ಶ್ರೀರಾಮುಲು ಅವರು ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ಮಡಿ ಬಟ್ಟೆ ತೊಟ್ಟು, ಕೋದಂಡರಾಮ ದೇವಸ್ಥಾನದ ಮಂಟಪದಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ತೆಪ್ಪದಲ್ಲಿ ತೆರಳಿ, ಚಕ್ರತೀರ್ಥದಲ್ಲಿ ಪೂಜಾ ವಸ್ತುಗಳನ್ನು ವಿಸರ್ಜಿಸಿದರು. ನಂತರ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿರೂಪಾಕ್ಷನ ದರ್ಶನ ಮಾಡಿದರು.