ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗವಿಕಲರ ಕಲ್ಯಾಣಕ್ಕೆ ಅನುದಾನ ಬಳಸಿ’

Last Updated 20 ಜನವರಿ 2021, 9:12 IST
ಅಕ್ಷರ ಗಾತ್ರ

ಹೊಸಪೇಟೆ: ಅಂಗವಿಕಲರಿಗೆ ಮೀಸಲಿಟ್ಟಿರುವ ಅನುದಾನವನ್ನು ಅವರ ಕ್ಷೇಮಾಭಿವೃದ್ಧಿಗೆ ಬಳಸಬೇಕೆಂದು ಆಗ್ರಹಿಸಿ ನವಸ್ಫೂರ್ತಿ ಅಂಗವಿಕಲರ ಸಂಘದವರು ಬುಧವಾರ ಇಲ್ಲಿನ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ವ್ಯವಸ್ಥಾಪಕ ಗುರುರಾಜ ಸೌದಿ ಅವರಿಗೆ ಸಲ್ಲಿಸಿದರು.

ಅಂಗವಿಕಲರಿಗೆ ಮೀಸಲಿಡುವ ಶೇ 5ರಷ್ಟು ಅನುದಾನ ನಗರಸಭೆ ಬಳಸಿಲ್ಲ. ತ್ರಿಚಕ್ರ ವಾಹನಗಳ ಖರೀದಿಗೆ ಟೆಂಡರ್‌ ಕರೆದು, ಅಂಗವಿಕಲರಿಗೆ ವಿತರಿಸಬೇಕು. ನಗರಸಭೆಯಲ್ಲೇ ಹಾಳಾಗುತ್ತಿರುವ ಅಂಗವಿಕಲರ ಸಾಧನ, ಸಲಕರಣೆಗಳನ್ನು ಅಗತ್ಯ ಇರುವವರಿಗೆ ಹಂಚಿಕೆ ಮಾಡಬೇಕು. ತಾಲ್ಲೂಕು ಕ್ರೀಡಾಂಗಣದ ಎದುರು ಅಂಗವಿಕಲರ ಉದ್ಯಾನ ನಿರ್ಮಿಸಲಾಗಿದ್ದು, ಬಳಕೆ ಯೋಗ್ಯ ಮಾಡಬೇಕು. ಸಂಕ್ಲಾಪುರದಲ್ಲಿ ನಿರ್ಮಿಸಿರುವ ಅಂಗವಿಕಲರ ಸಮುದಾಯ ಭವನ ಆದಷ್ಟು ಶೀಘ್ರ ಉದ್ಘಾಟಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಡಿ. ಶಿವಕುಮಾರ್‌, ಕಾರ್ಯದರ್ಶಿ ಮಹಾರಾಜ ಸತೀಶ್‌ ಸೇರಿದಂತೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT