<p><strong>ಬೆಂಗಳೂರು: </strong>ನಗರದಲ್ಲಿ ಕೈಗೊಂಡ ₹4,721 ಕೋಟಿ ಮೊತ್ತದ ಯೋಜನೆಗಳನ್ನು ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆಯೇ ಕೆಆರ್ಐಡಿಎಲ್ಗೆ ನೀಡಲಾಗಿದೆ. ಈ ಮೂಲಕ ಕರ್ನಾಟಕ ಪಾರದರ್ಶಕ ಕಾರ್ಯವಿಧಾನಗಳ ಕಾಯ್ದೆ (ಕೆಟಿಪಿಪಿ) ಉಲ್ಲಂಘಿಸಲಾಗಿದೆ ಎಂದು ಬೆಂಗಳೂರು ನವನಿರ್ಮಾಣ ಪಕ್ಷ ಆರೋಪಿಸಿದೆ.</p>.<p>ಬಿಎನ್ಪಿ ಕಳೆದ ಐದು ವರ್ಷಗಳಲ್ಲಿ (2015ರಿಂದ 2020ರವರೆಗಿನ) 19 ವಾರ್ಡ್ಗಳಲ್ಲಿ ಬಿಬಿಎಂಪಿ ಅನುಮೋದಿಸಿದ ಮತ್ತು ಕೈಗೊಂಡ ಯೋಜನೆಗಳ ವಿಶ್ಲೇಷಣೆ ಮಾಡಿದೆ. ಈ ಅವಧಿಯಲ್ಲಿ ಒಟ್ಟು ₹10,018 ಕೋಟಿ ಮೊತ್ತದ ಒಟ್ಟು 28,1314 ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಆದರೆ, ₹4,721 ಕೋಟಿ ಮೊತ್ತದ ಶೇಕಡ 50ರಷ್ಟು ಯೋಜನೆಗಳನ್ನು ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆಯೇ ಕೆಆರ್ಐಡಿಎಲ್ಗೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಸಾಮಾನ್ಯವಾಗಿ ದೊಡ್ಡ ಯೋಜನೆಗಳನ್ನು ಸಣ್ಣ ವಿಭಾಗಗಳಾಗಿ ವಿಭಜಿಸಲಾಗುತ್ತದೆ ಮತ್ತು ಕೆಟಿಪಿಪಿ ಕಾಯ್ದೆಯ ನಿಯಮಗಳಿಂದ ತಪ್ಪಿಸಿಕೊಳ್ಳಲು ಟೆಂಡರ್ಗಳಿಲ್ಲದೆಯೇ ಹಲವಾರು ಗುತ್ತಿಗೆದಾರರಿಗೆ ನೀಡಲಾಗಿದೆ. ಈ ಮೂಲಕ ಸಹಜವಾಗಿಯೇ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಮಾರ್ಗ ಅನುಸರಿಸಲಾಗಿದೆ ಎಂದು ದೂರಿದೆ.</p>.<p>ಒಪ್ಪಂದದ ಗುತ್ತಿಗೆಗಳ ಮೂಲಕ ಹಣ ವರ್ಗಾವಣೆಯ ಅನುಮಾನಸ್ಪದವಾಗಿದ್ದರೂ ಹೆಚ್ಚಿನ ಟೆಂಡರ್ಗಳು ಸಮರ್ಪಕ ಪ್ರಕ್ರಿಯೆಯೂ ಇಲ್ಲದೆಯೇ ನಡೆಯುತ್ತಿರುವುದು ಆಘಾತಕಾರಿಯಾಗಿದೆ. ಕೆಆರ್ಐಡಿಎಲ್ ಈ ಒಪ್ಪಂದಗಳನ್ನು ಕೈಗೆತ್ತಿಕೊಳ್ಳುವ ಏಜೆನ್ಸಿಯಾಗಿದೆ ಮತ್ತು ಪ್ರತಿ ಯೋಜನೆಯಲ್ಲಿಯೂ ಶೇಕಡ 5ರಿಂದ 15ರಷ್ಟು ಕಮಿಷನ್ ನೀಡಲಾಗುತ್ತಿದೆ. ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆ ಮತ್ತು ಕಮಿಷನ್ನೊಂದಿಗೆ ಒಬ್ಬ ಗುತ್ತಿಗೆದಾರರಿಗೆ ನೀಡಲಾದ ಸಾವಿರಾರು ಕೋಟಿ ಯೋಜನೆಗಳು ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ಹೆಚ್ಚಿನ<br />ಅವಕಾಶ ನೀಡುತ್ತದೆ. ಇದು ನಿಯಮಗಳು, ಪ್ರಕ್ರಿಯೆ ಮತ್ತು ಆಡಳಿತದ ಮೂಲ ತತ್ವಗಳ ಸಂಪೂರ್ಣಉಲ್ಲಂಘನೆಯಾಗಿದೆ ಎಂದು<br />ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದಲ್ಲಿ ಕೈಗೊಂಡ ₹4,721 ಕೋಟಿ ಮೊತ್ತದ ಯೋಜನೆಗಳನ್ನು ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆಯೇ ಕೆಆರ್ಐಡಿಎಲ್ಗೆ ನೀಡಲಾಗಿದೆ. ಈ ಮೂಲಕ ಕರ್ನಾಟಕ ಪಾರದರ್ಶಕ ಕಾರ್ಯವಿಧಾನಗಳ ಕಾಯ್ದೆ (ಕೆಟಿಪಿಪಿ) ಉಲ್ಲಂಘಿಸಲಾಗಿದೆ ಎಂದು ಬೆಂಗಳೂರು ನವನಿರ್ಮಾಣ ಪಕ್ಷ ಆರೋಪಿಸಿದೆ.</p>.<p>ಬಿಎನ್ಪಿ ಕಳೆದ ಐದು ವರ್ಷಗಳಲ್ಲಿ (2015ರಿಂದ 2020ರವರೆಗಿನ) 19 ವಾರ್ಡ್ಗಳಲ್ಲಿ ಬಿಬಿಎಂಪಿ ಅನುಮೋದಿಸಿದ ಮತ್ತು ಕೈಗೊಂಡ ಯೋಜನೆಗಳ ವಿಶ್ಲೇಷಣೆ ಮಾಡಿದೆ. ಈ ಅವಧಿಯಲ್ಲಿ ಒಟ್ಟು ₹10,018 ಕೋಟಿ ಮೊತ್ತದ ಒಟ್ಟು 28,1314 ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಆದರೆ, ₹4,721 ಕೋಟಿ ಮೊತ್ತದ ಶೇಕಡ 50ರಷ್ಟು ಯೋಜನೆಗಳನ್ನು ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆಯೇ ಕೆಆರ್ಐಡಿಎಲ್ಗೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಸಾಮಾನ್ಯವಾಗಿ ದೊಡ್ಡ ಯೋಜನೆಗಳನ್ನು ಸಣ್ಣ ವಿಭಾಗಗಳಾಗಿ ವಿಭಜಿಸಲಾಗುತ್ತದೆ ಮತ್ತು ಕೆಟಿಪಿಪಿ ಕಾಯ್ದೆಯ ನಿಯಮಗಳಿಂದ ತಪ್ಪಿಸಿಕೊಳ್ಳಲು ಟೆಂಡರ್ಗಳಿಲ್ಲದೆಯೇ ಹಲವಾರು ಗುತ್ತಿಗೆದಾರರಿಗೆ ನೀಡಲಾಗಿದೆ. ಈ ಮೂಲಕ ಸಹಜವಾಗಿಯೇ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಮಾರ್ಗ ಅನುಸರಿಸಲಾಗಿದೆ ಎಂದು ದೂರಿದೆ.</p>.<p>ಒಪ್ಪಂದದ ಗುತ್ತಿಗೆಗಳ ಮೂಲಕ ಹಣ ವರ್ಗಾವಣೆಯ ಅನುಮಾನಸ್ಪದವಾಗಿದ್ದರೂ ಹೆಚ್ಚಿನ ಟೆಂಡರ್ಗಳು ಸಮರ್ಪಕ ಪ್ರಕ್ರಿಯೆಯೂ ಇಲ್ಲದೆಯೇ ನಡೆಯುತ್ತಿರುವುದು ಆಘಾತಕಾರಿಯಾಗಿದೆ. ಕೆಆರ್ಐಡಿಎಲ್ ಈ ಒಪ್ಪಂದಗಳನ್ನು ಕೈಗೆತ್ತಿಕೊಳ್ಳುವ ಏಜೆನ್ಸಿಯಾಗಿದೆ ಮತ್ತು ಪ್ರತಿ ಯೋಜನೆಯಲ್ಲಿಯೂ ಶೇಕಡ 5ರಿಂದ 15ರಷ್ಟು ಕಮಿಷನ್ ನೀಡಲಾಗುತ್ತಿದೆ. ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆ ಮತ್ತು ಕಮಿಷನ್ನೊಂದಿಗೆ ಒಬ್ಬ ಗುತ್ತಿಗೆದಾರರಿಗೆ ನೀಡಲಾದ ಸಾವಿರಾರು ಕೋಟಿ ಯೋಜನೆಗಳು ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ಹೆಚ್ಚಿನ<br />ಅವಕಾಶ ನೀಡುತ್ತದೆ. ಇದು ನಿಯಮಗಳು, ಪ್ರಕ್ರಿಯೆ ಮತ್ತು ಆಡಳಿತದ ಮೂಲ ತತ್ವಗಳ ಸಂಪೂರ್ಣಉಲ್ಲಂಘನೆಯಾಗಿದೆ ಎಂದು<br />ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>