ಅಂಗವಿಕಲರಿಗೆ ಮೀಸಲಿಡುವ ಶೇ 5ರಷ್ಟು ಅನುದಾನ ನಗರಸಭೆ ಬಳಸಿಲ್ಲ. ತ್ರಿಚಕ್ರ ವಾಹನಗಳ ಖರೀದಿಗೆ ಟೆಂಡರ್ ಕರೆದು, ಅಂಗವಿಕಲರಿಗೆ ವಿತರಿಸಬೇಕು. ನಗರಸಭೆಯಲ್ಲೇ ಹಾಳಾಗುತ್ತಿರುವ ಅಂಗವಿಕಲರ ಸಾಧನ, ಸಲಕರಣೆಗಳನ್ನು ಅಗತ್ಯ ಇರುವವರಿಗೆ ಹಂಚಿಕೆ ಮಾಡಬೇಕು. ತಾಲ್ಲೂಕು ಕ್ರೀಡಾಂಗಣದ ಎದುರು ಅಂಗವಿಕಲರ ಉದ್ಯಾನ ನಿರ್ಮಿಸಲಾಗಿದ್ದು, ಬಳಕೆ ಯೋಗ್ಯ ಮಾಡಬೇಕು. ಸಂಕ್ಲಾಪುರದಲ್ಲಿ ನಿರ್ಮಿಸಿರುವ ಅಂಗವಿಕಲರ ಸಮುದಾಯ ಭವನ ಆದಷ್ಟು ಶೀಘ್ರ ಉದ್ಘಾಟಿಸಬೇಕು ಎಂದು ಒತ್ತಾಯಿಸಿದರು.