<p><strong>ಬೆಂಗಳೂರು:</strong> ‘ಗೋರಕ್ಷನಾಥರು ನಾಥ ಪಂಥಕ್ಕೆ ಅಡಿಪಾಯ ಹಾಕಿದ ಮೂಲ ಪುರುಷ. ಅವರು ಎರಡನೇ ಶತಮಾನಕ್ಕೆ ಸೇರಿದವರು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.</p>.<p>ಆದಿಚುಂಚನಗಿರಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರತಿಷ್ಠಾನವು ವಿಜಯನಗರದಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ‘ನಾಥ ಪರಂಪರೆಯ ದರ್ಶನ–ಸ್ವರೂಪ’ ಕುರಿತ ವಿಚಾರ ಸಂಕಿರಣದಲ್ಲಿ ಶನಿವಾರ ಮಾತನಾಡಿದರು.</p>.<p>‘ಚಾಮರಸನ ಪ್ರಭುಲಿಂಗ ಲೀಲೆಯಲ್ಲಿ ಅಲ್ಲಮಪ್ರಭು, ಗೋರಕ್ಷನಾಥರನ್ನು ಸೋಲಿಸಿದ ಉಲ್ಲೇಖವಿದೆ. ಅವರಿಗೂ ನಾಥ ಪಂಥದ ಮೂಲ ಪುರುಷರಾಗಿರುವ ಗೋರಕ್ಷನಾಥರಿಗೂ ಯಾವ ಸಂಬಂಧವೂ ಇಲ್ಲ.ನಾಥ ಪರಂಪರೆಯ ಗ್ರಂಥಗಳು ಸಂಸ್ಕೃತ ಸೇರಿದಂತೆ ಇತರೆ ಭಾಷೆಗಳಲ್ಲಿವೆ. ಅವುಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸವಾಗುತ್ತಿದೆ’ ಎಂದರು.</p>.<p>ಕವಿ ಎಚ್.ಎಸ್.ಶಿವಪ್ರಕಾಶ್ ‘ಬಹುಸಂಖ್ಯಾತ ನಾಥ ಪರಂಪರೆಯ ಬಗ್ಗೆ ಅಧ್ಯಯನಗಳು ನಡೆಯಬೇಕು. ನಾಥ ಪರಂಪರೆಯಲ್ಲಿ ಶಿವನೆಂದರೆ ನಮ್ಮೊಳಗೆ ಅಡಗಿರುವ ತತ್ವ ಅರಿಯುವುದು. ಪಂಚಭೂತದಿಂದ ಕೂಡಿರುವ ಶರೀರದಿಂದ ಆಧ್ಯಾತ್ಮ ಸತ್ಯ ತಿಳಿಯುವುದಾಗಿದೆ’ ಎಂದು ತಿಳಿಸಿದರು.</p>.<p>ಲೇಖಕ ಡಾ.ಟಿ.ಎಸ್.ವಾಸುದೇವಮೂರ್ತಿ ‘ಶೈವ, ಬೌದ್ಧ ಧರ್ಮಗಳು ನಾಥ ಪಂಥದ ಮೇಲೆ ಪ್ರಭಾವ ಬೀರಿವೆಯೋ ಅಥವಾ ನಾಥ ಪರಂಪರೆಯೇ ಶೈವ-ಬೌದ್ಧ ಧರ್ಮಗಳ ಮೇಲೆ ಪ್ರಭಾವಿಸಿದೆಯೋ ಎಂಬುದನ್ನು ಗುರುತಿಸುವುದು ಕಷ್ಟ.ಆಧ್ಯಾತ್ಮಿಕವಾಗಿ ಭಾರತವನ್ನು ಒಗ್ಗೂಡಿಸಿರುವುದು ನಾಥ ಪರಂಪರೆ. ಇದು ಯಾವುದೇ ಜಾತಿಗೆ ಸೀಮಿತವಾಗಿಲ್ಲ’ ಎಂದರು.</p>.<p>ಪ್ರೊ.ಚಂದ್ರಶೇಖರಯ್ಯ ‘ನಾಥ ಪೀಠದ ಶಕ್ತಿಕೇಂದ್ರ ಆದಿಚುಂಚನಗಿರಿ. ಬದುಕಿನ ಆಧ್ಯಾತ್ಮಿಕತೆಯನ್ನು ತಿಳಿಸಿಕೊಡುವ ಬಹಳ ದೊಡ್ಡ ಪರಂಪರೆ ನಾಥ ಪರಂಪರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಗೋರಕ್ಷನಾಥರು ನಾಥ ಪಂಥಕ್ಕೆ ಅಡಿಪಾಯ ಹಾಕಿದ ಮೂಲ ಪುರುಷ. ಅವರು ಎರಡನೇ ಶತಮಾನಕ್ಕೆ ಸೇರಿದವರು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.</p>.<p>ಆದಿಚುಂಚನಗಿರಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರತಿಷ್ಠಾನವು ವಿಜಯನಗರದಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ‘ನಾಥ ಪರಂಪರೆಯ ದರ್ಶನ–ಸ್ವರೂಪ’ ಕುರಿತ ವಿಚಾರ ಸಂಕಿರಣದಲ್ಲಿ ಶನಿವಾರ ಮಾತನಾಡಿದರು.</p>.<p>‘ಚಾಮರಸನ ಪ್ರಭುಲಿಂಗ ಲೀಲೆಯಲ್ಲಿ ಅಲ್ಲಮಪ್ರಭು, ಗೋರಕ್ಷನಾಥರನ್ನು ಸೋಲಿಸಿದ ಉಲ್ಲೇಖವಿದೆ. ಅವರಿಗೂ ನಾಥ ಪಂಥದ ಮೂಲ ಪುರುಷರಾಗಿರುವ ಗೋರಕ್ಷನಾಥರಿಗೂ ಯಾವ ಸಂಬಂಧವೂ ಇಲ್ಲ.ನಾಥ ಪರಂಪರೆಯ ಗ್ರಂಥಗಳು ಸಂಸ್ಕೃತ ಸೇರಿದಂತೆ ಇತರೆ ಭಾಷೆಗಳಲ್ಲಿವೆ. ಅವುಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸವಾಗುತ್ತಿದೆ’ ಎಂದರು.</p>.<p>ಕವಿ ಎಚ್.ಎಸ್.ಶಿವಪ್ರಕಾಶ್ ‘ಬಹುಸಂಖ್ಯಾತ ನಾಥ ಪರಂಪರೆಯ ಬಗ್ಗೆ ಅಧ್ಯಯನಗಳು ನಡೆಯಬೇಕು. ನಾಥ ಪರಂಪರೆಯಲ್ಲಿ ಶಿವನೆಂದರೆ ನಮ್ಮೊಳಗೆ ಅಡಗಿರುವ ತತ್ವ ಅರಿಯುವುದು. ಪಂಚಭೂತದಿಂದ ಕೂಡಿರುವ ಶರೀರದಿಂದ ಆಧ್ಯಾತ್ಮ ಸತ್ಯ ತಿಳಿಯುವುದಾಗಿದೆ’ ಎಂದು ತಿಳಿಸಿದರು.</p>.<p>ಲೇಖಕ ಡಾ.ಟಿ.ಎಸ್.ವಾಸುದೇವಮೂರ್ತಿ ‘ಶೈವ, ಬೌದ್ಧ ಧರ್ಮಗಳು ನಾಥ ಪಂಥದ ಮೇಲೆ ಪ್ರಭಾವ ಬೀರಿವೆಯೋ ಅಥವಾ ನಾಥ ಪರಂಪರೆಯೇ ಶೈವ-ಬೌದ್ಧ ಧರ್ಮಗಳ ಮೇಲೆ ಪ್ರಭಾವಿಸಿದೆಯೋ ಎಂಬುದನ್ನು ಗುರುತಿಸುವುದು ಕಷ್ಟ.ಆಧ್ಯಾತ್ಮಿಕವಾಗಿ ಭಾರತವನ್ನು ಒಗ್ಗೂಡಿಸಿರುವುದು ನಾಥ ಪರಂಪರೆ. ಇದು ಯಾವುದೇ ಜಾತಿಗೆ ಸೀಮಿತವಾಗಿಲ್ಲ’ ಎಂದರು.</p>.<p>ಪ್ರೊ.ಚಂದ್ರಶೇಖರಯ್ಯ ‘ನಾಥ ಪೀಠದ ಶಕ್ತಿಕೇಂದ್ರ ಆದಿಚುಂಚನಗಿರಿ. ಬದುಕಿನ ಆಧ್ಯಾತ್ಮಿಕತೆಯನ್ನು ತಿಳಿಸಿಕೊಡುವ ಬಹಳ ದೊಡ್ಡ ಪರಂಪರೆ ನಾಥ ಪರಂಪರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>