<p><strong>ಹೊಸಪೇಟೆ: </strong>‘ಶಂಬಾ ಜೋಶಿಯವರ ಸಂಶೋಧನೆ ಆಳ ಹಾಗೂ ಬಹುಮುಖವಾದುದು. ಜತೆಗೆ ವಿಶಿಷ್ಟ ಆಲೋಚನಾ ಕ್ರಮ ಒಳಗೊಂಡಿತ್ತು’ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಹೇಳಿದರು.</p>.<p>ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಶಂಬಾ ಜೋಶಿಯವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಪಿಎಚ್.ಡಿ. ಕೋರ್ಸ್ ವರ್ಕ್ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜೋಶಿಯವರು ಯಾವುದನ್ನೂ ವೈಭವೀಕರಿಸದೇ, ಅನ್ವೇಷಣೆಗೆ ವರ್ತಮಾನವನ್ನು ಮುಖಾಮುಖಿಯಾಗಿ ಚರ್ಚಿಸುತ್ತಿದ್ದರು. ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ ಅವರು ನನ್ನದು ಅಳಿಲು ಸೇವೆ ಎನ್ನುತ್ತಿದ್ದರು. ಅವರೊಬ್ಬ ನಿರ್ಲಿಪ್ತ ಸಾಧಕರಾಗಿದ್ದರು’ ಎಂದರು.</p>.<p>‘ಕನ್ನಡ ಸಂಶೋಧನಾ ಕ್ಷೇತ್ರ ಅಶ್ವಥವೃಕ್ಷ. ಸಂಶೋಧನೆಯು ಸತ್ಯದ ಹುಡುಕಾಟವಾಗಿದೆ. ಸಂಶೋಧನೆಗೆ ಪಾಂಡಿತ್ಯ, ಪ್ರತಿಭೆಯ ಜೊತೆಗೆ ಸೃಜನಶೀಲತೆ ಬೇಕು. ಸಂಶೋಧನೆಯಲ್ಲಿ ಅಂಧಾನುಕರಣೆ ಬೇಡ. ವಿಮರ್ಶೆ ಮತ್ತು ತಾರ್ಕಿಕತೆ ಅಂಶ ಒಳಗೊಂಡಿರಬೇಕು’ ಎಂದು ತಿಳಿಸಿದರು.</p>.<p>ಕುಲಪತಿ ಪ್ರೊ.ಸ.ಚಿ. ರಮೇಶ, ‘ಜೋಶಿಯವರು ಸಂಶೋಧನೆಗೆ ಜೀವನವನ್ನೇ ಮುಡುಪಾಗಿಟ್ಟವರು. ಅವರದು ಏಕಶಿಸ್ತೀಯ ಅಧ್ಯಯನವಾಗಿರಲಿಲ್ಲ’ ಎಂದು ಹೇಳಿದರು.</p>.<p>ವಿಶ್ರಾಂತ ಪ್ರಾಧ್ಯಾಪಕ ರಾಜಾರಾಮ ಹೆಗಡೆ, ‘ಸಂಶೋಧನ ಎಂದರೆ ಹೊಸತನದ ಹುಡುಕಾಟ. ಅದು ಆಳವಾಗಿ, ಸಮಾಜ ಮುಖಿಯಾಗಿ ನಡೆಯಬೇಕು’ ಎಂದು ತಿಳಿಸಿದರು.</p>.<p>‘ಜೋಶಿಯವರು ಸಂಶೋಧನಯಲ್ಲಿ ಕಷ್ಟ ಸಹಿಷ್ಣರು. ಭಿನ್ನ ಆಲೋಚನೆ ಹೊಂದಿದ್ದರು’ ಎಂದು ವಿಶ್ರಾಂತ ಪ್ರಾಧ್ಯಾಪಕ ಜಿ.ಎಸ್.ಮರಿಗುದ್ದಿ ಹೇಳಿದರು.</p>.<p>ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕ ವಿರೂಪಾಕ್ಷಿ ಪೂಜಾರಹಳ್ಳಿ, ಅಧ್ಯಯನಾಂಗದ ನಿರ್ದೇಶಕ ಹೆಬ್ಬಾಲೆ ಕೆ.ನಾಗೇಶ್, ಶೈಕ್ಷಣಿಕ ಉಪಕುಲಸಚಿವ ಎಸ್.ವೈ. ಸೋಮಶೇಖರ್, ಸಂಶೋಧನಾ ವಿದ್ಯಾರ್ಥಿನಿ ನಿರ್ಮಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: </strong>‘ಶಂಬಾ ಜೋಶಿಯವರ ಸಂಶೋಧನೆ ಆಳ ಹಾಗೂ ಬಹುಮುಖವಾದುದು. ಜತೆಗೆ ವಿಶಿಷ್ಟ ಆಲೋಚನಾ ಕ್ರಮ ಒಳಗೊಂಡಿತ್ತು’ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಹೇಳಿದರು.</p>.<p>ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಶಂಬಾ ಜೋಶಿಯವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಪಿಎಚ್.ಡಿ. ಕೋರ್ಸ್ ವರ್ಕ್ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜೋಶಿಯವರು ಯಾವುದನ್ನೂ ವೈಭವೀಕರಿಸದೇ, ಅನ್ವೇಷಣೆಗೆ ವರ್ತಮಾನವನ್ನು ಮುಖಾಮುಖಿಯಾಗಿ ಚರ್ಚಿಸುತ್ತಿದ್ದರು. ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ ಅವರು ನನ್ನದು ಅಳಿಲು ಸೇವೆ ಎನ್ನುತ್ತಿದ್ದರು. ಅವರೊಬ್ಬ ನಿರ್ಲಿಪ್ತ ಸಾಧಕರಾಗಿದ್ದರು’ ಎಂದರು.</p>.<p>‘ಕನ್ನಡ ಸಂಶೋಧನಾ ಕ್ಷೇತ್ರ ಅಶ್ವಥವೃಕ್ಷ. ಸಂಶೋಧನೆಯು ಸತ್ಯದ ಹುಡುಕಾಟವಾಗಿದೆ. ಸಂಶೋಧನೆಗೆ ಪಾಂಡಿತ್ಯ, ಪ್ರತಿಭೆಯ ಜೊತೆಗೆ ಸೃಜನಶೀಲತೆ ಬೇಕು. ಸಂಶೋಧನೆಯಲ್ಲಿ ಅಂಧಾನುಕರಣೆ ಬೇಡ. ವಿಮರ್ಶೆ ಮತ್ತು ತಾರ್ಕಿಕತೆ ಅಂಶ ಒಳಗೊಂಡಿರಬೇಕು’ ಎಂದು ತಿಳಿಸಿದರು.</p>.<p>ಕುಲಪತಿ ಪ್ರೊ.ಸ.ಚಿ. ರಮೇಶ, ‘ಜೋಶಿಯವರು ಸಂಶೋಧನೆಗೆ ಜೀವನವನ್ನೇ ಮುಡುಪಾಗಿಟ್ಟವರು. ಅವರದು ಏಕಶಿಸ್ತೀಯ ಅಧ್ಯಯನವಾಗಿರಲಿಲ್ಲ’ ಎಂದು ಹೇಳಿದರು.</p>.<p>ವಿಶ್ರಾಂತ ಪ್ರಾಧ್ಯಾಪಕ ರಾಜಾರಾಮ ಹೆಗಡೆ, ‘ಸಂಶೋಧನ ಎಂದರೆ ಹೊಸತನದ ಹುಡುಕಾಟ. ಅದು ಆಳವಾಗಿ, ಸಮಾಜ ಮುಖಿಯಾಗಿ ನಡೆಯಬೇಕು’ ಎಂದು ತಿಳಿಸಿದರು.</p>.<p>‘ಜೋಶಿಯವರು ಸಂಶೋಧನಯಲ್ಲಿ ಕಷ್ಟ ಸಹಿಷ್ಣರು. ಭಿನ್ನ ಆಲೋಚನೆ ಹೊಂದಿದ್ದರು’ ಎಂದು ವಿಶ್ರಾಂತ ಪ್ರಾಧ್ಯಾಪಕ ಜಿ.ಎಸ್.ಮರಿಗುದ್ದಿ ಹೇಳಿದರು.</p>.<p>ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕ ವಿರೂಪಾಕ್ಷಿ ಪೂಜಾರಹಳ್ಳಿ, ಅಧ್ಯಯನಾಂಗದ ನಿರ್ದೇಶಕ ಹೆಬ್ಬಾಲೆ ಕೆ.ನಾಗೇಶ್, ಶೈಕ್ಷಣಿಕ ಉಪಕುಲಸಚಿವ ಎಸ್.ವೈ. ಸೋಮಶೇಖರ್, ಸಂಶೋಧನಾ ವಿದ್ಯಾರ್ಥಿನಿ ನಿರ್ಮಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>