<p><strong>ಹೊಸಪೇಟೆ (ವಿಜಯನಗರ):</strong> ‘ಕುಮಾರವ್ಯಾಸ ಭಾರತ ಮತ್ತು ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದಲ್ಲಿ ಸಾಮಾಜಿಕ ಮೌಲ್ಯಗಳು, ಜೀವನದ ಅನುಭಾವ ಸಾರವಿದೆ’ ಎಂದು ಸಾಹಿತಿ ಪ್ರೊ.ಯು. ರಾಘವೇಂದ್ರರಾವ್ ತಿಳಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಷಾ ಭವರಲಾಲ್ ಬಾಬುಲಾಲ್ ನಹರ್ ಕಾಲೇಜಿನ ಸಹಭಾಗಿತ್ವದಲ್ಲಿ ಗುರುವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕುಮಾರವ್ಯಾಸ ಭಾರತ ಮತ್ತು ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಮಹತ್ವ ಕುರಿತು ಮಾತನಾಡಿದರು.</p>.<p>ಮಂಕುತಿಮ್ಮನ ಕಗ್ಗದಲ್ಲಿ 945 ಪದ್ಯಗಳು ಜೀವನದ ಅಮೃತವಾಣಿಗಳಿವೆ. ಕೃತಿ ಸಣ್ಣದಾದರೂ ಸಾಹಿತ್ಯ ತುಂಬಾ ಘನವಾಗಿದೆ. ಸಾಮಾಜಿಕ ಜೀವನದ ಪರಾಮರ್ಶೆ, ಅನುಭಾವಗಳು ತುಂಬಿವೆ. ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ. ನಮ್ಮೆಲ್ಲರ ಬದುಕಿನ ಸಾಮರಸ್ಯ ಸಮನ್ವಯತೆಯ ದರ್ಶನ ಕಾಣುತ್ತೇವೆ ಎಂದರು.</p>.<p>ಕಾಲೇಜಿನ ಅಧ್ಯಕ್ಷ ಕರಿಬಸವರಾಜ ಬಾದಾಮಿ ಉದ್ಘಾಟಿಸಿ, ವಿಜಯನಗರ ಕನ್ನಡ ಸಾಹಿತ್ಯ, ಸಂಸ್ಕೃತಿಯ ತವರೂರಾಗಿದೆ ಎಂದು ಹೇಳಿದರು.</p>.<p>ಪ್ರಾಂಶುಪಾಲ ಎನ್. ವಿಶ್ವನಾಥಗೌಡ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ನಾಯಕರ ಹುಲುಗಪ್ಪ, ಗೌರವ ಕಾರ್ಯದರ್ಶಿ ಎಂ. ಉಮಾ ಮಹೇಶ್ವರ, ಸಮಿತಿ ಸದಸ್ಯ ಸೋ.ದಾ. ವಿರೂಪಾಕ್ಷಗೌಡ, ಪ್ರಾಧ್ಯಾಪಕರಾದ ಶೋಭಾ ಪಾಟೀಲ, ಜಗದೀಶ್, ಶಿವನಗೌಡ ಸಾತ್ಮರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ‘ಕುಮಾರವ್ಯಾಸ ಭಾರತ ಮತ್ತು ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದಲ್ಲಿ ಸಾಮಾಜಿಕ ಮೌಲ್ಯಗಳು, ಜೀವನದ ಅನುಭಾವ ಸಾರವಿದೆ’ ಎಂದು ಸಾಹಿತಿ ಪ್ರೊ.ಯು. ರಾಘವೇಂದ್ರರಾವ್ ತಿಳಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಷಾ ಭವರಲಾಲ್ ಬಾಬುಲಾಲ್ ನಹರ್ ಕಾಲೇಜಿನ ಸಹಭಾಗಿತ್ವದಲ್ಲಿ ಗುರುವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕುಮಾರವ್ಯಾಸ ಭಾರತ ಮತ್ತು ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಮಹತ್ವ ಕುರಿತು ಮಾತನಾಡಿದರು.</p>.<p>ಮಂಕುತಿಮ್ಮನ ಕಗ್ಗದಲ್ಲಿ 945 ಪದ್ಯಗಳು ಜೀವನದ ಅಮೃತವಾಣಿಗಳಿವೆ. ಕೃತಿ ಸಣ್ಣದಾದರೂ ಸಾಹಿತ್ಯ ತುಂಬಾ ಘನವಾಗಿದೆ. ಸಾಮಾಜಿಕ ಜೀವನದ ಪರಾಮರ್ಶೆ, ಅನುಭಾವಗಳು ತುಂಬಿವೆ. ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ. ನಮ್ಮೆಲ್ಲರ ಬದುಕಿನ ಸಾಮರಸ್ಯ ಸಮನ್ವಯತೆಯ ದರ್ಶನ ಕಾಣುತ್ತೇವೆ ಎಂದರು.</p>.<p>ಕಾಲೇಜಿನ ಅಧ್ಯಕ್ಷ ಕರಿಬಸವರಾಜ ಬಾದಾಮಿ ಉದ್ಘಾಟಿಸಿ, ವಿಜಯನಗರ ಕನ್ನಡ ಸಾಹಿತ್ಯ, ಸಂಸ್ಕೃತಿಯ ತವರೂರಾಗಿದೆ ಎಂದು ಹೇಳಿದರು.</p>.<p>ಪ್ರಾಂಶುಪಾಲ ಎನ್. ವಿಶ್ವನಾಥಗೌಡ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ನಾಯಕರ ಹುಲುಗಪ್ಪ, ಗೌರವ ಕಾರ್ಯದರ್ಶಿ ಎಂ. ಉಮಾ ಮಹೇಶ್ವರ, ಸಮಿತಿ ಸದಸ್ಯ ಸೋ.ದಾ. ವಿರೂಪಾಕ್ಷಗೌಡ, ಪ್ರಾಧ್ಯಾಪಕರಾದ ಶೋಭಾ ಪಾಟೀಲ, ಜಗದೀಶ್, ಶಿವನಗೌಡ ಸಾತ್ಮರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>