<p><strong>ಹೊಸಪೇಟೆ: </strong>ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಉಪಚುನಾವಣೆಗೆ ಮತದಾರರು ಹೆಚ್ಚಿನ ಆಸಕ್ತಿ ತೋರಿಸಲಿಲ್ಲ.</p>.<p>ಅನೇಕರು ಒಲ್ಲದ ಮನಸ್ಸಿನಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಮಧ್ಯಾಹ್ನದ ವರೆಗೆ ಮತದಾನದ ಪ್ರಮಾಣ ಹೇಳಿಕೊಳ್ಳುವಂತಹ ರೀತಿಯಲ್ಲಿ ಇರಲಿಲ್ಲ. ಶೇ 50ಕ್ಕಿಂತ ಹೆಚ್ಚಿನ ಮತದಾನವಾಗುವುದು ಅನುಮಾನ ಎಂದು ಜನ ಮಾತಾಡಿಕೊಳ್ಳುತ್ತಿದ್ದರು.</p>.<p>ಅದರಿಂದ ಕಂಗೆಟ್ಟ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಆಯಾ ಬಡಾವಣೆಗಳಲ್ಲಿ ಮನೆ ಮನೆಗಳಿಗೆ ಸುತ್ತಾಡಿ, ‘ದಯವಿಟ್ಟು ಮತಗಟ್ಟೆಗೆ ಹೋಗಿ ಮತದಾನ ಮಾಡಿ’ ಎಂದು ಮನವಿ ಮಾಡಿದರು. ಆಗಷ್ಟೇ ಕೆಲವರು ಮನಸ್ಸಿಲ್ಲದಿದ್ದರೂ ಮತದಾನ ಕೇಂದ್ರಕ್ಕೆ ಬಂದು ಮತ ಹಾಕಿದರು.</p>.<p>ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭಗೊಂಡಿತು. ಆದರೆ, ಒಂಬತ್ತು ಗಂಟೆಯ ವರೆಗೆ ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾರರೇ ಇರಲಿಲ್ಲ. ಚುನಾವಣಾ ಸಿಬ್ಬಂದಿ ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದರು.<br />ಇಲ್ಲಿನ ಪಟೇಲ್ ನಗರ, ಚಿತ್ತವಾಡ್ಗಿ, ಏಳುಕೇರಿ, ಅಮರಾವತಿ, ಎಂ.ಪಿ. ಪ್ರಕಾಶ್ ನಗರ ಸೇರಿದಂತೆ ಹಲವೆಡೆ ಮತಗಟ್ಟೆಗಳು ಜನರಿಲ್ಲದೆ ಬಿಕೊ ಎನ್ನುತ್ತಿದ್ದವು. ಮಧ್ಯಾಹ್ನವಾಗುತ್ತಿದ್ದಂತೆ ಜನ ಮನೆಯಿಂದ ಹೊರಗೆ ಬಂದು ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.</p>.<p>ಒಟ್ಟು 247 ಮತಗಟ್ಟೆಗಳಲ್ಲಿ ಬೆಳಿಗ್ಗೆ ಒಂಬತ್ತರ ವರೆಗೆ ಶೇ 6.5ರಷ್ಟು ಮತದಾನವಾಗಿತ್ತು. ಹನ್ನೊಂದು ಗಂಟೆಗೆ ಶೇ. 20ರ ಗಡಿ ದಾಡಿತ್ತು. ಮಧ್ಯಾಹ್ನ ಚುರುಕು ಪಡೆದ ಮತದಾನ ಪ್ರಕ್ರಿಯೆ, ಮೂರು ಗಂಟೆಗೆ ಶೇ 47.38, ಸಂಜೆ 5ಗಂಟೆಗೆ ಶೇ 58.93ಕ್ಕೆ ಏರಿತು.</p>.<p>ಉಪಚುನಾವಣೆ ಕುರಿತು ಮುದ್ಲಾಪುರದಲ್ಲಿ ಗ್ರಾಮಸ್ಥರನ್ನು ಪ್ರಶ್ನಿಸಿದಾಗ, ‘ನಮ್ಮೂರಿನಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ. ನಿವೇಶನ ಹಕ್ಕುಪತ್ರಗಳಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ವರ್ಷಗಳಿಂದ ಮನವಿ ಮೇಲೆ ಮನವಿಗಳನ್ನು ಕೊಟ್ಟರೂ ಯಾರೂ ತಲೆಗೆ ಹಾಕಿಕೊಂಡಿಲ್ಲ. ನಾವೇಕೇ ಮತ ಹಾಕಬೇಕು’ ಎಂದು ಪ್ರಶ್ನಿಸಿದರು.</p>.<p>‘ಚುನಾವಣೆ ಬಂದಾಗಲಷ್ಟೇ ನಾವು ನೆನಪಾಗುತ್ತೇವೆ. ನಂತರ ಯಾರೊಬ್ಬರೂ ನಮ್ಮ ಗ್ರಾಮದ ಕಡೆ ತಿರುಗಿಯೂ ನೋಡುವುದಿಲ್ಲ’ ಎಂದು ಗ್ರಾಮದ ಹುಲುಗಪ್ಪ ಹೇಳಿದರು.</p>.<p>ಚಿತ್ತವಾಡ್ಗಿಯ ಬಸವರಾಜ ಮಾತನಾಡಿ, ‘ಈ ಚುನಾವಣೆ ಯಾರಿಗೂ ಬೇಡವಾಗಿದೆ. ಒಂದುವರೆ ವರ್ಷದಲ್ಲಿ ನಾಲ್ಕನೇ ಬಾರಿಗೆ ಮತದಾನ ಮಾಡುತ್ತಿದ್ದೇವೆ. ಪದೇ ಪದೇ ನಡೆಯುತ್ತಿರುವ ಚುನಾವಣೆಗಳಿಂದ ಜನರ ಯಾವ ಕೆಲಸಗಳು ಆಗುತ್ತಿಲ್ಲ. ರಾಜಕಾರಣಿಗಳ ಸ್ವಾರ್ಥಕ್ಕಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈ ವ್ಯವಸ್ಥೆ ಹೋಗಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: </strong>ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಉಪಚುನಾವಣೆಗೆ ಮತದಾರರು ಹೆಚ್ಚಿನ ಆಸಕ್ತಿ ತೋರಿಸಲಿಲ್ಲ.</p>.<p>ಅನೇಕರು ಒಲ್ಲದ ಮನಸ್ಸಿನಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಮಧ್ಯಾಹ್ನದ ವರೆಗೆ ಮತದಾನದ ಪ್ರಮಾಣ ಹೇಳಿಕೊಳ್ಳುವಂತಹ ರೀತಿಯಲ್ಲಿ ಇರಲಿಲ್ಲ. ಶೇ 50ಕ್ಕಿಂತ ಹೆಚ್ಚಿನ ಮತದಾನವಾಗುವುದು ಅನುಮಾನ ಎಂದು ಜನ ಮಾತಾಡಿಕೊಳ್ಳುತ್ತಿದ್ದರು.</p>.<p>ಅದರಿಂದ ಕಂಗೆಟ್ಟ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಆಯಾ ಬಡಾವಣೆಗಳಲ್ಲಿ ಮನೆ ಮನೆಗಳಿಗೆ ಸುತ್ತಾಡಿ, ‘ದಯವಿಟ್ಟು ಮತಗಟ್ಟೆಗೆ ಹೋಗಿ ಮತದಾನ ಮಾಡಿ’ ಎಂದು ಮನವಿ ಮಾಡಿದರು. ಆಗಷ್ಟೇ ಕೆಲವರು ಮನಸ್ಸಿಲ್ಲದಿದ್ದರೂ ಮತದಾನ ಕೇಂದ್ರಕ್ಕೆ ಬಂದು ಮತ ಹಾಕಿದರು.</p>.<p>ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭಗೊಂಡಿತು. ಆದರೆ, ಒಂಬತ್ತು ಗಂಟೆಯ ವರೆಗೆ ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾರರೇ ಇರಲಿಲ್ಲ. ಚುನಾವಣಾ ಸಿಬ್ಬಂದಿ ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದರು.<br />ಇಲ್ಲಿನ ಪಟೇಲ್ ನಗರ, ಚಿತ್ತವಾಡ್ಗಿ, ಏಳುಕೇರಿ, ಅಮರಾವತಿ, ಎಂ.ಪಿ. ಪ್ರಕಾಶ್ ನಗರ ಸೇರಿದಂತೆ ಹಲವೆಡೆ ಮತಗಟ್ಟೆಗಳು ಜನರಿಲ್ಲದೆ ಬಿಕೊ ಎನ್ನುತ್ತಿದ್ದವು. ಮಧ್ಯಾಹ್ನವಾಗುತ್ತಿದ್ದಂತೆ ಜನ ಮನೆಯಿಂದ ಹೊರಗೆ ಬಂದು ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.</p>.<p>ಒಟ್ಟು 247 ಮತಗಟ್ಟೆಗಳಲ್ಲಿ ಬೆಳಿಗ್ಗೆ ಒಂಬತ್ತರ ವರೆಗೆ ಶೇ 6.5ರಷ್ಟು ಮತದಾನವಾಗಿತ್ತು. ಹನ್ನೊಂದು ಗಂಟೆಗೆ ಶೇ. 20ರ ಗಡಿ ದಾಡಿತ್ತು. ಮಧ್ಯಾಹ್ನ ಚುರುಕು ಪಡೆದ ಮತದಾನ ಪ್ರಕ್ರಿಯೆ, ಮೂರು ಗಂಟೆಗೆ ಶೇ 47.38, ಸಂಜೆ 5ಗಂಟೆಗೆ ಶೇ 58.93ಕ್ಕೆ ಏರಿತು.</p>.<p>ಉಪಚುನಾವಣೆ ಕುರಿತು ಮುದ್ಲಾಪುರದಲ್ಲಿ ಗ್ರಾಮಸ್ಥರನ್ನು ಪ್ರಶ್ನಿಸಿದಾಗ, ‘ನಮ್ಮೂರಿನಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ. ನಿವೇಶನ ಹಕ್ಕುಪತ್ರಗಳಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ವರ್ಷಗಳಿಂದ ಮನವಿ ಮೇಲೆ ಮನವಿಗಳನ್ನು ಕೊಟ್ಟರೂ ಯಾರೂ ತಲೆಗೆ ಹಾಕಿಕೊಂಡಿಲ್ಲ. ನಾವೇಕೇ ಮತ ಹಾಕಬೇಕು’ ಎಂದು ಪ್ರಶ್ನಿಸಿದರು.</p>.<p>‘ಚುನಾವಣೆ ಬಂದಾಗಲಷ್ಟೇ ನಾವು ನೆನಪಾಗುತ್ತೇವೆ. ನಂತರ ಯಾರೊಬ್ಬರೂ ನಮ್ಮ ಗ್ರಾಮದ ಕಡೆ ತಿರುಗಿಯೂ ನೋಡುವುದಿಲ್ಲ’ ಎಂದು ಗ್ರಾಮದ ಹುಲುಗಪ್ಪ ಹೇಳಿದರು.</p>.<p>ಚಿತ್ತವಾಡ್ಗಿಯ ಬಸವರಾಜ ಮಾತನಾಡಿ, ‘ಈ ಚುನಾವಣೆ ಯಾರಿಗೂ ಬೇಡವಾಗಿದೆ. ಒಂದುವರೆ ವರ್ಷದಲ್ಲಿ ನಾಲ್ಕನೇ ಬಾರಿಗೆ ಮತದಾನ ಮಾಡುತ್ತಿದ್ದೇವೆ. ಪದೇ ಪದೇ ನಡೆಯುತ್ತಿರುವ ಚುನಾವಣೆಗಳಿಂದ ಜನರ ಯಾವ ಕೆಲಸಗಳು ಆಗುತ್ತಿಲ್ಲ. ರಾಜಕಾರಣಿಗಳ ಸ್ವಾರ್ಥಕ್ಕಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈ ವ್ಯವಸ್ಥೆ ಹೋಗಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>