ನಗರದ ಹಾರೂನ್ ರಶೀದ್ಗೆ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ತೃಪ್ತಿ ಧರಣಿ ಆದೇಶ ಹೊರಡಿಸಿದ್ದಾರೆ. ನಗರದ ಗಾಂಧಿ ಕಾಲೊನಿಯ ಗೋವಿಂದರಾಜ ಶೇಲಟ್ ಎಂಬುವರ ಮನೆಯಲ್ಲಿ 2014ರ ಫೆಬ್ರುವರಿ 8ರಂದು ರಶೀದ್ ₹4.68 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಟಿ.ಬಿ. ಡ್ಯಾಂ ಠಾಣೆಯ ಸಿಪಿಐ ಎಸ್.ಕೆ. ಪ್ರಹ್ಲಾದ್, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಗೀತಾ ಎಸ್. ಮಿರಜಕರ್ ವಾದ ಮಂಡಿಸಿದ್ದಾರೆ.