‘ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರು ಚುನಾವಣಾ ಕಾರ್ಯದಿಂದಾಗಿ ಹೊರ ರಾಜ್ಯದಲ್ಲಿದ್ದಾರೆ. ಮಂಗಳವಾರ ಇಬ್ಬರೂ ಬೆಂಗಳೂರಿಗೆ ಮರಳಲಿದ್ದು, ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಈ ಕಾರಣದಿಂದ ಮುಷ್ಕರ ಆರಂಭಿಸುವುದನ್ನು ಮಂಗಳವಾರ ಸಂಜೆಯವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ’ ಎಂದು ‘108 ಆರೋಗ್ಯ ಕವಚ’ ನೌಕರರನ್ನು ಪ್ರತಿನಿಧಿಸುವ ಸುವರ್ಣ ಕರ್ನಾಟಕ, ಅಖಲ ಕರ್ನಾಟಕ ಮತ್ತು ಆರೋಗ್ಯ ಕವಚ ನೌಕರರ ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ.