‘ಖನಿಜ ಆಧಾರಿತ ಉದ್ಯಮಗಳ ಪ್ರಚಾರ ಚಟುವಟಿಕೆಗಳ ಅಡಿಯಲ್ಲಿ ಕುಂಬಾರ ಸಶಕ್ತೀಕರಣ-ಕೌಶಲ ನವೀಕರಣ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಯೋಜನೆ ಅಡಿಯಲ್ಲಿ ವೃತ್ತಿ ನಿರತ ಕುಂಬಾರರಿಗೆ ತರಬೇತಿಯ ಜೊತೆಗೆ ವಿದ್ಯುತ್ ಚಾಲಿತ ತಿಗುರಿ, ಮಣ್ಣು ಹದಮಾಡುವ ಯಂತ್ರ ಉಚಿತವಾಗಿ ನೀಡಲಾಗುತ್ತಿದೆ’ ಎಂದು ಆಯೋಗದ ಹುಬ್ಬಳ್ಳಿ ವಿಭಾಗದ ಸಹಾಯಕ ನಿರ್ದೇಶಕ ಕೆ. ಮುರಳೀಧರ್ ತಿಳಿಸಿದರು.