ಹೊಸಪೇಟೆ (ವಿಜಯನಗರ): ನಟ ದಿವಂಗತ ಪುನೀತ್ ರಾಜಕುಮಾರ್ ಸಮಾಧಿಗೆ ತೆರಳಿ ಗೌರವ ಸಲ್ಲಿಸಲು ನಗರದ ಯುವಕನೊಬ್ಬ ಮಂಗಳವಾರ ಬೈಸಿಕಲ್ ಮೇಲೆ ಬೆಂಗಳೂರಿಗೆ ಪಯಣ ಬೆಳೆಸಿದ.
ನಗರದ ತಳವಾರಕೇರಿ ನಿವಾಸಿ ಬೆಳಗೋಡ್ ಉಮೇಶ್, ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಬೈಸಿಕಲ್ ಮೇಲೆ ಪ್ರಯಾಣ ಬೆಳೆಸಿದರು. ಉಮೇಶ್ ಅವರನ್ನು ಬೀಳ್ಕೊಡಲು ಅನೇಕ ಯುವಕರು ಸೇರಿದ್ದರು.
‘ಪುನೀತ್ ರಾಜಕುಮಾರ್ ಹೊಸಪೇಟೆಗೆ ಬಂದಾಗ ಭೇಟಿಯಾಗಲು ಆಗಿರಲಿಲ್ಲ. ಅವರ ನಿಧನದ ಸಮಯದಲ್ಲೂ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಬೈಸಿಕಲ್ನಲ್ಲಿ ಅವರ ಸಮಾಧಿ ಸ್ಥಳಕ್ಕೆ ಹೋಗಿ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿಸುತ್ತೇನೆ’ ಉಮೇಶ್ ಹೇಳಿದರು.