<p><strong>ಬೆಂಗಳೂರು:</strong> ಕಾಡು ಕುರುಬ ಮತ್ತು ಕಾಡುಗೊಲ್ಲ ಸಮುದಾಯಗಳ ಗುಣ ಲಕ್ಷಣಗಳನ್ನೇ ಹೊಂದಿರುವ ಹಳ್ಳಿಕಾರ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ–1ಕ್ಕೆ ಸೇರಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯಕ್ ಅವರಿಗೆ ರಾಜ್ಯ ಹಳ್ಳಿಕಾರರ ಸಂಘ ಮನವಿ ಮಾಡಿದೆ.</p>.<p>ಹಳ್ಳಿಕಾರ ಸಮುದಾಯದ ಕುಲಕಸುಬು ಪಶುಸಂಗೋಪನೆ. ಶತಮಾನಗಳಿಂದ ಸಾಕಿ ಸಲುಹಿದ ರಾಸುಗಳಿಗೆ ತನ್ನದೇ ಜಾತಿಯ ಹೆಸರು ಬಂದಿದೆ. ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಈಟಿ, ಭರ್ಜಿ ಹಾಗೂ ಕಠಾರಿಗಳನ್ನು ಉಪಯೋಗಿಸುತ್ತಿದ್ದು ಇತಿಹಾಸದ ಪುಟಗಳಲ್ಲಿ ಕಂಡು ಬಂದಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್ ತಿಳಿಸಿದ್ದಾರೆ.</p>.<p>ಸಮುದಾಯದ ಆಚಾರ–ವಿಚಾರಗಳು ಕಾಡುಕುರುಬ ಮತ್ತು ಕಾಡುಗೊಲ್ಲ ಸಮುದಾಯದ ಆಚಾರ–ವಿಚಾರಗಳಿಗೆ ತಾಳೆಯಾಗುತ್ತವೆ. ಕುಟುಂಬಗಳ ನಿರ್ವಹಣೆ ಮಾಡಲಾಗದೇ ಶೇಕಡ 75ರಷ್ಟು ಮಕ್ಕಳನ್ನು 7ರಿಂದ 10ನೇ ತರಗತಿಯೊಳಗೆ ಶಿಕ್ಷಣದಿಂದ ಬಿಡಿಸಿ ನಗರ ಪ್ರದೇಶಗಳಿಗೆ ವಲಸೆ ಕಳುಹಿಸುತ್ತಿರುವುದು ಸಾಮಾನ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. </p>.<p>ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹಳ್ಳಿಕಾರ ಸಮುದಾಯವನ್ನು ಒಕ್ಕಲಿಗ ಸಮುದಾಯದ ಕೆಳಗೆ ನಮೂದಿಸಿರುವುದರಿಂದ ನ್ಯಾಯ ದೊರಕಿಲ್ಲ. ಪ್ರವರ್ಗ–3ಎ ಪಟ್ಟಿಯಿಂದ ಹೊರತುಪಡಿಸಿ ಪ್ರವರ್ಗ–1ಕ್ಕೆ ಸೇರ್ಪಡೆ ಮಾಡಬೇಕು. ದಾಖಲೆಗಳನ್ನು ಪರಿಶೀಲಿಸಿ, ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ, ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಾಡು ಕುರುಬ ಮತ್ತು ಕಾಡುಗೊಲ್ಲ ಸಮುದಾಯಗಳ ಗುಣ ಲಕ್ಷಣಗಳನ್ನೇ ಹೊಂದಿರುವ ಹಳ್ಳಿಕಾರ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ–1ಕ್ಕೆ ಸೇರಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯಕ್ ಅವರಿಗೆ ರಾಜ್ಯ ಹಳ್ಳಿಕಾರರ ಸಂಘ ಮನವಿ ಮಾಡಿದೆ.</p>.<p>ಹಳ್ಳಿಕಾರ ಸಮುದಾಯದ ಕುಲಕಸುಬು ಪಶುಸಂಗೋಪನೆ. ಶತಮಾನಗಳಿಂದ ಸಾಕಿ ಸಲುಹಿದ ರಾಸುಗಳಿಗೆ ತನ್ನದೇ ಜಾತಿಯ ಹೆಸರು ಬಂದಿದೆ. ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಈಟಿ, ಭರ್ಜಿ ಹಾಗೂ ಕಠಾರಿಗಳನ್ನು ಉಪಯೋಗಿಸುತ್ತಿದ್ದು ಇತಿಹಾಸದ ಪುಟಗಳಲ್ಲಿ ಕಂಡು ಬಂದಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್ ತಿಳಿಸಿದ್ದಾರೆ.</p>.<p>ಸಮುದಾಯದ ಆಚಾರ–ವಿಚಾರಗಳು ಕಾಡುಕುರುಬ ಮತ್ತು ಕಾಡುಗೊಲ್ಲ ಸಮುದಾಯದ ಆಚಾರ–ವಿಚಾರಗಳಿಗೆ ತಾಳೆಯಾಗುತ್ತವೆ. ಕುಟುಂಬಗಳ ನಿರ್ವಹಣೆ ಮಾಡಲಾಗದೇ ಶೇಕಡ 75ರಷ್ಟು ಮಕ್ಕಳನ್ನು 7ರಿಂದ 10ನೇ ತರಗತಿಯೊಳಗೆ ಶಿಕ್ಷಣದಿಂದ ಬಿಡಿಸಿ ನಗರ ಪ್ರದೇಶಗಳಿಗೆ ವಲಸೆ ಕಳುಹಿಸುತ್ತಿರುವುದು ಸಾಮಾನ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. </p>.<p>ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹಳ್ಳಿಕಾರ ಸಮುದಾಯವನ್ನು ಒಕ್ಕಲಿಗ ಸಮುದಾಯದ ಕೆಳಗೆ ನಮೂದಿಸಿರುವುದರಿಂದ ನ್ಯಾಯ ದೊರಕಿಲ್ಲ. ಪ್ರವರ್ಗ–3ಎ ಪಟ್ಟಿಯಿಂದ ಹೊರತುಪಡಿಸಿ ಪ್ರವರ್ಗ–1ಕ್ಕೆ ಸೇರ್ಪಡೆ ಮಾಡಬೇಕು. ದಾಖಲೆಗಳನ್ನು ಪರಿಶೀಲಿಸಿ, ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ, ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>