<p><strong>ಬೆಂಗಳೂರು: </strong>ಪತ್ನಿ ಇದ್ದರೂ ತನ್ನನ್ನು ಮದುವೆಯಾಗುವಂತೆ ನಾದಿನಿಯನ್ನು ಪೀಡಿಸಿ, ಅಪಹರಣ ಮಾಡಿದ್ದ ಆರೋಪದಡಿ ದೇವರಾಜ್ ಎಂಬಾತನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.</p>.<p>‘ನಗರದ ಶಾಪಿಂಗ್ ಮಾಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿಯನ್ನು ಜ. 22ರಂದು ಅಪಹರಣ ಮಾಡಲಾಗಿತ್ತು. ಈ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದರು. ಹಾಸನದ ಸಕಲೇಶಪುರದಲ್ಲಿದ್ದ ಆರೋಪಿ ದೇವರಾಜ್ ಹಾಗೂ ಆತನ ಸಹಚರರನ್ನು ಬಂಧಿಸಲಾಗಿದ್ದು, ಯುವತಿಯನ್ನು ರಕ್ಷಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಆರೋಪಿ ದೇವರಾಜ್, ಯುವತಿಯ ಅಕ್ಕನನ್ನು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ. ಯುವತಿ ಮೇಲೂ ಕಣ್ಣು ಹಾಕಿ, ಅವರನ್ನೂ ಮದುವೆಯಾಗಲು ಮುಂದಾಗಿದ್ದ. ಯುವತಿ ಹಾಗೂ ಅವರ ಕುಟುಂಬದವರನ್ನು ಪೀಡಿಸುತ್ತಿದ್ದ.’</p>.<p>‘ಮದುವೆಗೆ ಯುವತಿ ಒಪ್ಪಿರಲಿಲ್ಲ. ಅದೇ ವಿಚಾರವಾಗಿ ಆರೋಪಿ ಹಲವು ಬಾರಿ ಮನೆಯಲ್ಲಿ ಗಲಾಟೆ ಮಾಡಿದ್ದ. ಯುವತಿ ಕೆಲಸಕ್ಕೆ ಹೋಗುವುದನ್ನು ತಿಳಿದಿದ್ದ ಆರೋಪಿ, ಅಪಹರಣ ಮಾಡಿ ಮದುವೆಯಾಗಲು ಸಂಚು ರೂಪಿಸಿದ್ದ. ಇದಕ್ಕಾಗಿ ತನ್ನ ಸಹಚರರ ಸಹಾಯ ಪಡೆದಿದ್ದ‘ ಎಂದೂ ತಿಳಿಸಿದರು.</p>.<p>‘ರಸ್ತೆಯಲ್ಲಿ ನಾದಿನಿಯನ್ನು ಅಡ್ಡಗಟ್ಟಿದ್ದ ಆರೋಪಿ, ಕಾರಿನಲ್ಲಿ ಅಪಹರಣ ಮಾಡಿ ಸಕಲೇಶಪುರಕ್ಕೆ ಹೋಗಿದ್ದ. ಅಲ್ಲಿಯೇ ಯುವತಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದ‘ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಪತ್ನಿ ಇದ್ದರೂ ತನ್ನನ್ನು ಮದುವೆಯಾಗುವಂತೆ ನಾದಿನಿಯನ್ನು ಪೀಡಿಸಿ, ಅಪಹರಣ ಮಾಡಿದ್ದ ಆರೋಪದಡಿ ದೇವರಾಜ್ ಎಂಬಾತನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.</p>.<p>‘ನಗರದ ಶಾಪಿಂಗ್ ಮಾಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿಯನ್ನು ಜ. 22ರಂದು ಅಪಹರಣ ಮಾಡಲಾಗಿತ್ತು. ಈ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದರು. ಹಾಸನದ ಸಕಲೇಶಪುರದಲ್ಲಿದ್ದ ಆರೋಪಿ ದೇವರಾಜ್ ಹಾಗೂ ಆತನ ಸಹಚರರನ್ನು ಬಂಧಿಸಲಾಗಿದ್ದು, ಯುವತಿಯನ್ನು ರಕ್ಷಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಆರೋಪಿ ದೇವರಾಜ್, ಯುವತಿಯ ಅಕ್ಕನನ್ನು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ. ಯುವತಿ ಮೇಲೂ ಕಣ್ಣು ಹಾಕಿ, ಅವರನ್ನೂ ಮದುವೆಯಾಗಲು ಮುಂದಾಗಿದ್ದ. ಯುವತಿ ಹಾಗೂ ಅವರ ಕುಟುಂಬದವರನ್ನು ಪೀಡಿಸುತ್ತಿದ್ದ.’</p>.<p>‘ಮದುವೆಗೆ ಯುವತಿ ಒಪ್ಪಿರಲಿಲ್ಲ. ಅದೇ ವಿಚಾರವಾಗಿ ಆರೋಪಿ ಹಲವು ಬಾರಿ ಮನೆಯಲ್ಲಿ ಗಲಾಟೆ ಮಾಡಿದ್ದ. ಯುವತಿ ಕೆಲಸಕ್ಕೆ ಹೋಗುವುದನ್ನು ತಿಳಿದಿದ್ದ ಆರೋಪಿ, ಅಪಹರಣ ಮಾಡಿ ಮದುವೆಯಾಗಲು ಸಂಚು ರೂಪಿಸಿದ್ದ. ಇದಕ್ಕಾಗಿ ತನ್ನ ಸಹಚರರ ಸಹಾಯ ಪಡೆದಿದ್ದ‘ ಎಂದೂ ತಿಳಿಸಿದರು.</p>.<p>‘ರಸ್ತೆಯಲ್ಲಿ ನಾದಿನಿಯನ್ನು ಅಡ್ಡಗಟ್ಟಿದ್ದ ಆರೋಪಿ, ಕಾರಿನಲ್ಲಿ ಅಪಹರಣ ಮಾಡಿ ಸಕಲೇಶಪುರಕ್ಕೆ ಹೋಗಿದ್ದ. ಅಲ್ಲಿಯೇ ಯುವತಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದ‘ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>