ಬೆಂಗಳೂರು ಹಾಗೂ ಹೊರ ಜಿಲ್ಲೆಗಳಲ್ಲಿ ಕೆಲ ಆರೋಪಿಗಳು, ಮೃತದೇಹಗಳನ್ನು ಹಳಿ ಮೇಲೆ ಮಲಗಿಸಿ ‘ಆತ್ಮಹತ್ಯೆ’ ಕಥೆ ಸೃಷ್ಟಿಸುತ್ತಿದ್ದಾರೆ. ಪೊಲೀಸರ ಚಾಣಾಕ್ಷ್ಯತೆಯಿಂದ ಕೆಲ ಪ್ರಕರಣಗಳಷ್ಟೇ ಬಯಲಾಗುತ್ತಿದ್ದು, ಉಳಿದವುಅಪರಿಚಿತ ಮೃತದೇಹ ಪ್ರಕರಣಗಳಾಗಿ ಅಂತ್ಯವಾಗುತ್ತಿವೆ. ರೈಲು ಹರಿದು ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗುವ ಮೃತದೇಹಗಳತನಿಖೆ ರೈಲ್ವೆ ಪೊಲೀಸರಿಗೆ ಸವಾಲಾಗಿ ಪರಿಣಮಿಸುತ್ತಿದೆ.