<p><strong>ಬೆಂಗಳೂರು</strong>: ‘ದೆಹಲಿಯ ಮಹಾಪ್ರಭುಗಳು ಈಶಾನ್ಯ ರಾಜ್ಯಗಳ ಯುವಕರಿಗೆ 50 ಸಾವಿರ ಉದ್ಯೋಗಗಳನ್ನು ಕೊಡಿಸುವ ಹೇಳಿಕೆ ಘೋಷಣೆಗಷ್ಟೇ ಸೀಮಿತವಾಗಿದ್ದು, ಇದುವರೆಗೂ ಅನುಷ್ಠಾನವಾಗಿಲ್ಲ’ ಎಂದು ಸಾಹಿತಿ ಜಿ. ರಾಮಕೃಷ್ಣ ಹೇಳಿದರು. </p>.<p>ನವಕರ್ನಾಟಕ ಪ್ರಕಾಶನ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂಮಿಕಾ ಆರ್. ಅವರು ಅನುವಾದಿಸಿದ ‘ಜೊರಾಮಿ’ ಪುಸ್ತಕವನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು. ‘ದೇಶವು ಮೇಕ್ ಇನ್ ಇಂಡಿಯಾದಿಂದ ಪ್ರಾರಂಭವಾಗಿ ವಿಕಸಿತ ಭಾರತದತ್ತ ಸಾಗುತ್ತಿದೆ. ಆದರೆ, ಎಷ್ಟು ವಿಕಸಿತಗೊಂಡಿದೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.</p>.<p>‘ಸ್ವಾಯತ್ತ, ಸ್ವಾತಂತ್ರ್ಯಕ್ಕಾಗಿ ಹಾಗೂ ಪ್ರತ್ಯೇಕ ರಾಜ್ಯದ ಸ್ಥಾನಮಾನ ಪಡೆಯಲು ಮಿಜೋರಾಂನಲ್ಲಿ ಅನೇಕ ವರ್ಷಗಳ ಕಾಲ ಹೋರಾಟ ನಡೆಯಿತು. ಈ ಹೋರಾಟ ಹತ್ತಿಕ್ಕಲು ನಮ್ಮ ಸೈನ್ಯವನ್ನು ನಿಯೋಜಿಸಲಾಗಿತ್ತು. ಈ ಚಳವಳಿಯ ಸಂಪೂರ್ಣ ಚಿತ್ರಣ ಜೊರಾಮಿ ಪುಸ್ತಕದಲ್ಲಿದೆ’ ಎಂದರು. </p>.<p>‘ಇತ್ತೀಚೆಗೆ ಮಣಿಪುರ ಹಾಗೂ ಕಾಶ್ಮೀರದಲ್ಲಿ ನಡೆಯುತ್ತಿರುವ ಹೋರಾಟಗಳಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸುವ ಸ್ವಾತಂತ್ರ್ಯವೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ಆಗುತ್ತಿವೆ. ಇದನ್ನು ಪ್ರಶ್ನಿಸಿದವರಿಗೆ ನಗರ ನಕ್ಸಲರು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ’ ಎಂದು ದೂರಿದರು. </p>.<p>ಪುಸ್ತಕದ ಕುರಿತು ನಿವೃತ್ತ ಉಪನ್ಯಾಸಕಿ ಶೈಲಜಾ ಮಾತನಾಡಿದರು. ನಂತರ ಜೊರಾಮಿ ಪುಸ್ತಕದ ಮೂಲ ಲೇಖಕಿ ಮಾಲ್ಸಾವ್ಮಿ ಜೇಕಬ್ ಅವರೊಂದಿಗೆ ಪತ್ರಕರ್ತ ಡಿ. ಉಮಾಪತಿ ಅವರು ಸಂವಾದ ನಡೆಸಿದರು. </p>.<p>ಹೊಸತು ಪತ್ರಿಕೆಯ ಸಿದ್ದನಗೌಡ ಪಾಟೀಲ, ಲೇಖಕಿ ಆರ್.ಭೂಮಿಕಾ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ದೆಹಲಿಯ ಮಹಾಪ್ರಭುಗಳು ಈಶಾನ್ಯ ರಾಜ್ಯಗಳ ಯುವಕರಿಗೆ 50 ಸಾವಿರ ಉದ್ಯೋಗಗಳನ್ನು ಕೊಡಿಸುವ ಹೇಳಿಕೆ ಘೋಷಣೆಗಷ್ಟೇ ಸೀಮಿತವಾಗಿದ್ದು, ಇದುವರೆಗೂ ಅನುಷ್ಠಾನವಾಗಿಲ್ಲ’ ಎಂದು ಸಾಹಿತಿ ಜಿ. ರಾಮಕೃಷ್ಣ ಹೇಳಿದರು. </p>.<p>ನವಕರ್ನಾಟಕ ಪ್ರಕಾಶನ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂಮಿಕಾ ಆರ್. ಅವರು ಅನುವಾದಿಸಿದ ‘ಜೊರಾಮಿ’ ಪುಸ್ತಕವನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು. ‘ದೇಶವು ಮೇಕ್ ಇನ್ ಇಂಡಿಯಾದಿಂದ ಪ್ರಾರಂಭವಾಗಿ ವಿಕಸಿತ ಭಾರತದತ್ತ ಸಾಗುತ್ತಿದೆ. ಆದರೆ, ಎಷ್ಟು ವಿಕಸಿತಗೊಂಡಿದೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.</p>.<p>‘ಸ್ವಾಯತ್ತ, ಸ್ವಾತಂತ್ರ್ಯಕ್ಕಾಗಿ ಹಾಗೂ ಪ್ರತ್ಯೇಕ ರಾಜ್ಯದ ಸ್ಥಾನಮಾನ ಪಡೆಯಲು ಮಿಜೋರಾಂನಲ್ಲಿ ಅನೇಕ ವರ್ಷಗಳ ಕಾಲ ಹೋರಾಟ ನಡೆಯಿತು. ಈ ಹೋರಾಟ ಹತ್ತಿಕ್ಕಲು ನಮ್ಮ ಸೈನ್ಯವನ್ನು ನಿಯೋಜಿಸಲಾಗಿತ್ತು. ಈ ಚಳವಳಿಯ ಸಂಪೂರ್ಣ ಚಿತ್ರಣ ಜೊರಾಮಿ ಪುಸ್ತಕದಲ್ಲಿದೆ’ ಎಂದರು. </p>.<p>‘ಇತ್ತೀಚೆಗೆ ಮಣಿಪುರ ಹಾಗೂ ಕಾಶ್ಮೀರದಲ್ಲಿ ನಡೆಯುತ್ತಿರುವ ಹೋರಾಟಗಳಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸುವ ಸ್ವಾತಂತ್ರ್ಯವೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ಆಗುತ್ತಿವೆ. ಇದನ್ನು ಪ್ರಶ್ನಿಸಿದವರಿಗೆ ನಗರ ನಕ್ಸಲರು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ’ ಎಂದು ದೂರಿದರು. </p>.<p>ಪುಸ್ತಕದ ಕುರಿತು ನಿವೃತ್ತ ಉಪನ್ಯಾಸಕಿ ಶೈಲಜಾ ಮಾತನಾಡಿದರು. ನಂತರ ಜೊರಾಮಿ ಪುಸ್ತಕದ ಮೂಲ ಲೇಖಕಿ ಮಾಲ್ಸಾವ್ಮಿ ಜೇಕಬ್ ಅವರೊಂದಿಗೆ ಪತ್ರಕರ್ತ ಡಿ. ಉಮಾಪತಿ ಅವರು ಸಂವಾದ ನಡೆಸಿದರು. </p>.<p>ಹೊಸತು ಪತ್ರಿಕೆಯ ಸಿದ್ದನಗೌಡ ಪಾಟೀಲ, ಲೇಖಕಿ ಆರ್.ಭೂಮಿಕಾ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>