ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ, ಕುರಿಕೋಟಾ ಜಲಾವೃತ

ದಸ್ತಾಪುರ, ಅಂಕಲಗಾ, ಸಿರಗಾಪುರ, ಕುದಮೂಡ ಮನೆಗೆ ನುಗ್ಗಿದ ನೀರು
Last Updated 15 ಅಕ್ಟೋಬರ್ 2020, 5:41 IST
ಅಕ್ಷರ ಗಾತ್ರ

ಕಮಲಾಪುರ: ತಾಲ್ಲೂಕಿನಾದ್ಯಂತ ಸುರಿದ ಕುಂಭದ್ರೋಣಮ್ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಆಲಾಶಯ, ಕೆರೆ, ಕಟ್ಟೆ, ಹಳ್ಳ, ನಾಲೆಗಳೆಲ್ಲ ತುಂಬಿ ಹರಿದಿದೆ, ಊರು, ಕೇರಿ, ಹೊಲ, ಗದ್ದೆ ಕಣ್ಣು ಹಾಯಿಸಿದೆಲ್ಲೆಡೆ ನೀರೆ ನೀರು.

ಬೆಳಕೋಟಾ ಜಲಾಶಯ ಭರ್ತಿಯಾಗಿರುವುದರಿಂದ ಬೆಳಿಗ್ಗೆ 30 ಸಾವಿರ ಕ್ಯುಸೆಕ್ ನೀರು ಬಿಡಲಾಗಿತ್ತು. ಇದರಿಂದ ದಸ್ತಾಪುರ, ಮಹಾಗಾಂವ, ಕುರಿಕೋಟಾ ಗ್ರಾಮಗಳಲ್ಲಿ ಪ್ರವಾಹದ ನೀರು ನುಗ್ಗಿದೆ. ಮಹಾಗಾಂವ ಸೇತುವೆ ಮೇಲೆ ಪ್ರವಾಹ ಉಂಟಾಗಿರುವುದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

ಬೆಣ್ಣೆ ತೊರಾ ಹಿನ್ನೀರು ಕುರಿಕೋಟಾ ಗ್ರಾಮದಲ್ಲಿ ಹೊಕ್ಕಿದ್ದು, ದವಸ ಧಾನ್ಯ, ಮಕ್ಕಳ ಪುಸ್ತಕ, ನಿತ್ಯ ಬಳಕೆಯ ವಸ್ತುಗಳೆಲ್ಲ ಜಲ ಸಮಾಧಿಯಾಗಿವೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು. ಸುಮಾರು 20 ಮನೆಗೆಳ ಪ್ರವಾಹದಿಂದ ಹಾನಿಯಾಗಿದ್ದು, ಅವರನ್ನು ಸರ್ಕಾರಿ ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಪರಿಹಾರ ಕೇಂದ್ರ ಆರಂಭಿಸಿ ಊಟೋಪಚಾರ ಮಾಡಲಾಗುತ್ತಿದೆ.

ಕಮಲಾಪುರದ ಹಳ್ಳಕ್ಕೆ ಅಂಟಿಕೊಂಡಿರುವ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. 2 ಬೈಕ್ ಕೊಚ್ಚಿ ಹೋಗಿದೆ. ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಮೇಕೆ, ಕೋಳಿಗಳು ಕೊಚ್ಚಿಕೊಂಡು ಹೋಗಿರುವುದು ವರದಿಯಾಗಿದೆ.

ಕುದಮೂಡ ಗ್ರಾಮ ಮೂರುಕಡೆಯಿಂದ ಪ್ರವಾಹ ಉಂಟಾಗಿದ್ದು ಮನೆಗಳಿಗೆ ನೀರು ನುಗ್ಗಿದೆ. ಗುಂಡಮ್ಮ ಅಮೃತ ಹಾದಿಮನಿ ಎಂಬುವವರ ಶಡ್ನಲ್ಲಿ ಹಾಕಿದ್ದ 50 ಕ್ವಿಂಟಾಲ್ ಈರುಳ್ಳಿ ಕೊಚ್ಚಿ ಹೋಗಿದೆ. ಸೋಯಾಬಿನ್ ಬಣವೆ, 3 ಜಾನುವಾರುಗಳು ಕಿಚ್ಚಿ ಹೋಗಿವೆ. ದಸ್ತಾಪುರ ಸಂಪೂರ್ಣ ಜಲಾವೃತ ಗೊಂಡು ಸಂಚಾರ ಸ್ಥಗಿತ ಗೊಂಡಿದೆ. ಭುಂಯಾರ ರಸ್ತೆ ಶೀಥಿಲಗೊಂಡು ಸಂಚಾರ ಸ್ಥಗಿತಗೊಂಡಿದೆ.

ಶ್ರೀಚಂದ, ಜವಳಗಾ (ಬಿ) 20 ಮನೆಗಳಿಗೆ ನೀರು ನುಗ್ಗಿದೆ. ಹಳೆ ಅಂಕಲಗಾ, ಸಿರಗಾಪುರ ಗ್ರಾಮಗಳಲ್ಲೂ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಗ್ರಾಮದಲ್ಲಿ ಮನೆಗಳಿಗೆ ಹೊಲ ಗದ್ದೆಗಳಲ್ಲಿ ನೀರು ಹೊಕ್ಕು ಬಾಳೆ, ಕಬ್ಬು ಸೇರಿದಂತೆ ಅಳಿದುಳಿದ ಮತ್ತಿತರ ಬೆಳೆಗಳು ನೆಲಕಚ್ಚಿವೆ. ತಾಲ್ಲೂಕಿನಾದ್ಯಂತ ಪ್ರವಾಹ ಉಂಟಾಗಿ ಸೇತುವೆಗಳು ರಸ್ತೆಗಳು ಕೊಚ್ಚಿ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಸುಮಾರು 10 ಗಂಟೆಗಳ ಕಾಲ ವಿದ್ಯುತ್‌ ಕಡಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT