ಅಂತರ್ಜಲ ವೃದ್ಧಿ ಉದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಾಲೆ ಪುನಶ್ಚೇತನಗೊಳಿಸಲು ಮಣ್ಣಿನ ತಡೆಗೋಡೆ ನಿರ್ಮಾಣ ಮಾಡಿ (ಹೊರಹರಿವು ಮಾಡುವುದು), ಮಲ್ಟಿ ಚೆಕ್ಡ್ಯಾಂ ನಿರ್ಮಾಣ, ಕೊಳವೆಬಾವಿ ಮರುಪೂರಣ, ಹಳ್ಳ ಹೂಳೆತ್ತುವುದು ಮತ್ತು ಹಳ್ಳದ ಎರಡು ಕಡೆ ಒಡ್ಡು ಬಲಪಡಿಸುವುದು, ಬೋಲ್ಡರ್ ಚೆಕ್, ಹಳ್ಳದ ಎರಡು ಕಡೆ ಬದು ಮತ್ತು 10 ಎಕರೆ ಸಸಿ ನೆಡುವುದು, ಗ್ಯಾಬಿಯನ್ ಚೆಕ್ಡ್ಯಾಂ, ಸಣ್ಣ ಕೆರೆ,ಗೋಕಟ್ಟೆ ನಿರ್ಮಾಣ, ಮಿಂಚೇರಿ ಗುಡ್ಡದಲ್ಲಿ ಕಂಟೂರು ಟ್ರೆಂಚ್, ರೈತರ ಹೊಲದಲ್ಲಿ 70 ಬದು ಹಾಗೂ 50 ಕೃಷಿ ಹೊಂಡಗಳ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ, 2 ಸಾವಿರ ಜನರಿಗೆ ಪ್ರತಿನಿತ್ಯ ಉದ್ಯೋಗ ಅವಕಾಶ ಮಾಡಿಕೊಡಲಾಗಿದೆ ಎಂದರು.