ಹೊಸಪೇಟೆ: ‘ಮುಂದೆ ಕೈಗಾರಿಕೆ ಖಾತೆ ಸಿಗಬಹುದು. ಕೈಗಾರಿಕೆ ಹಾಕಿ’ ಎಂದು ಸಚಿವ ಆನಂದ್ ಸಿಂಗ್ ಅವರು ಸೋಮವಾರ ನಗರದಲ್ಲಿನ ಅವರ ಕಚೇರಿಗೆ ಬಂದಿದ್ದ ಉದ್ಯಮಿ ರಾಜು ಭೂರಟ್ ಅವರಿಗೆ ಹೇಳಿದರು.
‘ನೀವು ಪ್ರವಾಸೋದ್ಯಮ ಸಚಿವರಾದ ವಿಷಯ ಕೇಳಿ ಖುಷಿಯಾಯಿತು. ನಿಮ್ಮನ್ನು ಅಭಿನಂದಿಸಲು ಬಂದಿರುವೆ’ ಎಂದು ರಾಜು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್, ‘ಟೂರಿಸಂ ಮಿನಿಸ್ಟರ್ ಪೋಸ್ಟ್ ನಿಕಾಲ್ ದಿಯಾ (ಪ್ರವಾಸೋದ್ಯಮ ಖಾತೆಯಿಂದ ನನ್ನನ್ನು ತೆಗೆದು ಹಾಕಿದ್ದಾರೆ). ಕೈಗಾರಿಕೆ ಖಾತೆ ಸಿಗಬಹುದು. ನೀವು ಕೈಗಾರಿಕೆ ಆರಂಭಿಸಿ’ ಎಂದಾಗ ಅವರು ಅಚ್ಚರಿ ವ್ಯಕ್ತಪಡಿಸಿದರು.