<p>ಹೊಸಪೇಟೆ: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದೊಂದಿಗೆ ಹಿಂದೂ ಶತಾಬ್ಧಿ ಆರಂಭವಾಗಲಿದೆ’ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದರು.</p>.<p>ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದಿಂದ ಸೋಮವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಚಿತ್ರಕೂಟದ ಶ್ರೀರಾಮ ಸಾಂಸ್ಕೃತಿಕ ಶೋಧ ಸಂಸ್ಥಾನ ನ್ಯಾಸ್ ವಕ್ತಾರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.</p>.<p>‘2024ರ ಒಳಗೆ ರಾಮ ಮಂದಿರ ನಿರ್ಮಿಸುವ ಗುರಿ ಹೊಂದಲಾಗಿದೆ. ಅದರೊಂದಿಗೆ ಹಿಂದೂಗಳ ಕನಸು ನನಸಾಗಲಿದೆ’ ಎಂದರು.</p>.<p>‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಮರು ಆತಂಕ ಪಡಬೇಕಿಲ್ಲ. ಗೌರವದಿಂದ ಬದುಕಬಹುದು. ಹಿಂದೂಯೇತರ ಅಕ್ರಮ ವಲಸಿಗರಿಗೆ ಕಡಿವಾಣ ಹಾಕಿ, ದೇಶದ ಶಾಂತಿ ಕಾಪಾಡಲು, ಮಹಿಳೆಯರ ರಕ್ಷಣೆಗಾಗಿ ಕಾಯ್ದೆ ತರಲಾಗಿದೆ’ ಎಂದು ಹೇಳಿದರು.</p>.<p>‘ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ಮಹಮ್ಮದಿಯರ ದಾಳಿಗೆ ಹಿಂದೂ ದೇವಸ್ಥಾನಗಳು, ದೇವರ ಮೂರ್ತಿಗಳು ಭಗ್ನಗೊಂಡು, ಪೂಜೆಯಿಂದ ವಂಚಿತಗೊಂಡಿರುವುದು ಬೇಸರ ಮೂಡಿಸಿದೆ’ ಎಂದು ತಿಳಿಸಿದರು.</p>.<p>ನ್ಯಾಸ್ ಪ್ರಮುಖ ರಾಮ ಅವತಾರ್ ಶರ್ಮಾ ಮಾತನಾಡಿ, ‘ಕಿಷ್ಕಿಂದೆ ಹನುಮನ ಜನ್ಮ ಭೂಮಿ. ಧಾರ್ಮಿಕ ಇತಿಹಾಸ ಹೊಂದಿರುವ ಸ್ಥಳ. ಅದನ್ನು ಯಾರು ಮರೆಯಕೂಡದು’ ಎಂದು ಹೇಳಿದರು.</p>.<p>ಪರಿಷತ್ತಿನ ಉತ್ತರ ಪ್ರಾಂತ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಹಿರೇಮಠ, ರಾಜಮಾತೆ ಚಂದ್ರಕಾಂತ ದೇವಿ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಮುಖಂಡರಾದ ನರಸಿಂಹಮೂರ್ತಿ, ಚಂದ್ರಕಾಂತ ಕಾಮತ್, ಬಸವರಾಜ ನಾಲತ್ವಾಡ, ಅನಂತ ಪದ್ಮನಾಭ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಪೇಟೆ: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದೊಂದಿಗೆ ಹಿಂದೂ ಶತಾಬ್ಧಿ ಆರಂಭವಾಗಲಿದೆ’ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದರು.</p>.<p>ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದಿಂದ ಸೋಮವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಚಿತ್ರಕೂಟದ ಶ್ರೀರಾಮ ಸಾಂಸ್ಕೃತಿಕ ಶೋಧ ಸಂಸ್ಥಾನ ನ್ಯಾಸ್ ವಕ್ತಾರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.</p>.<p>‘2024ರ ಒಳಗೆ ರಾಮ ಮಂದಿರ ನಿರ್ಮಿಸುವ ಗುರಿ ಹೊಂದಲಾಗಿದೆ. ಅದರೊಂದಿಗೆ ಹಿಂದೂಗಳ ಕನಸು ನನಸಾಗಲಿದೆ’ ಎಂದರು.</p>.<p>‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಮರು ಆತಂಕ ಪಡಬೇಕಿಲ್ಲ. ಗೌರವದಿಂದ ಬದುಕಬಹುದು. ಹಿಂದೂಯೇತರ ಅಕ್ರಮ ವಲಸಿಗರಿಗೆ ಕಡಿವಾಣ ಹಾಕಿ, ದೇಶದ ಶಾಂತಿ ಕಾಪಾಡಲು, ಮಹಿಳೆಯರ ರಕ್ಷಣೆಗಾಗಿ ಕಾಯ್ದೆ ತರಲಾಗಿದೆ’ ಎಂದು ಹೇಳಿದರು.</p>.<p>‘ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ಮಹಮ್ಮದಿಯರ ದಾಳಿಗೆ ಹಿಂದೂ ದೇವಸ್ಥಾನಗಳು, ದೇವರ ಮೂರ್ತಿಗಳು ಭಗ್ನಗೊಂಡು, ಪೂಜೆಯಿಂದ ವಂಚಿತಗೊಂಡಿರುವುದು ಬೇಸರ ಮೂಡಿಸಿದೆ’ ಎಂದು ತಿಳಿಸಿದರು.</p>.<p>ನ್ಯಾಸ್ ಪ್ರಮುಖ ರಾಮ ಅವತಾರ್ ಶರ್ಮಾ ಮಾತನಾಡಿ, ‘ಕಿಷ್ಕಿಂದೆ ಹನುಮನ ಜನ್ಮ ಭೂಮಿ. ಧಾರ್ಮಿಕ ಇತಿಹಾಸ ಹೊಂದಿರುವ ಸ್ಥಳ. ಅದನ್ನು ಯಾರು ಮರೆಯಕೂಡದು’ ಎಂದು ಹೇಳಿದರು.</p>.<p>ಪರಿಷತ್ತಿನ ಉತ್ತರ ಪ್ರಾಂತ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಹಿರೇಮಠ, ರಾಜಮಾತೆ ಚಂದ್ರಕಾಂತ ದೇವಿ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಮುಖಂಡರಾದ ನರಸಿಂಹಮೂರ್ತಿ, ಚಂದ್ರಕಾಂತ ಕಾಮತ್, ಬಸವರಾಜ ನಾಲತ್ವಾಡ, ಅನಂತ ಪದ್ಮನಾಭ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>