<p><strong>ಕಾನಹೊಸಹಳ್ಳಿ:</strong> ಸಮೀಪದ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಕೊರೊನಾ ಭೀತಿಯ ಮಧ್ಯೆಯೂ ಜನರು ಸಂತೆಯಲ್ಲಿ ಗುಂಪು ಸೇರಿದ್ದಾರೆ.</p>.<p>ಕೊರೊನಾ ಸೋಂಕು ಹರಡಬಾರದು ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಎಲ್ಲಾ ಸಂತೆ, ಜಾತ್ರೆಗಳನ್ನು ರದ್ದು ಮಡಿ ಅದೇಶ ಹೊರಡಿಸಿದೆ. ಆದರೆ ಪ್ರತಿ ಸೋಮವಾರ ಇಲ್ಲಿ ನಡೆಯುತ್ತಿದ್ದ ಸಂತೆ ಎರಡು ವಾರಗಳಿಂದ ಬಂದ್ ಅಗಿದ್ದು, ಇಂದು ಮತ್ತೆ ಪ್ರಾರಂಭವಾಗಿದೆ.</p>.<p>ಇದರಿಂದ ನೂರಾರು ಜನರು ಸಂತೆಯಲ್ಲಿ ಗುಂಪುಗೂಡಿ ತರಕಾರಿ ಕೊಳ್ಳಲು ಮುಂದಾಗಿದ್ದರು. ಕೊರೊನಾ ತಡೆಗಟ್ಟುಲು ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಇದನ್ನು ಲೆಕ್ಕಿಸದೆ ಜನರು ಸಂತೆಯಲ್ಲಿ ಗುಂಪುಗೂಡುತ್ತಿದ್ದಾರೆ. ಯಾವ ಅಧಿಕಾರಿಯೂ ಇತ್ತ ಗಮನ ಹರಿಸಿಲ್ಲ ಎಂದು ಸ್ಥಳೀಯರಾದ ಓಬಣ್ಣ ದೂರಿದ್ದಾರೆ.</p>.<p>ಸಂತೆ ನಡೆಯುತ್ತಿರುವ ವಿಷಯ ಇದೀಗ ಗಮನಕ್ಕೆ ಬಂದಿದ್ದು, ಪೊಲೀಸರನ್ನು ಸ್ಥಳಕ್ಕೆ ಕಳಿಸಿ ಸಂತೆ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎಸ್. ಮಹಾಬಲೇಶ್ವರ ತಿಳಿಸಿದ್ದಾರೆ.<br />ಕೊರೊನಾ ಸೋಂಕು ಹರಡದಂತೆ ಸಂತೆಯನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ಒಂದು ವಾರದಿಂದಲೇ ಡಂಗೂರು ಸಾರಿಸಿ ಜಾಗೃತಿ ಮೂಡಿಸಲಾಗಿದೆ. ಆದರೂ ಜನರು ಸಂತೆಯಲ್ಲಿ ಸೇರಿದ್ದು, ಅವರನ್ನು ಖಾಲಿ ಮಾಡಿಸಲು ಮುಂದಾಗಿದ್ದೇವೆ ಎಂದು ಮಾಕನಾಡಕು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂ. ಪ್ರಶಾಂತ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾನಹೊಸಹಳ್ಳಿ:</strong> ಸಮೀಪದ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಕೊರೊನಾ ಭೀತಿಯ ಮಧ್ಯೆಯೂ ಜನರು ಸಂತೆಯಲ್ಲಿ ಗುಂಪು ಸೇರಿದ್ದಾರೆ.</p>.<p>ಕೊರೊನಾ ಸೋಂಕು ಹರಡಬಾರದು ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಎಲ್ಲಾ ಸಂತೆ, ಜಾತ್ರೆಗಳನ್ನು ರದ್ದು ಮಡಿ ಅದೇಶ ಹೊರಡಿಸಿದೆ. ಆದರೆ ಪ್ರತಿ ಸೋಮವಾರ ಇಲ್ಲಿ ನಡೆಯುತ್ತಿದ್ದ ಸಂತೆ ಎರಡು ವಾರಗಳಿಂದ ಬಂದ್ ಅಗಿದ್ದು, ಇಂದು ಮತ್ತೆ ಪ್ರಾರಂಭವಾಗಿದೆ.</p>.<p>ಇದರಿಂದ ನೂರಾರು ಜನರು ಸಂತೆಯಲ್ಲಿ ಗುಂಪುಗೂಡಿ ತರಕಾರಿ ಕೊಳ್ಳಲು ಮುಂದಾಗಿದ್ದರು. ಕೊರೊನಾ ತಡೆಗಟ್ಟುಲು ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಇದನ್ನು ಲೆಕ್ಕಿಸದೆ ಜನರು ಸಂತೆಯಲ್ಲಿ ಗುಂಪುಗೂಡುತ್ತಿದ್ದಾರೆ. ಯಾವ ಅಧಿಕಾರಿಯೂ ಇತ್ತ ಗಮನ ಹರಿಸಿಲ್ಲ ಎಂದು ಸ್ಥಳೀಯರಾದ ಓಬಣ್ಣ ದೂರಿದ್ದಾರೆ.</p>.<p>ಸಂತೆ ನಡೆಯುತ್ತಿರುವ ವಿಷಯ ಇದೀಗ ಗಮನಕ್ಕೆ ಬಂದಿದ್ದು, ಪೊಲೀಸರನ್ನು ಸ್ಥಳಕ್ಕೆ ಕಳಿಸಿ ಸಂತೆ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎಸ್. ಮಹಾಬಲೇಶ್ವರ ತಿಳಿಸಿದ್ದಾರೆ.<br />ಕೊರೊನಾ ಸೋಂಕು ಹರಡದಂತೆ ಸಂತೆಯನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ಒಂದು ವಾರದಿಂದಲೇ ಡಂಗೂರು ಸಾರಿಸಿ ಜಾಗೃತಿ ಮೂಡಿಸಲಾಗಿದೆ. ಆದರೂ ಜನರು ಸಂತೆಯಲ್ಲಿ ಸೇರಿದ್ದು, ಅವರನ್ನು ಖಾಲಿ ಮಾಡಿಸಲು ಮುಂದಾಗಿದ್ದೇವೆ ಎಂದು ಮಾಕನಾಡಕು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂ. ಪ್ರಶಾಂತ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>