ಅಧ್ಯಕ್ಷ ಬಿ.ಮಾರುತಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸದಸ್ಯರ ತುರ್ತ ಸಭೆಯಲ್ಲಿ ಸದಸ್ಯರುಗಳಾದ ಕಾವಲಿ ಶಿವಪ್ಪ, ಯಲ್ಲಪ್ಪ, ಶರಣಪ್ಪ ಮಾತನಾಡಿ, ಅನುದಾನದ ಪೂರ್ಣ ಮೊತ್ತವನ್ನು ಕೊಟ್ಟೂರು ಮುಖ್ಯ ಮಾರುಕಟ್ಟೆ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಬಳಸಿಕೊಳ್ಳದೆ, ಸ್ವಲ್ಪ ಪ್ರಮಾಣದ ಅನುದಾನವನ್ನು ಕೂಡ್ಲಿಗಿ ಮತ್ತು ಚಿಕ್ಕಜೋಗಿಹಳ್ಳಿ ಉಪಮಾರುಕಟ್ಟೆಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.