<p><strong>ಹೊಸಪೇಟೆ (ವಿಜಯನಗರ):</strong> ‘ಬ್ರಿಟಿಷರಂತೆ ದೇಶದ ಕಾರ್ಪೊರೇಟ್ ಕಂಪನಿಗಳು ದೇಶದ ಸಂಪತ್ತು ಲೂಟಿ ಮಾಡುತ್ತಿವೆ. 1942ರಲ್ಲಿ ನಡೆದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ ಮಾದರಿಯಲ್ಲಿ ಕಾರ್ಪೊರೇಟ್ ಕಂಪನಿಗಳು ಭಾರತ ಬಿಟ್ಟು ತೊಲಗಿ ಚಳವಳಿ ಆರಂಭಿಸಬೇಕಿದೆ’ ಎಂದು ಪ್ರಾಧ್ಯಾಪಕ ನಾಗರಾಜ ಪತ್ತಾರ ಹೇಳಿದರು.</p>.<p>‘ಕ್ವಿಟ್ ಇಂಡಿಯಾ ಚಳವಳಿ ಚಾರಿತ್ರಿಕ ಮಹತ್ವ ಹಾಗೂ ಪ್ರಸ್ತುತತೆ’ ಕುರಿತು ಶನಿವಾರ ಸಂಜೆ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಡಚ್ಚರು, ಪೋರ್ಚಗೀಸರು, ಫ್ರೆಂಚರು ಬ್ರಿಟಿಷರಿಗಿಂತ ಮೊದಲೇ ಭಾರತಕ್ಕೆ ಬಂದಿದ್ದರು. ಆದರೆ, ಅವರು ವ್ಯಾಪಾರಕ್ಕಷ್ಟೇ ಸೀಮಿತರಾಗಿದ್ದರು. ಆದರೆ, ಬ್ರಿಟಿಷರು ಅವರನ್ನು ಮೂಲೆಗುಂಪು ಮಾಡಿ ಈ ದೇಶದ ಸಂಪತ್ತು ಲೂಟಿ ಮಾಡಿದಲ್ಲದೇ ಭಾರತೀಯರನ್ನು ಕನಿಷ್ಠ ಸೌಜನ್ಯದಿಂದ ನಡೆಸಿಕೊಳ್ಳಲಿಲ್ಲ. ಬ್ರಿಟಿಷರಂತೆ ಈ ದೇಶದ ಕಾರ್ಪೊರೇಟ್ ಕಂಪನಿಗಳು ವರ್ತಿಸುತ್ತಿವೆ’ ಎಂದರು.</p>.<p>ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಜಿ.ಕನಕೇಶಮೂರ್ತಿ ಉದ್ಘಾಟಿಸಿ, ‘ಅಡಿಗರು ಹಾಗೂ ಬೇಂದ್ರೆಯವರು ಬ್ರಿಟಿಷರನ್ನು ಹಾಗೂ ಅಂದಿನ ಪರಿಸ್ಥಿತಿಯನ್ನು ಕವಿತೆಗಳ ಮೂಲಕ ಟೀಕಿಸಿದ್ದರು’ ಎಂದು ಹೇಳಿದರು.</p>.<p>ವಕೀಲ ಎ. ಕರುಣಾನಿಧಿ ಮಾತನಾಡಿ, ‘ಅಂದಿನಂತೆಯೇ ಇಂದು ಪರಿಸ್ಥಿತಿ ಬಿಗಡಾಯಿಸಿದೆ. ಬ್ರಿಟಿಷರ ಒಡೆದಾಳುವ ನೀತಿಯನ್ನೇ ಇಂದಿನ ರಾಜಕಾರಣಿಗಳು ಮಾಡುತ್ತಿದ್ದಾರೆ. ಕಾಳಸಂತೆಯಲ್ಲಿ ದಿನಸಿಗಳು ಮಾರಾಟವಾಗುತ್ತಿವೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಕೃಷಿಕರು, ಶ್ರಮಿಕರು ಹಾಗೂ ದಲಿತರು ಬದುಕುವುದು ದುಸ್ತರವಾಗಿದೆ’ ಎಂದರು.</p>.<p>ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ದಯಾನಂದ ಕಿನ್ನಾಳ್, ‘ದೇಶದ ಸ್ವಾತಂತ್ರ್ಯಕ್ಕಾಗಿ ಅಂದು ಬಹಳಷ್ಟು ಜನ ಹುತಾತ್ಮರಾದರು. ಸ್ವಾತಂತ್ರ್ಯವೇನೋ ಬಂತು. ಆದರೆ ಅವರು ಕಂಡ ಕನಸುಗಳು ನನಸಾಗಲಿಲ್ಲ. ಅನ್ನ, ನೀರು, ಶಿಕ್ಷಣ ಇವುಗಳು ಇಂದಿಗೂ ಸಮಾಜಕ್ಕೆ ಮರೀಚಿಕೆಯಾಗಿದೆ’ ಎಂದರು.</p>.<p>ಪ್ರಾಧ್ಯಾಪಕ ಕಿಚಿಡಿ ಚನ್ನಪ್ಪ, ಯತ್ನಳ್ಳಿ ಮಲ್ಲಯ್ಯ, ಬಸವರಾಜ, ಕ್ಯಾದಿಗಿಹಾಳ್ ಉದೇದಪ್ಪ, ಧರ್ಮನಗೌಡ, ವಿ.ಪರಶುರಾಮ, ತಾಯಪ್ಪ ನಾಯಕ, ಭಾಸ್ಕರ್ ರೆಡ್ಡಿ, ಮಲ್ಲಿಕಾರ್ಜುನ ಮಾನ್ಪಡೆ, ಸೋ.ದಾ.ವಿರುಪಾಕ್ಷಗೌಡ, ರೀನಾ ನಂದನ್, ರಜಿಯಾ, ಉಮಾಮಹೇಶ್ವರ, ಎರಿಸ್ವಾಮಿ, ಅಂಜಲಿ ಬೆಳಗಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ‘ಬ್ರಿಟಿಷರಂತೆ ದೇಶದ ಕಾರ್ಪೊರೇಟ್ ಕಂಪನಿಗಳು ದೇಶದ ಸಂಪತ್ತು ಲೂಟಿ ಮಾಡುತ್ತಿವೆ. 1942ರಲ್ಲಿ ನಡೆದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ ಮಾದರಿಯಲ್ಲಿ ಕಾರ್ಪೊರೇಟ್ ಕಂಪನಿಗಳು ಭಾರತ ಬಿಟ್ಟು ತೊಲಗಿ ಚಳವಳಿ ಆರಂಭಿಸಬೇಕಿದೆ’ ಎಂದು ಪ್ರಾಧ್ಯಾಪಕ ನಾಗರಾಜ ಪತ್ತಾರ ಹೇಳಿದರು.</p>.<p>‘ಕ್ವಿಟ್ ಇಂಡಿಯಾ ಚಳವಳಿ ಚಾರಿತ್ರಿಕ ಮಹತ್ವ ಹಾಗೂ ಪ್ರಸ್ತುತತೆ’ ಕುರಿತು ಶನಿವಾರ ಸಂಜೆ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಡಚ್ಚರು, ಪೋರ್ಚಗೀಸರು, ಫ್ರೆಂಚರು ಬ್ರಿಟಿಷರಿಗಿಂತ ಮೊದಲೇ ಭಾರತಕ್ಕೆ ಬಂದಿದ್ದರು. ಆದರೆ, ಅವರು ವ್ಯಾಪಾರಕ್ಕಷ್ಟೇ ಸೀಮಿತರಾಗಿದ್ದರು. ಆದರೆ, ಬ್ರಿಟಿಷರು ಅವರನ್ನು ಮೂಲೆಗುಂಪು ಮಾಡಿ ಈ ದೇಶದ ಸಂಪತ್ತು ಲೂಟಿ ಮಾಡಿದಲ್ಲದೇ ಭಾರತೀಯರನ್ನು ಕನಿಷ್ಠ ಸೌಜನ್ಯದಿಂದ ನಡೆಸಿಕೊಳ್ಳಲಿಲ್ಲ. ಬ್ರಿಟಿಷರಂತೆ ಈ ದೇಶದ ಕಾರ್ಪೊರೇಟ್ ಕಂಪನಿಗಳು ವರ್ತಿಸುತ್ತಿವೆ’ ಎಂದರು.</p>.<p>ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಜಿ.ಕನಕೇಶಮೂರ್ತಿ ಉದ್ಘಾಟಿಸಿ, ‘ಅಡಿಗರು ಹಾಗೂ ಬೇಂದ್ರೆಯವರು ಬ್ರಿಟಿಷರನ್ನು ಹಾಗೂ ಅಂದಿನ ಪರಿಸ್ಥಿತಿಯನ್ನು ಕವಿತೆಗಳ ಮೂಲಕ ಟೀಕಿಸಿದ್ದರು’ ಎಂದು ಹೇಳಿದರು.</p>.<p>ವಕೀಲ ಎ. ಕರುಣಾನಿಧಿ ಮಾತನಾಡಿ, ‘ಅಂದಿನಂತೆಯೇ ಇಂದು ಪರಿಸ್ಥಿತಿ ಬಿಗಡಾಯಿಸಿದೆ. ಬ್ರಿಟಿಷರ ಒಡೆದಾಳುವ ನೀತಿಯನ್ನೇ ಇಂದಿನ ರಾಜಕಾರಣಿಗಳು ಮಾಡುತ್ತಿದ್ದಾರೆ. ಕಾಳಸಂತೆಯಲ್ಲಿ ದಿನಸಿಗಳು ಮಾರಾಟವಾಗುತ್ತಿವೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಕೃಷಿಕರು, ಶ್ರಮಿಕರು ಹಾಗೂ ದಲಿತರು ಬದುಕುವುದು ದುಸ್ತರವಾಗಿದೆ’ ಎಂದರು.</p>.<p>ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ದಯಾನಂದ ಕಿನ್ನಾಳ್, ‘ದೇಶದ ಸ್ವಾತಂತ್ರ್ಯಕ್ಕಾಗಿ ಅಂದು ಬಹಳಷ್ಟು ಜನ ಹುತಾತ್ಮರಾದರು. ಸ್ವಾತಂತ್ರ್ಯವೇನೋ ಬಂತು. ಆದರೆ ಅವರು ಕಂಡ ಕನಸುಗಳು ನನಸಾಗಲಿಲ್ಲ. ಅನ್ನ, ನೀರು, ಶಿಕ್ಷಣ ಇವುಗಳು ಇಂದಿಗೂ ಸಮಾಜಕ್ಕೆ ಮರೀಚಿಕೆಯಾಗಿದೆ’ ಎಂದರು.</p>.<p>ಪ್ರಾಧ್ಯಾಪಕ ಕಿಚಿಡಿ ಚನ್ನಪ್ಪ, ಯತ್ನಳ್ಳಿ ಮಲ್ಲಯ್ಯ, ಬಸವರಾಜ, ಕ್ಯಾದಿಗಿಹಾಳ್ ಉದೇದಪ್ಪ, ಧರ್ಮನಗೌಡ, ವಿ.ಪರಶುರಾಮ, ತಾಯಪ್ಪ ನಾಯಕ, ಭಾಸ್ಕರ್ ರೆಡ್ಡಿ, ಮಲ್ಲಿಕಾರ್ಜುನ ಮಾನ್ಪಡೆ, ಸೋ.ದಾ.ವಿರುಪಾಕ್ಷಗೌಡ, ರೀನಾ ನಂದನ್, ರಜಿಯಾ, ಉಮಾಮಹೇಶ್ವರ, ಎರಿಸ್ವಾಮಿ, ಅಂಜಲಿ ಬೆಳಗಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>