<p><strong>ಬಳ್ಳಾರಿ:</strong> ನಿರ್ದಿಷ್ಟ ಸಮುದಾಯದವರನ್ನು ಗುರುತಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಸೆಕ್ಷನ್ 153ಎ, 295ಎ ಮತ್ತು 499 ಅಡಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.</p>.<p>ಜ.6ರಂದು ಬೆಳಿಗ್ಗೆ ನಿಯೋಗ ತೆರಳಿ ಒಂದು ಸಮುದಾಯದ ಬಗ್ಗೆ ಹೀನಾಯವಾಗಿ ಮಾತನಾಡಿದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಒಂದು ಕೋಮಿನವರನ್ನು ಹಿಡಿದು ಅವಹೇಳನಕಾರಿ ಭಾಷಣ ಮಾಡಿರುವುದು ಸರಿಯಲ್ಲ. ಈ ದೇಶ ಅವರ ಆಸ್ತಿಯಲ್ಲ. ಮುಸ್ಲಿಮರು 700-800 ವರ್ಷದಿಂದ ಇಲ್ಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದರು.</p>.<p>ಪಂಚರ್ ಹಾಕುವವರು ಬಸವಣ್ಣನ ಮಾತಿನಂತೆ ಕಾಯಕವೇ ಕೈಲಾಸ ಎಂಬಂತಿದ್ದಾರೆ. ಅವರೇನು ಲೂಟಿ ಮಾಡಿಲ್ಲ. ತಮ್ಮ ಜೀವನವನ್ನು ಗೌರವಯುತವಾಗಿ ನಡೆಸುತ್ತಿದ್ದಾರೆ. ಮುಸ್ಲಿಮರನ್ನು ಶಾಸಕರನ್ನಾಗಿ ಆಯ್ಕೆ ಮಾಡುವಷ್ಟು ಅನ್ಯೋನ್ಯತೆ ಜಿಲ್ಲೆಯಲ್ಲಿ ಇದೆಎಂದು ಅಲ್ಲಂ ವೀರಭದ್ರಪ್ಪ ಹೇಳಿದರು.</p>.<p>ಅವರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಬೇಕು. ಕಾಂಗ್ರೆಸ್ ಬೇಕೂಫ್ ಆದರೆ, ಎನ್.ಡಿ.ಎ ಅಲೈನ್ಸ್ ನಲ್ಲಿರುವವರು ಸಿಎಎ ಎನ್ಆರ್ಸಿ ವಿರೋಧಿಸುತ್ತಿದ್ದಾರೆ. ಮತ್ತು ಬೀದಿಗಿಳಿದು ಹೋರಾಟ ಮಾಡುತ್ತಿರುವವರು ಎಲ್ಲರೂ ಬೇವಕೂಫ್ ಗಳಾ? ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪ್ರಶ್ನಿಸಿದರು.</p>.<p>ಮುಖಂಡ ಆಂಜನೇಯುಲು, ಸೂರ್ಯನಾರಾಯಣರೆಡ್ಡಿ, .ಎಸ್ಸ್ವಾಮಿ, ಮಾರೆಣ್ಣ ಇತರರು ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ನಿರ್ದಿಷ್ಟ ಸಮುದಾಯದವರನ್ನು ಗುರುತಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಸೆಕ್ಷನ್ 153ಎ, 295ಎ ಮತ್ತು 499 ಅಡಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.</p>.<p>ಜ.6ರಂದು ಬೆಳಿಗ್ಗೆ ನಿಯೋಗ ತೆರಳಿ ಒಂದು ಸಮುದಾಯದ ಬಗ್ಗೆ ಹೀನಾಯವಾಗಿ ಮಾತನಾಡಿದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಒಂದು ಕೋಮಿನವರನ್ನು ಹಿಡಿದು ಅವಹೇಳನಕಾರಿ ಭಾಷಣ ಮಾಡಿರುವುದು ಸರಿಯಲ್ಲ. ಈ ದೇಶ ಅವರ ಆಸ್ತಿಯಲ್ಲ. ಮುಸ್ಲಿಮರು 700-800 ವರ್ಷದಿಂದ ಇಲ್ಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದರು.</p>.<p>ಪಂಚರ್ ಹಾಕುವವರು ಬಸವಣ್ಣನ ಮಾತಿನಂತೆ ಕಾಯಕವೇ ಕೈಲಾಸ ಎಂಬಂತಿದ್ದಾರೆ. ಅವರೇನು ಲೂಟಿ ಮಾಡಿಲ್ಲ. ತಮ್ಮ ಜೀವನವನ್ನು ಗೌರವಯುತವಾಗಿ ನಡೆಸುತ್ತಿದ್ದಾರೆ. ಮುಸ್ಲಿಮರನ್ನು ಶಾಸಕರನ್ನಾಗಿ ಆಯ್ಕೆ ಮಾಡುವಷ್ಟು ಅನ್ಯೋನ್ಯತೆ ಜಿಲ್ಲೆಯಲ್ಲಿ ಇದೆಎಂದು ಅಲ್ಲಂ ವೀರಭದ್ರಪ್ಪ ಹೇಳಿದರು.</p>.<p>ಅವರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಬೇಕು. ಕಾಂಗ್ರೆಸ್ ಬೇಕೂಫ್ ಆದರೆ, ಎನ್.ಡಿ.ಎ ಅಲೈನ್ಸ್ ನಲ್ಲಿರುವವರು ಸಿಎಎ ಎನ್ಆರ್ಸಿ ವಿರೋಧಿಸುತ್ತಿದ್ದಾರೆ. ಮತ್ತು ಬೀದಿಗಿಳಿದು ಹೋರಾಟ ಮಾಡುತ್ತಿರುವವರು ಎಲ್ಲರೂ ಬೇವಕೂಫ್ ಗಳಾ? ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪ್ರಶ್ನಿಸಿದರು.</p>.<p>ಮುಖಂಡ ಆಂಜನೇಯುಲು, ಸೂರ್ಯನಾರಾಯಣರೆಡ್ಡಿ, .ಎಸ್ಸ್ವಾಮಿ, ಮಾರೆಣ್ಣ ಇತರರು ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>