<p><strong>ಹೊಸಪೇಟೆ: </strong>ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮರೆಯಾಗುತ್ತಿದ್ದ, ತಂಗಾಳಿ ಬೀಸುತ್ತಿತ್ತು. ಈ ವೇಳೆ ತಾ ಮುಂದು, ನಾ ಮುಂದು ಎಂದು ಹುಟ್ಟು ಹಾಕುತ್ತಿದ್ದರು. ತೆಪ್ಪಗಳಲ್ಲಿ ಮೊದಲ ಗುರಿ ತಲುಪುವ ಹಣಾಹಣಿ ಏರ್ಪಟ್ಟಿತ್ತು.</p>.<p>ಹಂಪಿ ಉತ್ಸವದ ಪ್ರಯುಕ್ತ ಇಲ್ಲಿನ ಕಮಲಾಪುರ ಕೆರೆಯಲ್ಲಿ ಭಾನುವಾರ ಸಂಜೆ ನಡೆದ ಮೀನುಗಾರರ ಸಾಂಪ್ರದಾಯಿಕ ತೆಪ್ಪ ಓಡಿಸುವ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳಿವು.</p>.<p>ಉತ್ಸಾಹದಿಂದ ಪಾಲ್ಗೊಂಡಿದ್ದ ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಹುಟ್ಟು ಹಾಕಿ, ತೆಪ್ಪ ಓಡಿಸಿದರು. ಇತ್ತ ದಡದಲ್ಲಿ ನಿಂತಿದ್ದ ಜನ ಶಿಳ್ಳೆ, ಕೇಕೆ ಹೊಡೆದು ಅವರನ್ನು ಹುರಿದುಂಬಿಸುತ್ತಿದ್ದರು.</p>.<p>ಅಂತಿಮವಾಗಿ ಸ್ಪರ್ಧೆಯಲ್ಲಿಕಮಲಾಪುರದ ನಾಗರಾಜ ಮತ್ತು ಪಂಪಾಪತಿಗೆ ಪ್ರಥಮ, ಹನುಮಂತ ಮತ್ತು ರಾಜು ದ್ವಿತೀಯ ಹಾಗೂ ರಾಮು– ರವಿ ತೃತೀಯ ಬಹುಮಾನ ಗಳಿಸಿದರು.</p>.<p>ಕಮಲಾಪುರದ ಗೋವಿಂದಮ್ಮ ಮತ್ತು ನಂದ ಪ್ರಥಮ ಬಹುಮಾನ ಪಡೆದರೆ, ಹಂಪಮ್ಮ ಮತ್ತು ಪೊನ್ನಮ್ಮ ದ್ವಿತೀಯ ಹಾಗೂ ಮೋನಮ್ಮ–ಜಯಂತಿ ತೃತೀಯ ಬಹುಮಾನಕ್ಕೆ ಪಾತ್ರರಾದರು.</p>.<p>₹5000 ಪ್ರಥಮ, ₹3,000 ದ್ವಿತೀಯ ಹಾಗೂ ₹2,000 ತೃತೀಯ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ತಂಡಗಳಿಗೆ ತಲಾ ₹500 ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.</p>.<p>ಸ್ಪರ್ಧೆಯಲ್ಲಿ ಒಟ್ಟು 23 ಪುರುಷ ಮತ್ತು ಆರು ಮಹಿಳಾ ತಂಡಗಳು ಪಾಲ್ಗೊಂಡಿದ್ದವು. ನುಪಾಸನಾ ಸಾಹಸ ಕ್ರೀಡಾ ಸಂಸ್ಥೆಯ ನಿರ್ದೇಶಕ ಎಂ.ಎ. ಶಕೀಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: </strong>ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮರೆಯಾಗುತ್ತಿದ್ದ, ತಂಗಾಳಿ ಬೀಸುತ್ತಿತ್ತು. ಈ ವೇಳೆ ತಾ ಮುಂದು, ನಾ ಮುಂದು ಎಂದು ಹುಟ್ಟು ಹಾಕುತ್ತಿದ್ದರು. ತೆಪ್ಪಗಳಲ್ಲಿ ಮೊದಲ ಗುರಿ ತಲುಪುವ ಹಣಾಹಣಿ ಏರ್ಪಟ್ಟಿತ್ತು.</p>.<p>ಹಂಪಿ ಉತ್ಸವದ ಪ್ರಯುಕ್ತ ಇಲ್ಲಿನ ಕಮಲಾಪುರ ಕೆರೆಯಲ್ಲಿ ಭಾನುವಾರ ಸಂಜೆ ನಡೆದ ಮೀನುಗಾರರ ಸಾಂಪ್ರದಾಯಿಕ ತೆಪ್ಪ ಓಡಿಸುವ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳಿವು.</p>.<p>ಉತ್ಸಾಹದಿಂದ ಪಾಲ್ಗೊಂಡಿದ್ದ ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಹುಟ್ಟು ಹಾಕಿ, ತೆಪ್ಪ ಓಡಿಸಿದರು. ಇತ್ತ ದಡದಲ್ಲಿ ನಿಂತಿದ್ದ ಜನ ಶಿಳ್ಳೆ, ಕೇಕೆ ಹೊಡೆದು ಅವರನ್ನು ಹುರಿದುಂಬಿಸುತ್ತಿದ್ದರು.</p>.<p>ಅಂತಿಮವಾಗಿ ಸ್ಪರ್ಧೆಯಲ್ಲಿಕಮಲಾಪುರದ ನಾಗರಾಜ ಮತ್ತು ಪಂಪಾಪತಿಗೆ ಪ್ರಥಮ, ಹನುಮಂತ ಮತ್ತು ರಾಜು ದ್ವಿತೀಯ ಹಾಗೂ ರಾಮು– ರವಿ ತೃತೀಯ ಬಹುಮಾನ ಗಳಿಸಿದರು.</p>.<p>ಕಮಲಾಪುರದ ಗೋವಿಂದಮ್ಮ ಮತ್ತು ನಂದ ಪ್ರಥಮ ಬಹುಮಾನ ಪಡೆದರೆ, ಹಂಪಮ್ಮ ಮತ್ತು ಪೊನ್ನಮ್ಮ ದ್ವಿತೀಯ ಹಾಗೂ ಮೋನಮ್ಮ–ಜಯಂತಿ ತೃತೀಯ ಬಹುಮಾನಕ್ಕೆ ಪಾತ್ರರಾದರು.</p>.<p>₹5000 ಪ್ರಥಮ, ₹3,000 ದ್ವಿತೀಯ ಹಾಗೂ ₹2,000 ತೃತೀಯ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ತಂಡಗಳಿಗೆ ತಲಾ ₹500 ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.</p>.<p>ಸ್ಪರ್ಧೆಯಲ್ಲಿ ಒಟ್ಟು 23 ಪುರುಷ ಮತ್ತು ಆರು ಮಹಿಳಾ ತಂಡಗಳು ಪಾಲ್ಗೊಂಡಿದ್ದವು. ನುಪಾಸನಾ ಸಾಹಸ ಕ್ರೀಡಾ ಸಂಸ್ಥೆಯ ನಿರ್ದೇಶಕ ಎಂ.ಎ. ಶಕೀಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>