<p><strong>ಹೊಸಪೇಟೆ:</strong> ಪಿತೃ ಪಕ್ಷದ ನಿಮಿತ್ತ ತಾಲ್ಲೂಕಿನ ಹಂಪಿ ತುಂಗಭದ್ರಾ ನದಿ ತಟದಲ್ಲಿ ಸೋಮವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಪೂಜೆ ನೆರವೇರಿಸಿದರು.</p>.<p>ಶ್ರೀರಾಮುಲು ಅವರು ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ಮಡಿ ಬಟ್ಟೆ ತೊಟ್ಟು, ಕೋದಂಡರಾಮ ದೇವಸ್ಥಾನದ ಮಂಟಪದಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ತೆಪ್ಪದಲ್ಲಿ ತೆರಳಿ, ಚಕ್ರತೀರ್ಥದಲ್ಲಿ ಪೂಜಾ ವಸ್ತುಗಳನ್ನು ವಿಸರ್ಜಿಸಿದರು. ನಂತರ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿರೂಪಾಕ್ಷನ ದರ್ಶನ ಮಾಡಿದರು.</p>.<p>‘ಹಿರಿಯರ ಸದ್ಗತಿಗಾಗಿ ಪಿತೃಪಕ್ಷದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಸಾಕಿ ಸಲುಹಿದ ಹಿರಿಯರು, ಎಲ್ಲ ಪ್ರಾಣಿ, ಪಕ್ಷಿಗಳ ಒಳಿತಿಗಾಗಿ ಈ ಪೂಜೆ ನೆರವೇರಿಸಲಾಗುತ್ತದೆ. ಪ್ರತಿ ವರ್ಷ ವಿವಿಧ ಭಾಗಗಳಿಂದ ನೂರಾರು ಜನ ಹಂಪಿಗೆ ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ದಿನ ಸಚಿವರು ಬಂದು ಪೂಜೆ ಮಾಡಿದ್ದಾರೆ’ ಎಂದು ಪುರೋಹಿತ ಮೋಹನ್ ಚಿಕ್ಕಭಟ್ ಜೋಶಿ ತಿಳಿಸಿದರು.</p>.<p>ಪೂಜೆ ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ಅವರಿಂದ ಹಂಪಿಯಲ್ಲಿ ಕೈಗೊಂಡಿರುವ ಜೀರ್ಣೊದ್ಧಾರ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಮುಖಂಡರಾದ ಪಂತರ್ ಜಯಂತ್, ಜಂಬಾನಹಳ್ಳಿ ವಸಂತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ಪಿತೃ ಪಕ್ಷದ ನಿಮಿತ್ತ ತಾಲ್ಲೂಕಿನ ಹಂಪಿ ತುಂಗಭದ್ರಾ ನದಿ ತಟದಲ್ಲಿ ಸೋಮವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಪೂಜೆ ನೆರವೇರಿಸಿದರು.</p>.<p>ಶ್ರೀರಾಮುಲು ಅವರು ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ಮಡಿ ಬಟ್ಟೆ ತೊಟ್ಟು, ಕೋದಂಡರಾಮ ದೇವಸ್ಥಾನದ ಮಂಟಪದಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ತೆಪ್ಪದಲ್ಲಿ ತೆರಳಿ, ಚಕ್ರತೀರ್ಥದಲ್ಲಿ ಪೂಜಾ ವಸ್ತುಗಳನ್ನು ವಿಸರ್ಜಿಸಿದರು. ನಂತರ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿರೂಪಾಕ್ಷನ ದರ್ಶನ ಮಾಡಿದರು.</p>.<p>‘ಹಿರಿಯರ ಸದ್ಗತಿಗಾಗಿ ಪಿತೃಪಕ್ಷದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಸಾಕಿ ಸಲುಹಿದ ಹಿರಿಯರು, ಎಲ್ಲ ಪ್ರಾಣಿ, ಪಕ್ಷಿಗಳ ಒಳಿತಿಗಾಗಿ ಈ ಪೂಜೆ ನೆರವೇರಿಸಲಾಗುತ್ತದೆ. ಪ್ರತಿ ವರ್ಷ ವಿವಿಧ ಭಾಗಗಳಿಂದ ನೂರಾರು ಜನ ಹಂಪಿಗೆ ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ದಿನ ಸಚಿವರು ಬಂದು ಪೂಜೆ ಮಾಡಿದ್ದಾರೆ’ ಎಂದು ಪುರೋಹಿತ ಮೋಹನ್ ಚಿಕ್ಕಭಟ್ ಜೋಶಿ ತಿಳಿಸಿದರು.</p>.<p>ಪೂಜೆ ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ಅವರಿಂದ ಹಂಪಿಯಲ್ಲಿ ಕೈಗೊಂಡಿರುವ ಜೀರ್ಣೊದ್ಧಾರ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಮುಖಂಡರಾದ ಪಂತರ್ ಜಯಂತ್, ಜಂಬಾನಹಳ್ಳಿ ವಸಂತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>