ನಗರದ ಹೃದಯ ಭಾಗದಲ್ಲಿರುವ ಸೆಕ್ರೇಡ್ ಹಾರ್ಟ್ ಚರ್ಚ್ನಲ್ಲಿ ಕ್ರೈಸ್ತ ಧರ್ಮದ ಯುವಕ-ಯುವತಿಯರು ಯೇಸು ಕ್ರಿಸ್ತನ ಜೀವನ, ಶಿಲುಬೆಗೇರಿದ, ಮರಣ ಹೊಂದಿದ ವಿವಿಧ ಹಂತಗಳ ರೂಪಕ ಪ್ರದರ್ಶಿಸಿದರು. ಫಾದರ್ ದಿಲೀಪ್ ಮಾತನಾಡಿ, ‘ಭೂಲೋಕದಲ್ಲಿ ಯೇಸು ತಾನು ಬದುಕಿದ್ದ 33 ವರ್ಷಗಳ ಕಾಲ ಒಳ್ಳೆಯದನ್ನೇ ಮಾಡಿದ. ಕೆಲವರು ದುರುದ್ದೇಶದಿಂದ ಕ್ರೂರ ಶಿಕ್ಷೆ ನೀಡಿ ಶಿಲುಬೆಗೆ ಏರಿಸಿದ ಕಠಿಣ ಸಂದರ್ಭವನ್ನು ಚರ್ಚಿನ ಯುವಕರ ಸಂಘವು ರೂಪಕವಾಗಿ ಪ್ರದರ್ಶಿಸಿದ್ದಾರೆ. ಈ ದಿನ ಕ್ರೈಸ್ತರ ಪಾಲಿಗೆ ಬಹಳ ಮಹತ್ವದ್ದು’ ಎಂದು ಹೇಳಿದರು.