸಿದರು. ಸ್ಥಳಕ್ಕೆ ಕೊಟ್ಟೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT